ಆ್ಯಪ್ನಗರ

ಮತದಾನ ಮಾಡಲು ಯುವಜನತೆಗೆ ಸಲಹೆ

ಸಿದ್ದಾಪುರ : ಪಟ್ಟಣದ ಅವರಗುಪ್ಪದಲ್ಲಿರುವ ಡಿಪೊ್ಲಮಾ ಕಾಲೇಜ್‌ನಲ್ಲಿಇತ್ತೀಚೆಗೆ ಮತದಾರ ಸಾಕ್ಷರತಾ ಸಂಘವನ್ನು ತಹಸೀಲ್ದಾರ್‌ ಗೀತಾ ಸಿ.ಜಿ. ಉದ್ಘಾಟಿಸಿದರು.

Vijaya Karnataka 29 Sep 2019, 5:00 am
ಸಿದ್ದಾಪುರ : ಪಟ್ಟಣದ ಅವರಗುಪ್ಪದಲ್ಲಿರುವ ಡಿಪೊ್ಲಮಾ ಕಾಲೇಜ್‌ನಲ್ಲಿಇತ್ತೀಚೆಗೆ ಮತದಾರ ಸಾಕ್ಷರತಾ ಸಂಘವನ್ನು ತಹಸೀಲ್ದಾರ್‌ ಗೀತಾ ಸಿ.ಜಿ. ಉದ್ಘಾಟಿಸಿದರು.
Vijaya Karnataka Web 501027SDPR-3_24


ಅವರು ಮಾತನಾಡಿ, ದೇಶದ ಹಿತದೃಷ್ಟಿಯಿಂದ ಮತದಾನ ಮಾಡುವುದು ಅವಶ್ಯಕವಾಗಿದ್ದು ಯುವಜನತೆ ಚುನಾವಣೆಯ ದಿನ ಅಸಡ್ಡೆ ಮಾಡದೆ ಮತದಾನ ಮಾಡಬೇಕು. ಈಗಾಗಲೇ 18 ವರ್ಷ ತುಂಬಿದವರಿಗೆ ಮತದಾರರ ಚೀಟಿಯನ್ನು ನೀಡಲಾಗಿದ್ದು ಇದರಲ್ಲಿಪರಿಷ್ಕರಣೆ ಮಾಡಲು ಸೆ.1 ರಿಂದ ಅ.15ರವರೆಗೆ ಅಭಿಯಾನ ಪ್ರಾರಂಭಿಸಲಾಗಿದ್ದು ತಮ್ಮ ಮತದಾರ ಚೀಟಿಯಲ್ಲಿಯಾವುದಾದರೂ ದೋಷಗಳಿದ್ದರೆ ಅದನ್ನು ತಿದ್ದುಪಡಿ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ತಾಲೂಕು ಕಚೇರಿ,ಸಾಮಾನ್ಯ ಸೇವಾ ಕೇಂದ್ರ,ಗ್ರಾ.ಪಂ.ಹಾಗೂ ನಾಡಕಚೇರಿಯಲ್ಲಿಪರಿಶೀಲನೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎನ್‌ವಿಎಸ್‌ಪಿ ಮೊಬೈಲ್‌ ಆಪ್‌ನ ಮೂಲಕವೂ ಪರಿಶೀಲಿಸಿಕೊಳ್ಳಬಹುದು. ಮತಗಟ್ಟೆ ಅಧಿಕಾರಿಗಳು ಮನಮನೆ ಭೇಟಿಗೆ ಬಂದಾಗಲೂ ಪರಿಶೀಲಿಸಿ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯ ಅಪ್ಪಾಜಿಗೋಳ ಮತದಾನದಲ್ಲಿವಿದ್ಯಾರ್ಥಿಗಳ ಪಾತ್ರ ಮತ್ತು ಜವಾಬ್ದಾರಿಗಳ ಬಗ್ಗೆ ಮಾತನಾಡಿದರು. ಮತದಾರ ಸಾಕ್ಷರತಾ ಸಂಘದ ಸಂಚಾಲಕ ಪ್ರಶಾಂತಕುಮಾರ್‌ ಎ.ಡಿ.ಪ್ರಾಸ್ತಾವಿಕ ಮಾತನಾಡಿದರು.ವಿದ್ಯಾರ್ಥಿನಿ ಮೃಘನಾ ಸ್ವಾಗತಿಸಿದರು.ನಾರಾಯಣ ನಿರೂಪಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ