ಆ್ಯಪ್ನಗರ

ಫೆ.16ಕ್ಕೆ ಅಡವಿ ಅಡುಗೆ ಕಾರ್ಯಾಗಾರ

ಶಿರಸಿ : ಅಡವಿ ಅಡುಗೆ ಕಾರ್ಯಾಗಾರ ಕಾರ್ಯಕ್ರಮ ತಾಲೂಕಿನ ಕಳವೆಯ ಕಾನ್ಮನೆಯಲ್ಲಿ ಫೆ. 16ರ ಬೆಳಗ್ಗೆ 10.30ಕ್ಕೆ ನಡೆಯಲಿದೆ. ಮೆಗ್ಸೇಸೆ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಹರೀಶ್‌ ಹಂದೆ ಕಾರ್ಯಕ್ರಮ ಉದ್ಘಾಟಿಸುವರು. ಉಪ ಅರಣ್ಯ ಸಂರಕ್ಷ ಣಾಧಿಕಾರಿ ಎನ್‌. ಡಿ . ಸುದರ್ಶನ್‌, ಯಲ್ಲಾಪುರ ಹಾಸಣಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್‌. ಎನ್‌.ಹೆಗಡೆ ಗೋರ್ಸಗದ್ದೆ, ಹಿರಿಯ ಸಾಮಾಜಿಕ ಕಾರ್ಯಕರ್ತ ಆರ್‌. ಎಸ್‌.ಹೆಗಡೆ ಹರಗಿ ಭಾಗವಹಿಸುವರು. ಕಳವೆ ಗ್ರಾಮದ ಹಿರಿಯರಾದ ಈರಾ ನಾರಾಯಣ ಗೌಡ ಅಧ್ಯಕ್ಷ ತೆ ವಹಿಸುವರು. ಸೆಲ್ಕೋ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ್‌ ಹೆಗಡೆ ಉಪಸ್ಥಿತರಿರುವರು.

Vijaya Karnataka 14 Feb 2019, 5:00 am
ಶಿರಸಿ : ಅಡವಿ ಅಡುಗೆ ಕಾರ್ಯಾಗಾರ ಕಾರ್ಯಕ್ರಮ ತಾಲೂಕಿನ ಕಳವೆಯ ಕಾನ್ಮನೆಯಲ್ಲಿ ಫೆ. 16ರ ಬೆಳಗ್ಗೆ 10.30ಕ್ಕೆ ನಡೆಯಲಿದೆ. ಮೆಗ್ಸೇಸೆ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಹರೀಶ್‌ ಹಂದೆ ಕಾರ್ಯಕ್ರಮ ಉದ್ಘಾಟಿಸುವರು. ಉಪ ಅರಣ್ಯ ಸಂರಕ್ಷ ಣಾಧಿಕಾರಿ ಎನ್‌. ಡಿ . ಸುದರ್ಶನ್‌, ಯಲ್ಲಾಪುರ ಹಾಸಣಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್‌. ಎನ್‌.ಹೆಗಡೆ ಗೋರ್ಸಗದ್ದೆ, ಹಿರಿಯ ಸಾಮಾಜಿಕ ಕಾರ್ಯಕರ್ತ ಆರ್‌. ಎಸ್‌.ಹೆಗಡೆ ಹರಗಿ ಭಾಗವಹಿಸುವರು. ಕಳವೆ ಗ್ರಾಮದ ಹಿರಿಯರಾದ ಈರಾ ನಾರಾಯಣ ಗೌಡ ಅಧ್ಯಕ್ಷ ತೆ ವಹಿಸುವರು. ಸೆಲ್ಕೋ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ್‌ ಹೆಗಡೆ ಉಪಸ್ಥಿತರಿರುವರು.
Vijaya Karnataka Web adavi cooking workshop on february 16th
ಫೆ.16ಕ್ಕೆ ಅಡವಿ ಅಡುಗೆ ಕಾರ್ಯಾಗಾರ


ಸಸ್ಯ ಪ್ರದರ್ಶನ, ಅಡುಗೆ ಪ್ರಾತ್ಯಕ್ಷಿಕೆ : ಶತಮಾನಗಳ ಹಿಂದೆ ಮಲೆನಾಡು, ಕರಾವಳಿಯ ತಾಯಂದಿರು ಅಡುಗೆ ತಯಾರಿಯಲ್ಲಿ ಬಳಸುತ್ತಿದ್ದ ಸಸ್ಯಗಳ ಮರು ನೆನಪು ಮಾಡುವ ವಿಶೇಷ ಕಾರ್ಯಕ್ರಮ ಇದಾಗಿದೆ. ಪಶ್ಚಿಮ ಘಟ್ಟದ 100 ಕ್ಕೂ ಹೆಚ್ಚು ಸಸ್ಯ ಬಳಸಿ ತಂಬುಳಿ, ಕಷಾಯ, ಚಟ್ನಿ, ಸಾಂಬಾರ್‌, ಕಟ್ನೆ, ಸಾಸ್ಮೆ,ಅಮ್ಟಿ, ಫಲ್ಯ, ಬಂಪು ತಯಾರಿಗಳ ಪ್ರಾತ್ಯಕ್ಷಿಕೆ ನಡೆಸುವರು. ಕರಾವಳಿ, ಮಲೆನಾಡಿನ 25 ಮಹಿಳೆಯರು ಎರಡು ದಿನದ ಸಮಯದಲ್ಲಿ 75 ರೀತಿಯ ಅಡುಗೆಗಳ ಪ್ರಾತ್ಯಕ್ಷಿಕೆ ನೀಡುವರು.

ಬಿದರಕ್ಕಿಯ ಅನ್ನ, ಮರ ಬಾಳೆಕಾಯಿ ದೋಸೆ, ಕಾಡರಿಶಿನದ ಮಣ್ಣಿ ಮುಂತಾದ ಹಲವು ಅಡುಗೆ ತಯಾರಿಸುವರು. ಭವಿಷ್ಯದಲ್ಲಿ ನಮ್ಮ ಕಾಡಿನ ಕರಡಿ ಸೊಪ್ಪು, ಒಂದೆಲಗ, ಬಿಳಿ ಕೌರಿ, ಶಿವಣೆ, ದಾಲ್ಚಿನ್ನಿ, ಬಲಗಣೆ, ಬಿಳಿಮತ್ತಿ, ಅಮೃತಬಳ್ಳಿ, ಮಸೆ

ಮುಂತಾದ ಹಲವು ಸಸ್ಯಗಳನ್ನು ಕೃಷಿಯಲ್ಲಿ ಅಭಿವೃದ್ಧಿಗೊಳಿಸಲು ಅವಕಾಶಗಳಿವೆ. ಚಹಾ, ಕಾಫಿ ಬಳಕೆಗೆ ಬರುವ ಪೂರ್ವದಲ್ಲಿದ್ದ 60 ಕ್ಕೂ ಹೆಚ್ಚು ಕಷಾಯಗಳನ್ನು ಈಗಾಗಲೇ ಗುರುತಿಸಲಾಗಿದೆ. ಕುನ್ನೇರಲು, ಎಕನಾಯಕನ ಎಲೆ ಕಷಾಯಗಳು ಚಹಾದಷ್ಟೇ ಮಹತ್ವ ಹೊಂದಿದ್ದರೂ ಮಲೆನಾಡು ಮರೆಯುತ್ತಿದೆ. ನೀರನ್ನು ಕಡಿಮೆ ಬಳಸಿ ಬೆಳೆಯುವ ಈ ಸಸ್ಯಗಳು ಬರಗಾಲದಲ್ಲಿ ಆಹಾರ ಸುಸ್ಥಿರತೆಯ ಆಧಾರವಾಗಿವೆ. ಇವು ಭವಿಷ್ಯದಲ್ಲಿ ಪರಿಸರ ಸ್ನೇಹಿ ಅಭ್ಯುದಯದ ದಾರಿಯಾಗಬಹುದು.

ತಜ್ಞರ ಮಾರ್ಗದರ್ಶನ : ಅಡುಗೆ ಪ್ರಾತ್ತಕ್ಷಿಕೆಯ ಜೊತೆಯಲ್ಲಿ ತಜ್ಞ ಸಲಹೆಗಳನ್ನು ನೀಡಲು ವೈದ್ಯರು ಭಾಗವಹಿಸುವರು. ಚಿಕ್ಕಮಗಳೂರಿನ ಕೊಪ್ಪ ಆಯುರ್ವೇದ ಕಾಲೇಜಿನ ವೈದ್ಯ ಡಾ. ಭಾನು, ಸಾಗರದ ಡಾ.ಪತಂಜಲಿ, ಗೋಕರ್ಣದ ವೇದಶ್ರವ ಶರ್ಮಾ, ಜೊಯಿಡಾ ಗುಂದದ ಖ್ಯಾತ ನಾಟಿ ವೈದ್ಯ ಶ್ರೀಧರ ದೇಸಾಯಿ, ಜಿ. ಎಸ್‌. ಹೆಗಡೆ ಲಕ್ಕಿಸವಲು ಸಸ್ಯ ಬಳಕೆ ಕುರಿತು ಮಾಹಿತಿ ನೀಡುವರು. ಕರ್ನಾಟಕ ಅರಣ್ಯ ಇಲಾಖೆಯ ಶಿರಸಿ ವಿಭಾಗದ ವಿವಿಧ ಅರಣ್ಯ ನರ್ಸರಿ ಹಾಗೂ ಯೂಥ್‌ ಫಾರ್‌

ಸೇವಾ ಸಂಸ್ಥೆಯ ಉಮಾಪತಿ ಕೆ.ವಿ. ಯವರ ಸಹಕಾರದೊಂದಿಗೆ ಅಡುಗೆಗೆ ಬಳಸುವ ಸಸ್ಯ ಪ್ರದರ್ಶನ ನಡೆಯಲಿದೆ ಎಂದು ಕಾರ್ಯಕ್ರಮ ಸಂಯೋಜಕ ಶಿವಾನಂದ ಕಳವೆ ತಿಳಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ