ಆ್ಯಪ್ನಗರ

ಹೊಸ ಭಾಷ್ಯ ಬರೆದ ಅಂಕೋಲಾ ಉತ್ಸವ

ಅಂಕೋಲಾ :ಸಮಾಜದಲ್ಲಿರುವ ಅನೇಕ ಸಾಧಕರನ್ನು ಗುರುತಿಸಿ ಅವರ ಸಾಧನೆಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು 'ಅಂಕೋಲಾ ಉತ್ಸವ'ದ ಸಂಗಾತಿ ರಂಗಭೂಮಿಯ ಸಂಸ್ಥೆಯು ಮಾಡುತ್ತಿರುವುದು ಮಾದರಿಯಾಗಿದೆ ಎಂದು ಜೈಹಿಂದ್‌ ಶಾಲೆಯ ಅಧ್ಯಕ್ಷ ಪದ್ಮನಾಭ ಪ್ರಭು ಹೇಳಿದರು.

Vijaya Karnataka 14 Jan 2019, 5:00 am
ಅಂಕೋಲಾ :ಸಮಾಜದಲ್ಲಿರುವ ಅನೇಕ ಸಾಧಕರನ್ನು ಗುರುತಿಸಿ ಅವರ ಸಾಧನೆಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು 'ಅಂಕೋಲಾ ಉತ್ಸವ'ದ ಸಂಗಾತಿ ರಂಗಭೂಮಿಯ ಸಂಸ್ಥೆಯು ಮಾಡುತ್ತಿರುವುದು ಮಾದರಿಯಾಗಿದೆ ಎಂದು ಜೈಹಿಂದ್‌ ಶಾಲೆಯ ಅಧ್ಯಕ್ಷ ಪದ್ಮನಾಭ ಪ್ರಭು ಹೇಳಿದರು.
Vijaya Karnataka Web a new speech written by angola festival
ಹೊಸ ಭಾಷ್ಯ ಬರೆದ ಅಂಕೋಲಾ ಉತ್ಸವ


ಶನಿವಾರ ನಡೆದ 3ನೇ ದಿನದ ಅಂಕೋಲಾ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜಕ್ಕೆ ಮಾದರಿಯಾಗುವ ಸ್ಥಳೀಯ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿರುವ ಅಂಕೋಲಾ ಉತ್ಸವ ತಾಲೂಕಿನಲ್ಲಿ ಹೊಸದೊಂದು ಭಾಷ್ಯ ಬರೆದಿದೆ ಎಂದರು.

ಪುರಸಭೆಯ ಸದಸ್ಯೆ ಶಾಂತಲಾ ನಾಡಕರ್ಣಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಅಂಕೋಲಾ ಉತ್ಸವದ ಮೂಲಕ ಎಲ್ಲರನ್ನೂ ಒಂದೆಡೆ ಸೇರಿಸಿ, ಸಂಭ್ರಮಿಸಲು ಅವಕಾಶ ಮಾಡಿ ಕೊಟ್ಟ ಸಂಘಟಕರು ಮಾದರಿಯಾಗಿದ್ದಾರೆ ಎಂದರು.

ಸಾಹಿತಿ ನಾಗೇಂದ್ರ ನಾಯಕ ತೊರ್ಕೆ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಅಂಕೋಲೆಯ ಇತಿಹಾಸದಲ್ಲಿ ಹೊಸದೊಂದು ಸಾಮಾಜಿಕ, ಸಾಂಸ್ಕೃತಿಕ ಕ್ರಾಂತಿ ಬರೆಯುತ್ತಿರುವ ಸಂಗಾತಿ ರಂಗಭೂಮಿಯಿಂದ, ಅಂಕೋಲಾ ಜನತೆ 8 ದಿನಗಳ ಕಾಲ ಸಂಭ್ರಮಿಸಲು ಅವಕಾಶ ಮಾಡಿಕೊಟ್ಟಿರುವುದು ಹೆಮ್ಮೆ ತಂದಿದೆ ಎಂದರು.

ಸಾಧಕರಾದ ರಂಗಭೂಮಿ ಕಲಾವಿದ ಮಹಾದೇವ ನಾಯ್ಕ, ಹೋಟೆಲ್‌ ಉದ್ಯಮಿ ವಿನೋದ ಕಾಮತ, ಸರಕಾರಿ ಆಸ್ಪತ್ರೆಯ ಸಿಬ್ಬಂದಿ ಉಮೇಶ ನಾಯ್ಕ ಹಳೇಬಜಾರ ಅವರನ್ನು ಸನ್ಮಾನಿಸಲಾಯಿತು. ಜೀವು ವಾಣಿಜ್ಯ ಸಂಸ್ಥೆಯ ಸಂಸ್ಥಾಪಕ ರಮೇಶ ನಾಯ್ಕ. ಜೀವು ಪ್ರಶಸ್ತಿ ಪ್ರದಾನ ಮಾಡಿದರು.

ಅತಿಥಿಗಳಾಗಿ ಪುರಸಭೆಯ ಸದಸ್ಯರಾದ ನಿರ್ಮಲಾ ಹುಲಸ್ವಾರ್‌, ಶೀಲಾ ಶೆಟ್ಟಿ , ತಾರಾ ನಾಯ್ಕ, ಅಚವೆ ಗ್ರಾಪಂ ಅಧ್ಯಕ್ಷ ಉದಯ ಗುನಗಾ, ಅಲಗೇರಿ ಗ್ರಾಪಂ ಅಧ್ಯಕ್ಷ ಮಂಜುನಾಥ ನಾಯಕ, ಲಯನ್ಸ್‌ ಕ್ಲಬ್‌ ಅಧ್ಯಕ್ಷ ಗಣಪತಿ ನಾಯಕ ಶೀಳ್ಯ, ಟಿಪ್ಪರ್‌ ಲಾರಿ ಮಾಲಕರ- ಚಾಲಕರ ಸಂಘದ ಅಧ್ಯಕ್ಷ ಗಣಪತಿ ನಾಯಕ ಮೂಲೆಮನೆ, ಪತ್ರಕರ್ತ ವಾಸುದೇವ ಗುನಗಾ, ಉರಗ ಪ್ರೇಮಿ ಮಹೇಶ ನಾಯ್ಕ, ಬಿಜೆಪಿ ಪ್ರ ಕಾರ್ಯದರ್ಶಿ ಸಂಜಯ್‌ ನಾಯ್ಕ ಸಾಮಾಜಿಕ ಕಾರ್ಯಕರ್ತ ಮಂಜುನಾಥ ಜಾಂಬಳೆಕರ್‌ ಮಾತನಾಡಿದರು.

ಹೂವಾ ಖಂಡೆಕರ್‌ ಸ್ವಾಗತಿಸಿದರು. ಪತ್ರಕರ್ತ ಅರುಣ ಶೆಟ್ಟಿ ನಿರೂಪಿಸಿದರು. ಶಾಂತಾ ಹರಿಕಾಂತ ವಂದಿಸಿದರು. ಅಂಕೋಲಾದ ಸಂಸ್ಕೃತಿ -ಪರಂಪರೆಯ ಕುರಿತು ಅಲಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ನಾಯಕ ಅವರ ಸ್ವರಚಿತ ಕವನವನ್ನು ಚಂದ್ರಕಾಂತ ಆಗೇರ ಹಾಡಿ ಗಮನ ಸೆಳೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ