ಆ್ಯಪ್ನಗರ

ಅಕ್ಷರ ಜ್ಞಾನ ಪಡೆದು ಅಭಿವೃದ್ಧಿಗೆ ಸಹಕರಿಸಿ

ಹೊನ್ನಾವರ : ಪಟ್ಟಣದ ತಾಪಂ ಸಭಾಭವನದಲ್ಲಿತಾಲೂಕು ಪಂಚಾಯಿತಿ ಹಾಗೂ ತಾಲೂಕು ಸಾಕ್ಷರತಾ ಸಮಿತಿ ವತಿಯಿಂದ ಸಾಕ್ಷರತಾ ದಿನ ಆಚರಿಸಲಾಯಿತು.

Vijaya Karnataka 15 Sep 2019, 5:00 am
ಹೊನ್ನಾವರ : ಪಟ್ಟಣದ ತಾಪಂ ಸಭಾಭವನದಲ್ಲಿತಾಲೂಕು ಪಂಚಾಯಿತಿ ಹಾಗೂ ತಾಲೂಕು ಸಾಕ್ಷರತಾ ಸಮಿತಿ ವತಿಯಿಂದ ಸಾಕ್ಷರತಾ ದಿನ ಆಚರಿಸಲಾಯಿತು.
Vijaya Karnataka Web acquire character knowledge and assist in development
ಅಕ್ಷರ ಜ್ಞಾನ ಪಡೆದು ಅಭಿವೃದ್ಧಿಗೆ ಸಹಕರಿಸಿ


ಶಾಸಕ ಸುನೀಲ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣವೇ ಶಕ್ತಿ. ಸರಕಾರ ಪ್ರತಿಯೊಬ್ಬರಿಗೆ ಶಿಕ್ಷಣ ನೀಡಲು ಉತ್ಸುಕವಾಗಿದೆ. ಗ್ರಾಮೀಣ ಭಾಗದಲ್ಲಿಶಿಕ್ಷಣದ ಕೊರತೆ ಹೋಗಲಾಡಿಸಲು ಸಾಕ್ಷರತಾ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಅಕ್ಷರ ಜ್ಞಾನ ಪಡೆದು ಗ್ರಾಮದ ಅಭಿವೃದ್ಧಿಗೆ ಗಮನ ನೀಡಬೇಕು. ಸರಕಾರದ ಯೋಜನೆ ಅರಿಯಲು ಅಕ್ಷರ ಜ್ಞಾನದ ಅಗತ್ಯವಿದೆ. ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲದಕ್ಕೂ ಶಿಕ್ಷಣ ಬಹುಮುಖ್ಯವಾಗಿದೆ ಎಂದರು. ಜಿಪಂ ಸದಸ್ಯೆ ಶ್ರೀಕಲಾ ಶಾಸ್ತ್ರಿ ಮಾತನಾಡಿ, ಅಕ್ಷರ ಜ್ಞಾನ ತೀರಾ ಅಗತ್ಯವಿದೆ. ನೂರಕ್ಕೆ ನೂರು ಸಾಕ್ಷರತೆ ಸಾಧಿಸಲು ಎಲ್ಲರೂ ಒಗ್ಗೂಡಿ ಪರಿಶ್ರಮಪಡೋಣ ಎಂದರು. ಜಿಪಂ ಸದಸ್ಯೆ ಪುಷ್ಪಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿಜಿಪಂ ಸದಸ್ಯೆ ಸವಿತಾ ಗೌಡ, ತಾಪಂ ಸದಸ್ಯರಾದ ಮೀರಾ ತಾಂಡೇಲ, ಗಾಯತ್ರಿ ನಾಯ್ಕ ಉಪಸ್ಥಿತರಿದ್ದರು.

ಸಾಕ್ಷರತಾ ಬೋಧಕರು ಅನಿಸಿಕೆ ವ್ಯಕ್ತಪಡಿಸಿದರು. ಸಾಕ್ಷರತಾ ಅಕ್ಷರಜ್ಯೋತಿ ಹಸ್ತಪತ್ರಿಕೆಯನ್ನು ಈ ಸಂದರ್ಭದಲ್ಲಿಬಿಡುಗಡೆಗೊಳಿಸಿ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ ಸ್ವಾಗತಿಸಿದರು. ಸಾಕ್ಷರತಾ ಅಧಿಕಾರಿ ಸಾಧನಾ ಬರ್ಗಿ ವಂದಿಸಿದರು. ಉದಯ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ