ಆ್ಯಪ್ನಗರ

ಅಡಕೆ ಕ್ಷೇತ್ರಕ್ಕೆ 52.57ಕೋಟಿ ರೂ.ವಿಮಾ ಪರಿಹಾರ

ಶಿರಸಿ : ಹವಾಮಾನ ಆಧಾರಿತ ಬೆಳೆವಿಮೆ ಹಾಗೂ ಫಸಲ್‌ ಬಿಮಾ ಯೋಜನೆಯಡಿ ಭತ್ತ ಮತ್ತು ಅಡಕೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿಒಟ್ಟು 71.90 ಕೋಟಿ ರೂ. ವಿಮಾ ಹಣ 44,815 ರೈತರ ಖಾತೆಗೆ ಜಮಾ ಆಗಿದೆ ಎಂದು ಜಿಲ್ಲಾಮಧ್ಯವರ್ತಿ ಬ್ಯಾಂಕ್‌ (ಕೆಡಿಸಿಸಿ) ಅಧ್ಯಕ್ಷ ಎಸ್‌.ಎಲ್‌.ಘೋಟ್ನೆಕರ್‌ ತಿಳಿಸಿದರು.

Vijaya Karnataka 18 Sep 2019, 5:00 am
ಶಿರಸಿ : ಹವಾಮಾನ ಆಧಾರಿತ ಬೆಳೆವಿಮೆ ಹಾಗೂ ಫಸಲ್‌ ಬಿಮಾ ಯೋಜನೆಯಡಿ ಭತ್ತ ಮತ್ತು ಅಡಕೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿಒಟ್ಟು 71.90 ಕೋಟಿ ರೂ. ವಿಮಾ ಹಣ 44,815 ರೈತರ ಖಾತೆಗೆ ಜಮಾ ಆಗಿದೆ ಎಂದು ಜಿಲ್ಲಾಮಧ್ಯವರ್ತಿ ಬ್ಯಾಂಕ್‌ (ಕೆಡಿಸಿಸಿ) ಅಧ್ಯಕ್ಷ ಎಸ್‌.ಎಲ್‌.ಘೋಟ್ನೆಕರ್‌ ತಿಳಿಸಿದರು.
Vijaya Karnataka Web 52 57 crores insurance solution for adakke sector
ಅಡಕೆ ಕ್ಷೇತ್ರಕ್ಕೆ 52.57ಕೋಟಿ ರೂ.ವಿಮಾ ಪರಿಹಾರ


ಪಟ್ಟಣದಲ್ಲಿಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು ಬ್ಯಾಂಕಿನ ಕಾರ್ಯ ಚಟುವಟಿಕೆಗಳು, ಪ್ರಗತಿ ವಿವರ ನೀಡಿದರು. 2018ನೇ ಮುಂಗಾರು ಹಂಗಾಮಿನ ಫಸಲ್‌ ಬಿಮಾ ಯೋಜನೆಯಡಿ ಭತ್ತದ ಬೆಳೆಗೆ ಸಂಬಂಧಿಸಿ 13,780 ಮಂದಿ ರೈತರಿಗೆ 19.30 ಕೋಟಿ ರೂ.ಜಮಾ ಆಗಿದೆ. ಇನ್ನು ಹವಾಮಾನ ಆಧಾರಿತ ಬೆಳೆವಿಮಾ ಯೋಜನೆಯಡಿ ಅಡಕೆ ಕ್ಷೇತ್ರಕ್ಕೆ ಸಂಬಂಧಿಸಿ ಮೊದಲ ಹಂತದಲ್ಲಿ16.26 ಕೋಟಿ ರೂ. ಜಮಾ ಆಗಿತ್ತು. ಇದೀಗ ಎರಡು ದಿನಗಳಲ್ಲಿಮತ್ತೆ 25,519 ರೈತರ ಖಾತೆಗಳಿಗೆ ಒಟ್ಟು 36.31 ಕೋಟಿ ರೂ. ಜಮಾ ಆಗಿದೆ. ಈ ಮೂಲಕ ಅಡಕೆ ಕ್ಷೇತ್ರಕ್ಕೆ 52.57 ಕೋಟಿ ರೂ. ವಿಮೆ ದೊರೆತಂತಾಗಿದೆ ಎಂದರು.

214 ಕೋಟಿ ಮನ್ನಾ ಬಾಕಿ : ರಾಜ್ಯ ಸರಕಾರ ಬೆಳೆಸಾಲ ಯೋಜನೆಯಡಿ ಜಿಲ್ಲೆಗೆ 86815 ರೈತರ 521 ಕೋಟಿ ರೂ. ಮನ್ನಾ ಬರಬೇಕಿತ್ತು. ಅದರಲ್ಲಿಕಳೆದ ಮೇ ತಿಂಗಳಲ್ಲಿ40 ಸಾವಿರ ರೈತರ 176.78 ಕೋಟಿ ಸಾಲ ಮನ್ನಾ ಹಣ ಬಿಡುಗಡೆಯಾಗಿದೆ. ಜುಲೈ ತಿಂಗಳಲ್ಲಿ17,684 ರೈತರ 129.94 ರೂ. ಮನ್ನಾ ರಖಂ ಬಂದಿದ್ದು, ಈವರೆಗೆ ಜಿಲ್ಲೆಗೆ 57,003 ರೈತರ 306.72 ಕೋಟಿ ರೂ.ಮನ್ನಾ ಹಣ ಬಂದಂತಾಗಿದೆ. ಇನ್ನೂ 29,112 ರೈತರ 214 ಕೋಟಿ ರೂ. ಬರಬೇಕಿದೆ. ಸಾಲಮನ್ನಾ ರಖಂ ಬಿಡುಗಡೆ ವಿಳಂಬವಾಗಿರುವುದರಿಂದ ಕೆಡಿಸಿಸಿ ಬ್ಯಾಂಕ್‌ಗೆ 7.85 ಕೋಟಿ ರೂ.ಬಡ್ಡಿ ಹಾನಿಯಾಗಿದೆ. ಬಾಕಿ ಇರುವ ಸಾಲಮನ್ನಾ ಹಣ ಬಿಡುಗಡೆಗೆ ಸರಕಾರದ ಮಟ್ಟದಲ್ಲಿಪ್ರಯತ್ನಿಸುತ್ತಿರುವುದಾಗಿ ಘೋಟ್ನೆಕರ್‌ ತಿಳಿಸಿದರು.

ಬ್ಯಾಂಕ್‌ ಉಪಾಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ, ನಿರ್ದೇಶಕರಾದ ಜಿ.ಟಿ.ಹೆಗಡೆ ತಟ್ಟೀಸರ, ಜಿ.ಆರ್‌.ಹೆಗಡೆ ಸೋಂದಾ, ಮೋಹನದಾಸ್‌ ನಾಯಕ, ಉಮೇಶ ಕಿಣಿ, ವ್ಯವಸ್ಥಾಪಕ ನಿರ್ದೇಶಕ ಎಸ್‌.ಪಿ.ಚವ್ಹಾಣ ಮುಂತಾದವರು ಪಾಲ್ಗೊಂಡಿದ್ದರು.

8.38 ಕೋಟಿ ರೂ.ಲಾಭ: 99 ವರ್ಷ ಸೇವೆ ಸಲ್ಲಿಸಿ 100ನೇ ವರ್ಷಕ್ಕೆ ಪದಾರ್ಪಣೆ ಮಾಡಿರುವ ಬ್ಯಾಂಕ್‌ 2018-19ನೇ ಸಾಲಿನಲ್ಲಿಸಹಕಾರ ಬ್ಯಾಂಕ್‌, ಸಂಘಗಳಿಗೆ ಹಾಗೂ ವ್ಯಕ್ತಿಗಳಿಗೆ ಒಟ್ಟು 1536 ಕೋಟಿ ರೂ. ಸಾಲ ನೀಡಿತ್ತು. ಸಹಕಾರಿ ಸಂಘಗಳ ಮೂಲಕ 683.95ಕೋಟಿ ರೂ.ಬೆಳೆಸಾಲ ನೀಡಿದೆ. 77.42 ಕೋಟಿ ರೂ. ಮಾಧ್ಯಮಿಕ ಸಾಲ ವಿತರಿಸಿದೆ. ಕಳೆದ ಸಾಲಿನಲ್ಲಿ194.79 ಕೋಟಿ ರೂ.ಆದಾಯ ಬಂದಿದ್ದು, 8.38 ಕೋಟಿ ರೂ.ಲಾಭ ಗಳಿಸಿದೆ. ಆರ್ಥಿಕ ವರ್ಷಾಂತ್ಯಕ್ಕೆ ಬ್ಯಾಂಕಿನ ದುಡಿಯುವ ಬಂಡವಾಳ 2717 ಕೋಟಿ ರೂ.ಇದೆ. ಶೇರು ಬಂಡವಾಳ 69.87 ಕೋಟಿ ರೂ.ಏರಿಕೆಯಾಗಿದೆ. ಹಾಗೇ ಠೇವುಗಳು 2021 ಕೋಟಿ ರೂ.ಹೆಚ್ಚಳವಾಗಿದೆ ಎಂದು ಕೆಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಸ್‌.ಎಲ್‌.ಘೋಟ್ನೆಕರ್‌ ತಿಳಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ