ಆ್ಯಪ್ನಗರ

ಸಾಂಕ್ರಾಮಿಕ ರೋಗ ತಡೆಗೆ ಕ್ರಮ

ಕಾರವಾರ :ಸೊಳ್ಳೆ ನಿರ್ನಾಮವೊಂದೇ ಮನುಕುಲದ ಉಳಿವಿನ ಮಾರ್ಗವಾಗಿದ್ದು, ಸೊಳ್ಳೆಗಳಿಂದ ಬರುವ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ವ್ಯಾಪಕವಾದ ಬಿಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಜಿ. ಎನ್‌. ಅಶೋಕ್‌ಕುಮಾರ್‌ ಹೇಳಿದರು.

Vijaya Karnataka 21 Jul 2018, 5:00 am
ಕಾರವಾರ :ಸೊಳ್ಳೆ ನಿರ್ನಾಮವೊಂದೇ ಮನುಕುಲದ ಉಳಿವಿನ ಮಾರ್ಗವಾಗಿದ್ದು, ಸೊಳ್ಳೆಗಳಿಂದ ಬರುವ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ವ್ಯಾಪಕವಾದ ಬಿಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಜಿ. ಎನ್‌. ಅಶೋಕ್‌ಕುಮಾರ್‌ ಹೇಳಿದರು.
Vijaya Karnataka Web action to prevent contagious diseases
ಸಾಂಕ್ರಾಮಿಕ ರೋಗ ತಡೆಗೆ ಕ್ರಮ


ಇಲ್ಲಿನ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ ಕುರಿತು ಸುದ್ದಿಗೋಷ್ಠಿ ನಡೆಸಿದ ಅವರು, ಸೊಳ್ಳೆಗಳಿಂದಲೇ ಮನುಷ್ಯನಿಗೆ ಅನೇಕ ಮಾರಣಾಂತಿಕ ರೋಗಗಳು ಬರುತ್ತಿದ್ದು ,ಅತೀ ಬುದ್ದಿವಂತ ಮನುಷ್ಯನ ಸಾಮಾಜಿಕ ಬೇಜವ್ದಾರಿ ನಡವಳಿಕೆಯೇ ಸೊಳ್ಳೆಗಳ ಉತ್ಪತ್ತಿಗೆ ಮೂಲ ಕಾರಣವಾಗಿದೆ. ಡೆಂಗೆ,ಮಲೇರಿಯಾ ಮುಂತಾದ ಮಾರಣಾಂತಿಕ ಜ್ವರ ಹರಡಿಸುವ ಸೊಳ್ಳೆ ಸಂತತಿ ನಿರ್ನಾಮ ಮಾಡದಿದ್ದರೆ ಮನುಷ್ಯನಿಗೆ ಉಳಿಗಾಲವಿಲ್ಲ ಎಂದರು.

ಈ ಹಿಂದೆ ಸಮಾಜದಲ್ಲಿ ಬಹುಮಕ್ಕಳ ಸಂಸ್ಕೃತಿ ಸಹಜವಾಗಿ ಇತ್ತು. ಆದರೀಗ ಸ್ವಯಂ ಪ್ರೇರಿತರಾಗಿ ಒಂದು ಅಥವಾ ಎರಡು ಮಕ್ಕಳಿಗೆ ಸೀಮಿತರಾಗಿದ್ದೇವೆ. ಪ್ರತಿ ಮಗುವಿನ ಆರೋಗ್ಯವನ್ನು ಸೊಳ್ಳೆಗಳಿಂದ ರಕ್ಷಿಸುವುದು ಅನಿವಾರ್ಯವಾಗಿದೆ. ಇಲ್ಲವಾದಲ್ಲಿ ಮನುಷ್ಯನ ಸಂತತಿಯೂ ಅಳಿವಿನಂಚಿಗೆ ಹೋಗುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಎಚ್ಚೆತ್ತುಕೊಂಡು ಸೊಳ್ಳೆ ನಿಯಂತ್ರಣಕ್ಕೆ ಮುಂದಾಗಬೇಕಿದೆ ಎಂದರು.

ಸೊಳ್ಳೆ ನಿಯಂತ್ರಣಕ್ಕೆ ಸರಕಾರ ಮತ್ತು ಆರೋಗ್ಯ ಇಲಾಖೆ ಎಷ್ಟೇ ಪ್ರಯತ್ನ ಪಟ್ಟರೂ ಸಾರ್ವಜನಿಕರ ಸಹಭಾಗಿತ್ವ ಅತಿಮುಖ್ಯ. ಸಾರ್ವಜನಿಕ ಜಾಗೃತಿ, ಶಾಲೆಗಳಲ್ಲಿ ಜಾಗೃತಿ, ಧೂಮೀಕರಣ, ಆರೋಗ್ಯ ಶಿಬಿರಗಳು ಹೀಗೆ ಹಲವಾರು ಕ್ರಮಗಳೂ ಸಾರ್ವಜನಿಕರ ಸ್ವಯಂ ಸಹಭಾಗಿತ್ವದಿಂದ ಮಾತ್ರ ಪ್ರಯೋಜನಕ್ಕೆ ಬರಲಿವೆ ಎಂದರು.

ಸೊಳ್ಳೆ ನಿಯಂತ್ರಣಕ್ಕೆ ಜಿಲ್ಲಾದ್ಯಂತ ಹಲವಾರು ಯೋಜನೆಗಳನ್ನು ರೂಪಿಸಿದ್ದು ವರ್ಷವೀಡಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಆರೋಗ್ಯ ಇಲಾಖೆಯು ಸ್ವಯಂ ಸರ್ವೇಕ್ಷಣೆ ಮಾಡಿ ರೋಗಗಳ ಹರಡುವಿಕೆಗೆ ಕಾರಣ ಕಂಡುಕೊಂಡಿದೆ. ಜಿಲ್ಲಾದ್ಯಂತ 28 ಕಡೆಗಳಲ್ಲಿ ಗಟಾರಗಳಲ್ಲಿ ಕುಡಿಯುವ ನೀರಿನ ಸರಬರಾಜು ಆಗಿ ಪೈಪ್‌ಗಳು ಒಡೆದಿರುವ ಬಗ್ಗೆ ಮಾಹಿತಿಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಅಲ್ಲದೆ ವಿವಿಧ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಸಾಂಕ್ರಾಮಿಕವಲ್ಲದ ರೋಗಗಳ ನಿಯಂತ್ರಣಕ್ಕೂ ಕೇಂದ್ರ ಸರಕಾರ ಮಹತ್ವಾಕಾಂಕ್ಷಿ ಯೋಜನೆ ರೂಪಿಸಿದೆ. ಪ್ರತಿ ಬೂತ್‌,ವಾರ್ಡ್‌ಮಟ್ಟದಲ್ಲಿ ಸಾಂಕ್ರಾಮಿಕವಲ್ಲದ ಮಧುಮೇಹ,ರಕ್ತದ ಒತ್ತಡ ಮುಂತಾದ ರೋಗಗಳ ತಪಾಸಣೆ ಮಾಡಲಾಗುವುದು. ಬಳಿಕ ರೋಗ ಪತ್ತೆಯಾದರೆ ,ಸೂಕ್ತ ಚಿಕಿತ್ಸೆಗೆ ನುರಿತ ತಜ್ಞ ವೈದ್ಯರಿಗೆ ಶಿಫಾರಸು ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕ್ಯಾಪ್ಟನ್‌ ಡಾ.ರಮೇಶ್‌ ರಾವ್‌ ಮಾತನಾಡಿ, ನೀರು ನಿಲ್ಲುವುದೇ ಸೊಳ್ಳೆಗಳ ಸಂತತಿಯ ಉಗಮಕ್ಕೆ ಕಾರಣವಾಗಿದ್ದು, ಸಾರ್ವಜನಿಕರು ಅಲ್ಲಲ್ಲಿ ನೀರು ನಿಲ್ಲಿಸುವುದನ್ನು ತಡೆಯಬೇಕು ಎಂದರು.

ಇದುವರೆಗೆ ಡೆಂಗೆ, ಮೆದುಳುಜ್ವರ, ಮಲೇರಿಯಾ, ಇಲಿಜ್ವರ,ಎಚ್‌1ಎನ್‌1 ಮುಂತಾದ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಜಿಲ್ಲಾ ಕೇಂದ್ರ ಹಾಗೂ ತಾಲೂಕು ಆರೋಗ್ಯ ಪ್ರಾಥಮಿಕ ಕೇಂದ್ರಗಳಲ್ಲಿ ನೀರಿನ ಚೆಕ್‌ಅಪ್‌ಗೆ ಕೇಂದ್ರಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ರೋಗಗಳ ಬಗ್ಗೆ ಆದಷ್ಟು ಮುನ್ನೆಚ್ಚರಿಕೆ ವಹಿಸಬೇಕು ಎಂದರು. ಜಿಲ್ಲಾ ಆರೋಗ್ಯ ಸರ್ವೇಕ್ಷ ಣಾಧಿಕಾರಿ ಡಾ.ವಿನೋದ್‌ ಬೂತೆ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ