ಯಕ್ಷ ರಂಗಭೂಮಿಯ ಇಂದಿನ ಕಲಾವಿದರಲ್ಲಿ ನೀಲ್ಕೋಡ ಶಂಕರ ಹೆಗಡೆ ಒಬ್ಬ ಒಳ್ಳೆಯ ಕಲಾವಿದ. ಪೌರಾಣಿಕ ಹಾಗೂ ಸಾಮಾಜಿಕ ಕಥಾ ಪ್ರಸಂಗಗಳ ಸ್ತ್ರೀ ಪಾತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಅಭಿನಯ ಚತುರ. ಪಾತ್ರದ, ಸನ್ನಿವೇಶದ ಔಚಿತ್ಯ ಮೀರದೇ ಕಥೆಯ ಚೌಕಟ್ಟಿನಲ್ಲಿ ಪಾತ್ರ ನಿರ್ವಹಣೆ ಕಾಪಾಡಿಕೊಂಡ ಅವರು ಸಾಹಿತ್ಯ ಪ್ರಜ್ಞೆ, ರಂಗದ ಮೇಲೆ ಹಿಡಿತಹೊಂದಿದವರು. ಇಡೀ ಪ್ರಸಂಗದಲ್ಲಿ ಆ ಪಾತ್ರ ಎದ್ದು ಕಾಣುವಂತೆ ಮಾಡುವ ನೈಪುಣ್ಯತೆ ಸಾಧಿಸಿದ್ದಾರೆ.
ಆಪ್ತಮಿತ್ರ ಸಿನೇಮಾಧಾರಿತ ನಾಗವಲ್ಲಿ ಯಕ್ಷ ಗಾನದ ನಾಗವಲ್ಲಿ ಪಾತ್ರದ ಯಶಸ್ಸು ಅವರನ್ನು ಸ್ಟಾರ್ ಕಲಾವಿದರ ಪಟ್ಟಕ್ಕೇರಿಸಿತು.
ಸ್ತ್ರೀ ಪಾತ್ರ ಅಭಿನಯಕ್ಕೆ ಸೂಕ್ಷ ್ಮತೆ ಬೇಕು. ಸ್ತ್ರೀ ಸಹಜವಾದ ಒನಪು, ವೈಯ್ಯಾರ ಸ್ವರಭಾವವನ್ನು ನಾಜೂಕಾಗಿ ನಿರ್ವಹಿಸುವ ಅವರು ಸ್ತ್ರೀ ಭಾವನೆಯ ಸ್ಪರ್ಶ ನೀಡುವಲ್ಲಿ ಸಿದ್ದಹಸ್ತರು. ಪುರುಷ ಪಾತ್ರಗಳತ್ತಲೂ ಒಲವು ಬೆಳೆಸಿಕೊಂಡು ನಾಯಕ, ಖಳ ನಾಯಕ ಪಾತ್ರಗಳಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.
ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೆರೆಮನೆ ಶಂಭು ಹೆಗಡೆ, ಮಹಾಬಲ ಹೆಗಡೆ, ಕೃಷ್ಣಯಾಜಿ, ಕೊಂಡದಕುಳಿ ರಾಮಚಂದ್ರ ಹೆಗಡೆ ಮುಂತಾದ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಕಲಾವಿದರೊಟ್ಟಿಗೆ ಸಮರ್ಥವಾಗಿ ಪಾತ್ರ ನಿರ್ವಹಿಸಿದ್ದಾರೆ. ಭಾರತದ ಮಹಾನಗರಗಳಲ್ಲದೇ 8-10 ವಿದೇಶಗಳಲ್ಲೂ ಯಕ್ಷ ಗಾನ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ.
ಮೋಹಿನಿ, ಅಂಬೆ, ದಾಕ್ಷಾಯಿಣಿ, ಪಾರ್ವತಿ, ಸುಭದ್ರೆ, ಪ್ರಭಾವತಿ ಮುಂತಾದ ಪ್ರಮುಖ ಸ್ತ್ರೀ ಪಾತ್ರಗಳು ಜನಪ್ರಿಯ ಗೊಂಡಿವೆ. ಕೃಷ್ಣ, ಕೌರವ, ಕಾರ್ತವೀರ್ಯ, ರಾವಣ ಮುಂತಾದ ಪುರುಷ ಪಾತ್ರಗಳಲ್ಲೂ ಸೈ ಎನಿಸಿಕೊಂಡಿದ್ದಾರೆ.
ಶಂಕರ ಹೆಗಡೆ ಅವರು ಹೊನ್ನಾವರ ತಾಲೂಕಿನ ನೀಲ್ಕೋಡಲ್ಲಿ ವಿಶ್ವನಾಥ ಹೆಗಡೆ-ಪಾರ್ವತಿ ದಂಪತಿ ಮಗನಾಗಿ 9-5-1978 ಜನಿಸಿದರು. ಹೆಂಡತಿ ತೃಪ್ತಿ, ಮಗಳು ದ್ಯುತಿ. ಪಿಯುಸಿವರೆಗೆ ಶಿಕ್ಷ ಣ.
ಕಲಾವಿದರಿಗೆ ಸಂಕಷ್ಟ ಬಂದಾಗ ನೆರವು ನೀಡಲು ಮುತುವರ್ಜಿ ವಹಿಸುವುದು ಅವರ ವಿಶೇಷ ಗುಣ. ಕಣ್ಣಿ ಗಣಪತಿ, ಮಂಜುನಾಥ ಭಂಡಾರಿ ಮಂತಾದ ಕಲಾವಿದರ ಸಹಾಯಾರ್ಥ ಮಾಡಿದ ಯಕ್ಷ ಗಾನಗಳಲ್ಲಿ ಬಹಳ ಕಾಳಜಿ ವಹಿಸಿ ಕೆಲಸ ಮಾಡಿದ್ದಾರೆ. ಅನೇಕ ಸಂಘ ಸಂಸ್ಥೆಗಳು ಇವರಿಗೆ ಪ್ರಶಸ್ತಿ, ಸನ್ಮಾನ ನೀಡಿ ಗೌರವಿಸಿವೆ.
ಲೈನ್ಮನ್ಗೆ ಗುಡ್ ಬೈ ,ನಟನೆಗೆ ಓಕೆ :
ಶಂಕರ ಹೆಗಡೆ ತಮ್ಮ ಯಕ್ಷ ಗಾನ ಯಾನದ ಕುರಿತು ಮಾತನಾಡಿದ್ದು ಹೀಗೆ:
ಪಿಯುಸಿ ಮುಗಿಸಿದೆ. ಒಂದು ವಿಷಯ ಹೋಗಿತ್ತು. ಗುತ್ತಿಗೆ ಆಧಾರದಲ್ಲಿ ಲೈನ್ಮನ್ ಕೆಲಸಕ್ಕೆ ಸೇರಿದೆ. ನಂತರ ನನ್ನ ಸ್ನೇಹಿತನೊಬ್ಬನಿಗೆ ಅರಣ್ಯ ಇಲಾಖೆಯ ವಿದ್ಯುತ್ ಬೇಲಿ ಹಾಕುವ ಕೆಲಸದ ಟೆಂಡರ್ ಸಿಕ್ಕಿತ್ತು. ಅವನ ಜತೆ ಸೇರಿಕೊಂಡೆ.
ಒಮ್ಮೆ ಮಾಳ್ಕೋಡಿಗೆ ಹೋಗುವಾಗ ಕೆರೆಮನೆ ಕೇಂದ್ರದ ಬೋರ್ಡ್ ನೋಡಿದೆ. ಉಚಿತ ಊಟ, ವಸತಿ, ವಿದ್ಯಾರ್ಥಿವೇತನ ಕೊಟ್ಟು ಯಕ್ಷ ಗಾನ ಕಲಿಸಲಾಗುತ್ತದೆ ಎಂದು ಬರೆದಿದ್ದರು. ಅರ್ಜಿ ಹಾಕಿದೆ. ಇಂಟರ್ವ್ಯೂದಲ್ಲಿ ಆಯ್ಕೆಯಾದೆ.
ಅಲ್ಲಿ ವಿದ್ವಾನ್ ಗಣಪತಿ ಭಟ್, ಎ.ಪಿ.ಪಾಠಕ, ಹೆರಂಜಾಲು ಗೋಪಾಲ ಗಾಣಿಗರು ನನ್ನ ಗುರುಗಳು. ಅಲ್ಲಿಂದ ನಾನು ಕಲಾವಿದನಾದೆ.
ನಂತರ ಕೆರೆಮನೆ, ಗುಂಡಬಾಳ, ಮಂದಾರ್ತಿ, ಕಮಲಶಿಲೆ, ಪೆರ್ಡೂರು ಮೇಳಗಳಲ್ಲಿ ತಿರುಗಾಟ ಮಾಡಿ ಈಗ ಜಲವಳ್ಳಿ ಮೇಳದಲ್ಲಿದ್ದೇನೆ. 22 ವರ್ಷಗಳಿಂದ ಯಕ್ಷ ಗಾನ ತಿರುಗಾಟದಲ್ಲಿ ತೊಡಗಿಕೊಂಡಿದ್ದೇನೆ. ಎಲ್ಲ ಸ್ತ್ರೀ ವೇಶಗಳನ್ನೂ ಮಾಡಿದ್ದೇನೆ. ಈಗ ಪುರುಷ ವೇಶಗಳನ್ನೂ ಮಾಡುತ್ತಿದ್ದೇನೆ. ಪೌರಾಣಿಕ ಮತ್ತು ಸಾಮಾಜಿಕ ಪ್ರಸಂಗಗಳೆರಡರಲ್ಲೂ ಪಾತ್ರ ಮಾಡಿದ್ದೇನೆ.
ಆಪ್ತಮಿತ್ರ ಸಿನೇಮಾಧಾರಿತ ನಾಗವಲ್ಲಿ ಯಕ್ಷ ಗಾನದ ನಾಗವಲ್ಲಿ ಪಾತ್ರದ ಯಶಸ್ಸು ಅವರನ್ನು ಸ್ಟಾರ್ ಕಲಾವಿದರ ಪಟ್ಟಕ್ಕೇರಿಸಿತು.
ಸ್ತ್ರೀ ಪಾತ್ರ ಅಭಿನಯಕ್ಕೆ ಸೂಕ್ಷ ್ಮತೆ ಬೇಕು. ಸ್ತ್ರೀ ಸಹಜವಾದ ಒನಪು, ವೈಯ್ಯಾರ ಸ್ವರಭಾವವನ್ನು ನಾಜೂಕಾಗಿ ನಿರ್ವಹಿಸುವ ಅವರು ಸ್ತ್ರೀ ಭಾವನೆಯ ಸ್ಪರ್ಶ ನೀಡುವಲ್ಲಿ ಸಿದ್ದಹಸ್ತರು. ಪುರುಷ ಪಾತ್ರಗಳತ್ತಲೂ ಒಲವು ಬೆಳೆಸಿಕೊಂಡು ನಾಯಕ, ಖಳ ನಾಯಕ ಪಾತ್ರಗಳಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.
ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೆರೆಮನೆ ಶಂಭು ಹೆಗಡೆ, ಮಹಾಬಲ ಹೆಗಡೆ, ಕೃಷ್ಣಯಾಜಿ, ಕೊಂಡದಕುಳಿ ರಾಮಚಂದ್ರ ಹೆಗಡೆ ಮುಂತಾದ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಕಲಾವಿದರೊಟ್ಟಿಗೆ ಸಮರ್ಥವಾಗಿ ಪಾತ್ರ ನಿರ್ವಹಿಸಿದ್ದಾರೆ. ಭಾರತದ ಮಹಾನಗರಗಳಲ್ಲದೇ 8-10 ವಿದೇಶಗಳಲ್ಲೂ ಯಕ್ಷ ಗಾನ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ.
ಮೋಹಿನಿ, ಅಂಬೆ, ದಾಕ್ಷಾಯಿಣಿ, ಪಾರ್ವತಿ, ಸುಭದ್ರೆ, ಪ್ರಭಾವತಿ ಮುಂತಾದ ಪ್ರಮುಖ ಸ್ತ್ರೀ ಪಾತ್ರಗಳು ಜನಪ್ರಿಯ ಗೊಂಡಿವೆ. ಕೃಷ್ಣ, ಕೌರವ, ಕಾರ್ತವೀರ್ಯ, ರಾವಣ ಮುಂತಾದ ಪುರುಷ ಪಾತ್ರಗಳಲ್ಲೂ ಸೈ ಎನಿಸಿಕೊಂಡಿದ್ದಾರೆ.
ಶಂಕರ ಹೆಗಡೆ ಅವರು ಹೊನ್ನಾವರ ತಾಲೂಕಿನ ನೀಲ್ಕೋಡಲ್ಲಿ ವಿಶ್ವನಾಥ ಹೆಗಡೆ-ಪಾರ್ವತಿ ದಂಪತಿ ಮಗನಾಗಿ 9-5-1978 ಜನಿಸಿದರು. ಹೆಂಡತಿ ತೃಪ್ತಿ, ಮಗಳು ದ್ಯುತಿ. ಪಿಯುಸಿವರೆಗೆ ಶಿಕ್ಷ ಣ.
ಕಲಾವಿದರಿಗೆ ಸಂಕಷ್ಟ ಬಂದಾಗ ನೆರವು ನೀಡಲು ಮುತುವರ್ಜಿ ವಹಿಸುವುದು ಅವರ ವಿಶೇಷ ಗುಣ. ಕಣ್ಣಿ ಗಣಪತಿ, ಮಂಜುನಾಥ ಭಂಡಾರಿ ಮಂತಾದ ಕಲಾವಿದರ ಸಹಾಯಾರ್ಥ ಮಾಡಿದ ಯಕ್ಷ ಗಾನಗಳಲ್ಲಿ ಬಹಳ ಕಾಳಜಿ ವಹಿಸಿ ಕೆಲಸ ಮಾಡಿದ್ದಾರೆ. ಅನೇಕ ಸಂಘ ಸಂಸ್ಥೆಗಳು ಇವರಿಗೆ ಪ್ರಶಸ್ತಿ, ಸನ್ಮಾನ ನೀಡಿ ಗೌರವಿಸಿವೆ.
ಲೈನ್ಮನ್ಗೆ ಗುಡ್ ಬೈ ,ನಟನೆಗೆ ಓಕೆ :
ಶಂಕರ ಹೆಗಡೆ ತಮ್ಮ ಯಕ್ಷ ಗಾನ ಯಾನದ ಕುರಿತು ಮಾತನಾಡಿದ್ದು ಹೀಗೆ:
ಪಿಯುಸಿ ಮುಗಿಸಿದೆ. ಒಂದು ವಿಷಯ ಹೋಗಿತ್ತು. ಗುತ್ತಿಗೆ ಆಧಾರದಲ್ಲಿ ಲೈನ್ಮನ್ ಕೆಲಸಕ್ಕೆ ಸೇರಿದೆ. ನಂತರ ನನ್ನ ಸ್ನೇಹಿತನೊಬ್ಬನಿಗೆ ಅರಣ್ಯ ಇಲಾಖೆಯ ವಿದ್ಯುತ್ ಬೇಲಿ ಹಾಕುವ ಕೆಲಸದ ಟೆಂಡರ್ ಸಿಕ್ಕಿತ್ತು. ಅವನ ಜತೆ ಸೇರಿಕೊಂಡೆ.
ಒಮ್ಮೆ ಮಾಳ್ಕೋಡಿಗೆ ಹೋಗುವಾಗ ಕೆರೆಮನೆ ಕೇಂದ್ರದ ಬೋರ್ಡ್ ನೋಡಿದೆ. ಉಚಿತ ಊಟ, ವಸತಿ, ವಿದ್ಯಾರ್ಥಿವೇತನ ಕೊಟ್ಟು ಯಕ್ಷ ಗಾನ ಕಲಿಸಲಾಗುತ್ತದೆ ಎಂದು ಬರೆದಿದ್ದರು. ಅರ್ಜಿ ಹಾಕಿದೆ. ಇಂಟರ್ವ್ಯೂದಲ್ಲಿ ಆಯ್ಕೆಯಾದೆ.
ಅಲ್ಲಿ ವಿದ್ವಾನ್ ಗಣಪತಿ ಭಟ್, ಎ.ಪಿ.ಪಾಠಕ, ಹೆರಂಜಾಲು ಗೋಪಾಲ ಗಾಣಿಗರು ನನ್ನ ಗುರುಗಳು. ಅಲ್ಲಿಂದ ನಾನು ಕಲಾವಿದನಾದೆ.
ನಂತರ ಕೆರೆಮನೆ, ಗುಂಡಬಾಳ, ಮಂದಾರ್ತಿ, ಕಮಲಶಿಲೆ, ಪೆರ್ಡೂರು ಮೇಳಗಳಲ್ಲಿ ತಿರುಗಾಟ ಮಾಡಿ ಈಗ ಜಲವಳ್ಳಿ ಮೇಳದಲ್ಲಿದ್ದೇನೆ. 22 ವರ್ಷಗಳಿಂದ ಯಕ್ಷ ಗಾನ ತಿರುಗಾಟದಲ್ಲಿ ತೊಡಗಿಕೊಂಡಿದ್ದೇನೆ. ಎಲ್ಲ ಸ್ತ್ರೀ ವೇಶಗಳನ್ನೂ ಮಾಡಿದ್ದೇನೆ. ಈಗ ಪುರುಷ ವೇಶಗಳನ್ನೂ ಮಾಡುತ್ತಿದ್ದೇನೆ. ಪೌರಾಣಿಕ ಮತ್ತು ಸಾಮಾಜಿಕ ಪ್ರಸಂಗಗಳೆರಡರಲ್ಲೂ ಪಾತ್ರ ಮಾಡಿದ್ದೇನೆ.