ಆ್ಯಪ್ನಗರ

ಸಾಲಾಗಿ ನಿಂತ 7500 ಲಾರಿ

ಅಂಕೋಲಾ : ಕಳೆದ 5 ದಿನಗಳಿಂದ ಭೀಕರ ಸ್ವರೂಪ ತಾಳಿದ ಮಳೆಯ ಆರ್ಭಟಕ್ಕೆ ರಸ್ತೆಯಲ್ಲಿ ನೀರು ತುಂಬಿ ಯಲ್ಲಾಪುರದಿಂದ ಅಂಕೋಲಾದ ತನಕ ನಿಂತಿರುವ 7500ಕ್ಕೂ ಹೆಚ್ಚು ಲಾರಿಗಳು ನಿಂತಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿದ್ದು, ವಾಹನ ಚಾಲಕ ಹಾಗೂ ಕ್ಲೀನರ್‌ರ ಪರಿಸ್ಥಿತಿ ನರಕಸದೃಶ್ಯವಾಗಿದೆ.

Vijaya Karnataka 10 Aug 2019, 5:00 am
ಅಂಕೋಲಾ : ಕಳೆದ 5 ದಿನಗಳಿಂದ ಭೀಕರ ಸ್ವರೂಪ ತಾಳಿದ ಮಳೆಯ ಆರ್ಭಟಕ್ಕೆ ರಸ್ತೆಯಲ್ಲಿ ನೀರು ತುಂಬಿ ಯಲ್ಲಾಪುರದಿಂದ ಅಂಕೋಲಾದ ತನಕ ನಿಂತಿರುವ 7500ಕ್ಕೂ ಹೆಚ್ಚು ಲಾರಿಗಳು ನಿಂತಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿದ್ದು, ವಾಹನ ಚಾಲಕ ಹಾಗೂ ಕ್ಲೀನರ್‌ರ ಪರಿಸ್ಥಿತಿ ನರಕಸದೃಶ್ಯವಾಗಿದೆ.
Vijaya Karnataka Web KWR-9ANK1B
ಅಂಕೋಲಾ ಹೆಬ್ಬುಳದ ಐಲ್ಯಾಂಡ್‌ ಹೋಟೆಲ್‌ ಬಳಿ ಲಾರಿಗಳು ಮುಳುಗಿವೆ.


ತಾಲೂಕಾಡಳಿತ ಮತ್ತು ವಿವಿಧ ಸಂಘಟನೆಗಳು ಊಟ ಪೂರೈಸುತ್ತಾರಾದರೂ ಭಾರಿ ಪ್ರಮಾಣದಲ್ಲಿರುವ ಚಾಲಕರಿಗೆ ಊಟ ಸರಿಯಾಗಿ ಸಿಗದೇ ಪರದಾಡುವಂತಾಗಿದೆ.

ಮುಳುಗಿದ ಲಾರಿಗಳು : ರಸ್ತೆಯಲ್ಲಿ ಏಕಾಏಕಿ ನುಗ್ಗಿದ ನೀರು ತಗ್ಗು ಪ್ರದೇಶದ ರಸ್ತೆಗಳಲ್ಲಿ ನಿಂತಿರುವ ಲಾರಿಗಳನ್ನು ಸಂಪೂರ್ಣ ಮುಳುಗಿಸಿದೆ. 73ಕ್ಕೂ ಹೆಚ್ಚು ಲಾರಿಗಳು ಸಂಪೂರ್ಣ ಜಲಾವೃತಗೊಂಡಿವೆ. ಚಾಲಕರನ್ನು ಪೊಲೀಸ್‌ ಇಲಾಖೆ ರಕ್ಷಿಸಿದೆ. ನೀರಿನಲ್ಲಿ ಮುಳುಗಿರುವ 1300ಕ್ಕೂ ಹೆಚ್ಚು ಲಾರಿ ಚಾಲಕ ಹಾಗೂ ಕ್ಲೀನರ್‌ ಅವರನ್ನು ಸುರಕ್ಷಿತ ಸ್ಥಳಗಳಿಗೆ ದೋಣಿಯ ಸಹಾಯದಿಂದ ಸಾಗಿಸಲಾಗಿದೆ.

ಸ್ಥಗಿತಗೊಂಡ ರಸ್ತೆ ಸಂಚಾರ : ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊನ್ನಳ್ಳಿ, ಸುಂಕಸಾಳ, ರಾಮನಗುಳಿ, ವಾಸಕುದ್ರಿಗೆಯ ಕುದ್ರಿಗೆ, ಅಂಬೆರ ಹಿತ್ತಲ್‌, ಮಾವಿನಗದ್ದೆ, ಇನ್ನೆರಡು ಸ್ಥಳಗಳಲ್ಲಿ ಆಂದ್ಲೆ, ಹಿಲ್ಲೂರು ಮಾರ್ಗದ 3 ಸ್ಥಳಗಳಲ್ಲಿ ನೀರು ತುಂಬಿ ರಸ್ತೆ ಸಂಪೂರ್ಣ ಸ್ಥಗಿತಗೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ