ಆ್ಯಪ್ನಗರ

ಜಲಪಾತ್ರೆ ನೋಡೋದೇ ಕಣ್ಣಿಗೆ ಹಬ್ಬ

ಯಲ್ಲಾಪುರ : ರಚ್ಚೆ ಹಿಡಿದಂತೆ ಕಳೆದ ಹಲವು ದಿನಗಳಿಂದ ನಿರಂತರಾಗಿ ಧಾರೆ,ಧಾರೆಯಾಗಿ ಸುರಿಯುತ್ತಿದ್ದ ಮಳೆಯು ಕಳೆದ ಎರಡು ದಿನಗಳಿಂದ ಕಾಣದಾಗಿದೆ. ವರುಣನ ಕೃಪೆಯಿಂದ ದೀಪಾವಳಿ ಸಂಭ್ರಮಕ್ಕೆ ಯಾವುದೇ ತೊಂದರೆಯಾಗಿಲ್ಲ. ದಾಖಲೆ ಎಂಬಂತೆ ಸತತವಾಗಿ ಐದು ತಿಂಗಳುಗಳ ಕಾಲ ಮುಗಿಲು ಬಿರಿದಂತೆ ಸುರಿದ ಮಳೆಯಿಂದಾಗಿ ತಾಲೂಕಿನ ನಾನಾ ಕೆರೆಗಳು ತುಂಬಿ ನಿಂತಿದ್ದು, ಶುದ್ಧ,ಸ್ಫಟಿಕ ಸದೃಶವಾದ ಜಲರಾಶಿಯಿಂದ ತುಂಬಿ ತುಳುಕುತ್ತಿರುವ ಜಲಪಾತ್ರೆಗಳೆಂದೆ ಕರೆಯಲ್ಪಡುವ ಈ ಕೆರೆಗಳನ್ನು ನೋಡುವುದೇ ಕಣ್ಣಿಗೊಂದು ಸೊಬಗು ಎಂಬಂತಾಗಿದೆ.

Vijaya Karnataka 30 Oct 2019, 5:00 am
ಯಲ್ಲಾಪುರ : ರಚ್ಚೆ ಹಿಡಿದಂತೆ ಕಳೆದ ಹಲವು ದಿನಗಳಿಂದ ನಿರಂತರಾಗಿ ಧಾರೆ,ಧಾರೆಯಾಗಿ ಸುರಿಯುತ್ತಿದ್ದ ಮಳೆಯು ಕಳೆದ ಎರಡು ದಿನಗಳಿಂದ ಕಾಣದಾಗಿದೆ. ವರುಣನ ಕೃಪೆಯಿಂದ ದೀಪಾವಳಿ ಸಂಭ್ರಮಕ್ಕೆ ಯಾವುದೇ ತೊಂದರೆಯಾಗಿಲ್ಲ. ದಾಖಲೆ ಎಂಬಂತೆ ಸತತವಾಗಿ ಐದು ತಿಂಗಳುಗಳ ಕಾಲ ಮುಗಿಲು ಬಿರಿದಂತೆ ಸುರಿದ ಮಳೆಯಿಂದಾಗಿ ತಾಲೂಕಿನ ನಾನಾ ಕೆರೆಗಳು ತುಂಬಿ ನಿಂತಿದ್ದು, ಶುದ್ಧ,ಸ್ಫಟಿಕ ಸದೃಶವಾದ ಜಲರಾಶಿಯಿಂದ ತುಂಬಿ ತುಳುಕುತ್ತಿರುವ ಜಲಪಾತ್ರೆಗಳೆಂದೆ ಕರೆಯಲ್ಪಡುವ ಈ ಕೆರೆಗಳನ್ನು ನೋಡುವುದೇ ಕಣ್ಣಿಗೊಂದು ಸೊಬಗು ಎಂಬಂತಾಗಿದೆ.
Vijaya Karnataka Web 29 YLP 1 A_24


ಮೈದುಂಬಿದ ಜಲಪಾತ್ರೆಗಳು : ಇತ್ತೀಚಿನ ವರ್ಷಗಳಲ್ಲಿತಾಲೂಕಿನಲ್ಲಿ ಮಳೆಯ ಪ್ರಮಾಣ ತೀರಾ ಕಡಿಮೆಯಾದ ಕಾರಣ ತಾಲೂಕನ್ನು ಬರಪೀಡಿತ ತಾಲೂಕೆಂದು ಸರಕಾರವೇ ಘೋಷಿಸಿತ್ತು. ಮಳೆ ಕಡಿಮೆಯಾದ ಕಾರಣ ಸ್ವಾಭಾವಿಕವಾಗಿ ಕೆರೆಗಳೆಲ್ಲವೂ ಖಾಲಿ ಖಾಲಿಯಾಗಿ ತೋರುತ್ತಿದ್ದವು. ಈ ವರ್ಷದ ಹಾಗೇ ಕೆರೆಗಳು ಮೈದುಂಬಿದ್ದನ್ನು ನೋಡದೇ ದಶಕಗಳೇ ಕಳೆದಿದ್ದವು. ಈವರ್ಷ ಸುರಿದ ಮಳೆಯ ಪ್ರಮಾಣ ಅಧಿಕವಾಗಿರುವ ಕಾರಣ ತಾಲೂಕಿನ ಬಹುತೇಕ ಕೆರೆಗಳೆಲ್ಲವೂ ತುಂಬಿಕೊಂಡಿವೆ. ಪ್ರಾಕೃತಿಕ ಜಲಪಾತ್ರೆಗಳೇಂದೇ ಕರೆಯಲ್ಪಡುವ ಕೆರೆಗಳು ಹೀಗೆ ತುಂಬಿಕೊಂಡಿರುವ ಕಾರಣದಿಂದ ಸುತ್ತಲಿನ ಅಂತರ್ಜಲ ಮಟ್ಟವೂ ಗಣನೀಯ ಪ್ರಮಾಣದಲ್ಲಿಏರಿಕೆ ಕಂಡಿದೆ. ಹೀಗಾಗಿ ಮುಂಬರುವ ಬೇಸಿಗೆಯ ಸಂದರ್ಭದಲ್ಲಿನೀರಿನ ಕೊರತೆ ಅಷ್ಟಾಗಿ ಬಾಧಿಸದು ಎಂದು ನಿರೀಕ್ಷಿಸಲಾಗಿದೆ. ತುಂಬಿದ ಕೆರೆಗಳ ಸುತ್ತಲಿನ ಬಾವಿ,ಹಳ್ಳಗಳಲ್ಲಿಯೂ ಸಹ ಕಳೆದ ವರ್ಷಕ್ಕಿಂತ ಹೆಚ್ಚು ನೀರು ನಿಂತಿರುವುದು ಕಂಡುಬಂದಿದ್ದು ಸಾರ್ವಜನಿಕರು ಖುಷಿಪಡುವಂತಾಗಿದೆ.

ಪಟ್ಟಣದಲ್ಲಿರುವ ನಾಯಕನಕೆರೆ,ಜೋಡುಕೆರೆ,ಕಾಳಮ್ಮನಕೆರೆ, ತಾಲೂಕಿನ ಅತೀ ವಿಶಾಲ ಕೆರೆಯೆಂದೇ ಗುರುತಿಸಲ್ಪಟ್ಟ, 60 ಎಕರೆ ವಿಸ್ತಾರದ ಕೌಡಿಕೆರೆ, ಮಂಚೀಕೇರಿ ಸಮೀಪದ ಸೋಮನಹಳ್ಳಿ ಕೆರೆ, ಮುಂತಾದ ಕೆರೆಗಳಲ್ಲಿನೀರು ತುಂಬಿ ನಿಂತ ದೃಶ್ಯ ಕಣ್ಮನ ತಣಿಸುತ್ತದೆ. ಗ್ರಾಮೀಣ ಭಾಗದ ಪ್ರಮುಖ ಕೆರೆಗಳು ಸುತ್ತಲಿನ ಅಡಕೆ ತೋಟ ಹಾಗೂ ಭತ್ತದ ಗದ್ದೆಗಳಿಗೆ ನೀರುಣಿಸುವ ಜಲ ತಾಣಗಳಾಗಿವೆ. ಮಳೆ ಕಡಿಮೆಯಾದ ಕೂಡಲೇ ಪೈರೊಡೆದ ಭತ್ತದ ಗದ್ದೆಗಳಿಗೆ ಹಾಗೂ ಅಡಕೆ ತೋಟಗಳಲ್ಲಿನ ಬಸಿಗಾಲುವೆಗಳಿಗೆ ಹತ್ತಿರದ ಕೆರೆಗಳಿಂದಲೇ ನೀರು ಸರಬರಾಜಾಗುತ್ತದೆ. ಕಾಲುವೆ ಅಥವಾ ಪೈಪಿನ ಮೂಲಕ ನೀರನ್ನು ಹಾಯಿಸಲಾಗುತ್ತದೆ. ಹಲವೆಡೆ ಇಂತಹ ಕೆರೆಯ ನೀರನ್ನೇ ಕುಡಿಯಲು ಹಾಗೂ ನಿತ್ಯ ಬಳಕೆಗೆ ಉಪಯೋಗಿಸುವ ಪದ್ಧತಿ ಇದೆ. ಒಟ್ಟಿನಲ್ಲಿಕೆರೆಗಳು ತುಂಬಿಕೊಂಡಿದ್ದರೆ ಸುತ್ತಲಿನ ಜನರ ಬದುಕು ಹಸನಾಗಿರಬಲ್ಲುದು. ಸುತ್ತಲಿನ ಪರಿಸರವೂ ನಳನಳಿಸುವಂತಾಗುತ್ತದೆ. ಕಳೆದ ವರ್ಷ ಮಳೆಗಾಲದ ಪ್ರಾರಂಭದಲ್ಲಿತಾಲೂಕಿನ ಹಲವು ಕೆರೆಗಳು ತಾತ್ಕಾಲಿಕವಾಗಿ ತುಂಬಿದ್ದವು. ಆದರೆ ಮಳೆ ಕಡಿಮೆಯಾದ ಮಾರನೇ ದಿನವೇ ಕೆರೆಗಳ ನೀರು ಇಂಗಿಹೋಗಿತ್ತು. ಇದು ಜನರ ಆಶ್ಚರ್ಯಕ್ಕೂ ಕಾರಣವಾಗಿತ್ತು. ನಂತರದ ದಿನಗಳಲ್ಲಿಕೆರೆಗಳಲ್ಲಿನೀರಿನ ಪ್ರಮಾಣ ತೀರಾ ಕಡಿಮೆಯಾಗಿ ಜನ,ಜಾನುವಾರುಗಳು ತತ್ತರಿಸುವಂತಾಗಿತ್ತು. ಆದರೆ ಈ ಬಾರಿ ಮಳೆಯ ಪ್ರಮಾಣ ಜಾಸ್ತಿಯಾಗಿರುವ ಕಾರಣ ಅಷ್ಟು ಬೇಗ ಕೆರೆಗಳಲ್ಲಿನ ನೀರು ಇಂಗುವ ಆತಂಕ ಇಲ್ಲಎಂಬುದು ಹಲವರ ಅಭಿಪ್ರಾಯವಾಗಿದೆ. ಪ್ರಸ್ತುತ ಮಳೆ ಕಡಿಮೆಯಾದ ಈ ಸಂದರ್ಭದಲ್ಲಿತುಂಬಿಕೊಂಡಿರುವ ಕೆರೆಗಳು ಜನರ ಗಮನ ಸೆಳೆಯುತ್ತಿವೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ