ಆ್ಯಪ್ನಗರ

ಹಣ ವಂಚಿಸಿ ನಾಪತ್ತೆಯಾದ ಅಂಚೆ ನೌಕರ

ಮುಂಡಗೋಡ : ತಾಲೂಕಿನ ಮಳಗಿ ಅಂಚೆ ವಿಭಾಗ ಹನುಮಾಪುರ ಗ್ರಾಮದಲ್ಲಿಅಂಚೆ ಇಲಾಖೆಯ ಸಿಬ್ಬಂದಿಯೊಬ್ಬ ಸಾರ್ವಜನಿಕರಿಗೆ ಲಕ್ಷಾಂತರ ರೂ. ವಂಚನೆ ಮಾಡಿ ನಾಪತ್ತೆಯಾಗಿದ್ದಾನೆ ಎಂಬ ಸುದ್ದಿ ತಾಲೂಕಿನಾದ್ಯಂತ ಹರಿದಾಡುತ್ತಿದೆ.

Vijaya Karnataka 25 Sep 2019, 5:00 am
ಮುಂಡಗೋಡ : ತಾಲೂಕಿನ ಮಳಗಿ ಅಂಚೆ ವಿಭಾಗ ಹನುಮಾಪುರ ಗ್ರಾಮದಲ್ಲಿಅಂಚೆ ಇಲಾಖೆಯ ಸಿಬ್ಬಂದಿಯೊಬ್ಬ ಸಾರ್ವಜನಿಕರಿಗೆ ಲಕ್ಷಾಂತರ ರೂ. ವಂಚನೆ ಮಾಡಿ ನಾಪತ್ತೆಯಾಗಿದ್ದಾನೆ ಎಂಬ ಸುದ್ದಿ ತಾಲೂಕಿನಾದ್ಯಂತ ಹರಿದಾಡುತ್ತಿದೆ.
Vijaya Karnataka Web 24MND3A-_24


ಹನುಮಾಪುರ ಗ್ರಾಮದಲ್ಲಿಈ ಘಟನೆ ನಡೆದಿದ್ದು, ಈ ಗ್ರಾಮದಲ್ಲಿಪರಿಶಿಷ್ಟ ಜಾತಿಯ ಬಡಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿನ ಜನರು ಅಂಚೆ ಇಲಾಖೆಯಲ್ಲಿಉಳಿತಾಯ ಖಾತೆ ಮಾಡಿ ಅಲ್ಪಸ್ವಲ್ಪ ಹಣವನ್ನು ಅಂಚೆ ಇಲಾಖೆಯ ಉಳಿತಾಯ ಖಾತೆಗೆ ಜಮಾ ಮಾಡುತ್ತಿದ್ದರು. ಇಲ್ಲಿನ ಅಂಚೆ ಇಲಾಖೆಯ ಸಿಬ್ಬಂದಿ ಜನರು ಜಮಾ ಮಾಡಿದ ಹಣದ ಪ್ರಕಾರ ಪಾಸ್‌ಬುಕ್‌ನಲ್ಲಿಜಮಾ ಮಾಡಿದ ಮೊತ್ತವನ್ನು ಸರಿಯಾಗಿ ಬರೆದು ಕಳಿಸುತ್ತಿದ್ದ, ಆದರೆ ಇಲಾಖೆಗೆ ಜಮಾ ಮಾಡದೇ ತಾನೇ ಬಳಕೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ವೃದ್ಧರಿಗೆ ಬರುವ ಮಾಸಾಶನವನ್ನೂ ದುರ್ಬಳಕೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಬಹುತೇಕ ವೃದ್ಧರು ತಮಗೆ ಬರುವ ಮಾಸಾಶನದ ಹಣವನ್ನು ಉಳಿತಾಯ ಖಾತೆಯಲ್ಲಿಯೇ ಇಡುತ್ತಿದ್ದರು. ಅದನ್ನು ಸಹ ನೌಕರ ನಕಲಿ ಸಹಿ ಹಾಕಿ ತೆಗೆದಿದ್ದಾನೆ ಎನ್ನಲಾಗುತ್ತಿದೆ.

ತನಿಖೆ ಆರಂಭ: ಕೆಲವು ದಿನಗಳ ಹಿಂದೆ ವಂಚನೆ ವಿಷಯ ಗ್ರಾಮಸ್ಥರಿಗೆ ಗೊತ್ತಾಗಿದ್ದು, ಈ ನೌಕರ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಇದೀಗ ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳು ಹನುಮಾಪುರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಸುಮಾರು ಐದು ಲಕ್ಷಕ್ಕೂ ಹೆಚ್ಚು ಅವ್ಯವಹಾರ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಘಟನೆಯ ಕುರಿತು ಈಗಲೇ ಮಾಹಿತಿ ನೀಡುವುದಿಲ್ಲ, ಸಂಪೂರ್ಣ ತನಿಖೆ ಮುಗಿದ ನಂತರ ಮಾಹಿತಿ ನೀಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ