ಶಿರಸಿ : ಇಲ್ಲಿಯ ಎಂ.ಇ.ಎಸ್ ಚೈತನ್ಯ ಪದವಿ ಪೂರ್ವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೂತನವಾಗಿ ನಿರ್ಮಿಸಿದ ಅನ್ನಪೂರ್ಣ ಭೋಜನಾಲಯದ ಉದ್ಘಾಟನಾ ಸಮಾರಂಭ ಮೇ 27ರಂದು ಬೆಳಗ್ಗೆ 9.30ಕ್ಕೆ ನಡೆಯಲಿದೆ.
ಈ ಕುರಿತು ಕಾಲೇಜು ಉಪಸಮಿತಿ ಅಧ್ಯಕ್ಷ ನರೇಂದ್ರ ಹೊಂಡಗಾಶಿ ಹಾಗೂ ಪ್ರಾಚಾರ್ಯ ಆರ್.ಎಂ.ಭಟ್ಟ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
2002ನೇ ಇಸವಿಯಿಂದ ಈವರೆಗೆ ವಿದ್ಯಾರ್ಥಿಗಳಿಗೆ ಕೇವಲ 7 ರೂ.ಗಳಲ್ಲಿ ಮಧ್ಯಾಹ್ನ ಭೋಜನ ವಿತರಿಸಲಾಗುತ್ತಿದೆ. ಆದರೆ ಭೋಜನಾಲಯದಲ್ಲಿ ಕೇವಲ 60 ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳುವ ಅವಕಾಶ ಇರುವುದರಿಂದ, ಸ್ಥಳಾವಕಾಶದ ಕೊರತೆ ಉಂಟಾಗುತ್ತಿತ್ತು. ಆ ನಿಟ್ಟಿನಲ್ಲಿ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಕಾಲೇಜು ಆವರಣದಲ್ಲಿ ಹೊಸ ಭೋಜನಾಲಯ ಕಟ್ಟಲಾಗಿದೆ ಎಂದರು.
ಪ್ರಥಮ ಹಾಗೂ ದ್ವಿತೀಯ ವರ್ಷದಲ್ಲಿ ಒಟ್ಟು 630 ವಿದ್ಯಾರ್ಥಿಗಳು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲಿ 300ಕ್ಕೂ ಅಧಿಕ ವಿದ್ಯಾರ್ಥಿಗಳು ಮಧ್ಯಾಹ್ನ ಕಾಲೇಜಿನಿಂದ ನೀಡುವ ಊಟ ಸೇವಿಸುತ್ತಿದ್ದಾರೆ. ದೂರದ ಗ್ರಾಮೀಣ ಭಾಗಗಳಿಂದ ಆಗಮಿಸುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅನ್ನಪೂರ್ಣ ಯೋಜನೆಯನ್ನು ಎಂಇಎಸ್ ಶಿಕ್ಷ ಣ ಸಂಸ್ಥೆ ಅಳವಡಿಸಿಕೊಂಡಿದೆ. ದಾನಿಗಳ, ಪಾಲಕರ ಹಾಗೂ ಶಿಕ್ಷ ಕರ ಸಹಾಯ ನಿಧಿಯನ್ನು ಬಳಕೆ ಮಾಡಿಕೊಂಡು ಕಡಿಮೆ ದರದಲ್ಲಿ ಗುಣಮಟ್ಟದ ಊಟ ನೀಡಲಾಗುತ್ತಿದೆ ಎಂದರು.
ಮೇ 27ರಂದು ಮುಂಜಾನೆ 9.30ಕ್ಕೆ ಹೊರನಾಡ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿ ಡಾ.ಜಿ.ಭೀಮೇಶ್ವರ ಜೋಷಿ ಕಟ್ಟಡ ಉದ್ಘಾಟಿಸುವರು. ಎಂ.ಇ.ಎಸ್. ಶಿಕ್ಷ ಣ ಸಂಸ್ಥೆ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ ಅಧ್ಯಕ್ಷ ತೆ ವಹಿಸುವರು ಎಂದರು.
ಈ ಕುರಿತು ಕಾಲೇಜು ಉಪಸಮಿತಿ ಅಧ್ಯಕ್ಷ ನರೇಂದ್ರ ಹೊಂಡಗಾಶಿ ಹಾಗೂ ಪ್ರಾಚಾರ್ಯ ಆರ್.ಎಂ.ಭಟ್ಟ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
2002ನೇ ಇಸವಿಯಿಂದ ಈವರೆಗೆ ವಿದ್ಯಾರ್ಥಿಗಳಿಗೆ ಕೇವಲ 7 ರೂ.ಗಳಲ್ಲಿ ಮಧ್ಯಾಹ್ನ ಭೋಜನ ವಿತರಿಸಲಾಗುತ್ತಿದೆ. ಆದರೆ ಭೋಜನಾಲಯದಲ್ಲಿ ಕೇವಲ 60 ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳುವ ಅವಕಾಶ ಇರುವುದರಿಂದ, ಸ್ಥಳಾವಕಾಶದ ಕೊರತೆ ಉಂಟಾಗುತ್ತಿತ್ತು. ಆ ನಿಟ್ಟಿನಲ್ಲಿ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಕಾಲೇಜು ಆವರಣದಲ್ಲಿ ಹೊಸ ಭೋಜನಾಲಯ ಕಟ್ಟಲಾಗಿದೆ ಎಂದರು.
ಪ್ರಥಮ ಹಾಗೂ ದ್ವಿತೀಯ ವರ್ಷದಲ್ಲಿ ಒಟ್ಟು 630 ವಿದ್ಯಾರ್ಥಿಗಳು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲಿ 300ಕ್ಕೂ ಅಧಿಕ ವಿದ್ಯಾರ್ಥಿಗಳು ಮಧ್ಯಾಹ್ನ ಕಾಲೇಜಿನಿಂದ ನೀಡುವ ಊಟ ಸೇವಿಸುತ್ತಿದ್ದಾರೆ. ದೂರದ ಗ್ರಾಮೀಣ ಭಾಗಗಳಿಂದ ಆಗಮಿಸುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅನ್ನಪೂರ್ಣ ಯೋಜನೆಯನ್ನು ಎಂಇಎಸ್ ಶಿಕ್ಷ ಣ ಸಂಸ್ಥೆ ಅಳವಡಿಸಿಕೊಂಡಿದೆ. ದಾನಿಗಳ, ಪಾಲಕರ ಹಾಗೂ ಶಿಕ್ಷ ಕರ ಸಹಾಯ ನಿಧಿಯನ್ನು ಬಳಕೆ ಮಾಡಿಕೊಂಡು ಕಡಿಮೆ ದರದಲ್ಲಿ ಗುಣಮಟ್ಟದ ಊಟ ನೀಡಲಾಗುತ್ತಿದೆ ಎಂದರು.
ಮೇ 27ರಂದು ಮುಂಜಾನೆ 9.30ಕ್ಕೆ ಹೊರನಾಡ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿ ಡಾ.ಜಿ.ಭೀಮೇಶ್ವರ ಜೋಷಿ ಕಟ್ಟಡ ಉದ್ಘಾಟಿಸುವರು. ಎಂ.ಇ.ಎಸ್. ಶಿಕ್ಷ ಣ ಸಂಸ್ಥೆ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ ಅಧ್ಯಕ್ಷ ತೆ ವಹಿಸುವರು ಎಂದರು.