ಆ್ಯಪ್ನಗರ

ಅಭಿನಂದನ್‌ ಬಿಡುಗಡೆ: ಸಿಹಿ ಹಂಚಿ ಸಂಭ್ರಮ

ಕಾರವಾರ: ವೀರಯೋಧ ವಿಂಗ್‌ ಕಮಾಂಡರ್‌ ಅಭಿನಂದನ್‌ ಶುಕ್ರವಾರ ಪಾಕಿಸ್ತಾನದಿಂದ ಬಿಡುಗಡೆಯಾಗಿ ತಾಯ್ನಾಡಿಗೆ ವಾಪಸ್ಸಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಅಮದಳ್ಳಿಯ ನಿರಾಶ್ರಿತರು ಶುಕ್ರವಾರ ಸಹಿ ಹಂಚಿ ಸಂಭ್ರಮಿಸಿದರು.

Vijaya Karnataka 2 Mar 2019, 5:00 am
ಕಾರವಾರ: ವೀರಯೋಧ ವಿಂಗ್‌ ಕಮಾಂಡರ್‌ ಅಭಿನಂದನ್‌ ಶುಕ್ರವಾರ ಪಾಕಿಸ್ತಾನದಿಂದ ಬಿಡುಗಡೆಯಾಗಿ ತಾಯ್ನಾಡಿಗೆ ವಾಪಸ್ಸಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಅಮದಳ್ಳಿಯ ನಿರಾಶ್ರಿತರು ಶುಕ್ರವಾರ ಸಹಿ ಹಂಚಿ ಸಂಭ್ರಮಿಸಿದರು.
Vijaya Karnataka Web KWR-1GAJA3


ಅಮದಳ್ಳಿಯ ಜಡಿಗದ್ದಾದ ಪ್ರಾಥಮಿಕ ಶಾಲೆ ಎದುರು ಸೇರಿದ ಗ್ರಾಮಸ್ಥರು ದೇಶದ ಪರವಾಗಿ ಭಾರತ್‌ ಜೈ ಹೋ! ಅಭಿನಂದನ್‌ ಜೈ ಹೋ! ಘೋಷಣೆ ಕೂಗಿದರು.

ಇಲ್ಲಿನ ಸೀಬರ್ಡ್‌ ನೌಕಾನೆಲೆ ಯೋಜನೆಗಾಗಿ ಮನೆ,ಮಠ ತ್ಯಾಗ ಮಾಡಿ ನಿರಾ]ತರಾದ ಈ ಭಾಗದ ಜನರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದು,ವಿಶೇಷವಾಗಿತ್ತು.ಯುವಕರು,ಹಿರಿಯರು ಎಲ್ಲರೂ ಸೇರಿ ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂತಸಪಟ್ಟರು.

ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ಪುರುಷೋತ್ತಮ ಗೌಡ, ನಿವೃತ್ತ ಸೈನಿಕ ರೋಶನ್‌ ಗೌಡ, ರಘುಪತಿ ಪೆಡ್ನೇಕರ,ಸಂದೇಶ ತಾಂಡೇಲ,ನರೇಂದ್ರ ತಳೇಕರ,ಸೀಮಾ ಮಾಹೇಕರ,ರಾಘವೇಂದ್ರ ಪೂಜಾರಿ,ರಾಜೇಶ ಮಡಿವಾಳ,ಬೀರಪ್ಪ ಬಳೆಗಾರ,ನೀಲಾ ಗೌಡ,ಸರಸ್ವತಿ ಮಾಹೇಕರ ಮುಂತಾದವರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ