ಆ್ಯಪ್ನಗರ

ಕಷ್ಟಗಳನ್ನು ಪಾಠವಾಗಿ ಸ್ವೀಕರಿಸಿ

ಶಿರಸಿ : ಬದುಕಿನಲ್ಲಿ ಎದುರಾಗುವ ಕಷ್ಟಗಳನ್ನು ಅನುಭವದ ಪಾಠವಾಗಿ ಸ್ವೀಕರಿಸಿದವನು ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

Vijaya Karnataka 25 Dec 2018, 5:00 am
ಶಿರಸಿ : ಬದುಕಿನಲ್ಲಿ ಎದುರಾಗುವ ಕಷ್ಟಗಳನ್ನು ಅನುಭವದ ಪಾಠವಾಗಿ ಸ್ವೀಕರಿಸಿದವನು ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
Vijaya Karnataka Web accept the difficulties as a lesson
ಕಷ್ಟಗಳನ್ನು ಪಾಠವಾಗಿ ಸ್ವೀಕರಿಸಿ


ತಾಲೂಕಿನ ಭೈರುಂಬೆಯ ಹುಳಗೋಳ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಹಿರಿಯ ಸಹಕಾರಿ ಜಿ.ಎಂ.ಹೆಗಡೆ ಹುಳಗೋಳ ಅವರನ್ನು ಸನ್ಮಾನಿಸಿ ಅವರು ಆಶೀರ್ವಚನ ನೀಡಿದರು.

ಬದುಕಿನಲ್ಲಿ ಕಷ್ಟಗಳು ಎಲ್ಲರಿಗೂ ಬರುತ್ತವೆ. ಆದರೆ ಅದನ್ನು ಅನುಭವದ ಸೋಪಾನವಾಗಿ ಸ್ವೀಕರಿಸಬೇಕು. ಆಗ ಹಂತಹಂತವಾಗಿ ಮೇಲೆರುತ್ತಾ ಸಾಗಲು ಸಾಧ್ಯವಾಗುತ್ತದೆ. ಅದಕ್ಕೆ ಕ್ರಿಯಾಶಕ್ತಿ, ಸಂಕಲ್ಪ ಶಕ್ತಿ, ದೃಢವಾದ ನಿಲುವು ಅಗತ್ಯವಿದೆ ಎಂದರು.

ನಾವು ಮಾಡುವ ಕರ್ಮದಲ್ಲಿ ಶ್ರಮ, ಸಮಸ್ಯೆಗೆ ತಲೆಕೆಡಿಸಿಕೊಳ್ಳದೇ ಆನಂದವನ್ನು ಕಾಣಬೇಕು. ಕೆಲಸವಿಲ್ಲದ ವೇಳೆಯೂ ಕೆಲಸದಲ್ಲಿ ತೊಡಗಬೇಕು. ಇದರಿಂದ ದೈಹಿಕ, ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದರು.

ಪ್ರತಿಯೊಬ್ಬರು ತನ್ನನ್ನು ತಾನು ಉದ್ಧರಿಸಿಕೊಳ್ಳಬೇಕು. ನಮ್ಮೊಳಗಿನ ದೋಷವನ್ನು ದೂರವಾಗಿಸಿಕೊಂಡು ಮುನ್ನಡೆಯಬೇಕು. ಅವಿವೇಕದ ವರ್ತನೆ ತೋರಿ ತನ್ನನ್ನು ತಾನೇ ಕೆಳಕ್ಕೆ ತಳ್ಳಿಕೊಳ್ಳದೇ ವಿವೇಕದ ವರ್ತನೆಯಿಂದ ಸಾಧನೆ ಮಾಡಬೇಕು ಎಂದರು.

ಸನ್ಮಾನಿತ ಜಿ.ಎಂ.ಹೆಗಡೆ ಹುಳಗೋಳ ಮಾತನಾಡಿ ಶೋಷಣಾ ರಹಿತ ಸಮಾಜ ಆಗಬೇಕು ಎಂಬುದು ನಮ್ಮ ಗುರಿಯಾಗಿತ್ತು. ಅದು ಈಗ ಸಾಧ್ಯವಾಗಿದೆ. ಹಾಗೇ ರೈತರು ಉತ್ಪಾದನೆ ಹೆಚ್ಚಿಸಿಕೊಂಡು ಆರ್ಥಿಕವಾಗಿ ಬಲಗೊಳ್ಳಬೇಕು ಎಂದರು.

ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿವರಾಮ ಹೆಬ್ಬಾರ, ಮಾಜಿ ಶಾಸಕ ಎಲ್‌.ಟಿ.ತಿಮ್ಮಪ್ಪ ಹೆಗಡೆ, ವೇಣುಗೋಪಾಲ, ಎಸ್‌.ಪಿ.ಶೆಟ್ಟಿ ಮುಂತಾದವರು ಪಾಲ್ಗೊಂಡರು. ಜಿ.ಎಂ.ಹೆಗಡೆ ಹುಳಗೋಳ ಸನ್ಮಾನ ಸಮಿತಿ ಅಧ್ಯಕ್ಷ ಎಲ್‌.ಎನ್‌.ಹೆಗಡೆ ಸ್ವಾಗತಿಸಿದರು. ಅನಂತ ಹೆಗಡೆ ಹುಳಗೋಳ, ಸುರೇಶ ಹೆಗಡೆ ಹಕ್ಕೀಮನೆ ನಿರೂಪಿಸಿದರು. ಈ ಸಂದರ್ಭದಲ್ಲಿ ಸನ್ಮಾನ ಸಮಿತಿಯಿಂದ ಜಿ.ಎಂ.ಹೆಗಡೆ ಹುಳಗೊಳ ಅವರಿಗೆ 15ಲಕ್ಷ ರೂ.ಹಮ್ಮಿಣಿ ನೀಡಿ ಗೌರವಿಸಲಾಯಿತು. ಇದೇ ವೇಳೆ ಶತಮಾನದ ಸಹಕಾರಿ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ