ಯಲ್ಲಾಪುರ: ಯಲ್ಲಾಪುರ, ಹಳಿಯಾಳ,ಶಿರಸಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಸಮಾವೇಶ ಪಟ್ಟಣದ ವೆಂಕಟ್ರಮಣ ಮಠದ ವೇದವ್ಯಾಸ ಸಭಾಭವನದಲ್ಲಿ ಗುರುವಾರ ನಡೆಯಿತು.
ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವ ಅನಂತಕುಮಾರ ಹೆಗಡೆ ಈ ಸಮಾವೇಶ ಉದ್ಘಾಟಿಸಿ, ಬೂತ್ ಮಟ್ಟದಲ್ಲಿ ಪಕ್ಷ ದ ಅಭ್ಯರ್ಥಿ ಗೆಲ್ಲುವಂತೆ ಕಾರ್ಯಕರ್ತರು ಶ್ರಮಿಸಬೇಕು. ಅರ್ಜುನನ ಹಾಗೇ ಗೆಲುವಿನ ನಿರ್ದಿಷ್ಟ ಗುರಿಯೆಡೆಗೆ ನಮ್ಮ ದೃಷ್ಟಿ ಇರಲಿ. ಪಕ್ಷ ದ ಅಭ್ಯರ್ಥಿಯನ್ನು ಗೆಲ್ಲಿಸಲು ವ್ಯವಸ್ಥಿತ ಕಾರ್ಯಯೋಜನೆ ಹಮ್ಮಿಕೊಳ್ಳಬೇಕು ಎಂದರು. ಕಾಂಗ್ರೆಸ್ ಶಾಸಕರಿರುವ ಪ್ರತಿ ಕ್ಷೇತ್ರದಲ್ಲೂ ಆಯಾ ಕ್ಷೇತ್ರಗಳಲ್ಲಿನ ಆಡಳಿತ ವೈಫಲ್ಯದ ಬಗ್ಗೆ ಬಿಜೆಪಿ ಪಕ್ಷ ವು ಚಾರ್ಜಶೀಟ್ ಸಲ್ಲಿಸಲಿದೆ. ಈ ದೇಶದಿಂದ ಹಾಗೂ ನಮ್ಮ ರಾಜ್ಯದಿಂದ ಕಾಂಗ್ರೆಸ್ ಪಕ್ಷ ವನ್ನು ಬೇರು ಸಹಿತ ಕಿತ್ತುಹಾಕಬೇಕು. ಈ ಕೆಲಸಕ್ಕೆ ಯಲ್ಲಾಪುರದ ಈ ಸಮಾವೇಶವೇ ನಾಂದಿಯಾಗಲಿ. ಬೂತ್ ಮಟ್ಟದ ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ಕೇಂದ್ರ ಸರಕಾರದ ಸಾಧನೆಯನ್ನು ಮನವರಿಕೆ ಮಾಡಿಕೊಡಿ ಎಂದ ಅವರು ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಕೇಂದ್ರ ನಾಯಕತ್ವ ತೆಗೆದುಕೊಂಡ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದರು.
ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ ಯುವ ಮೋರ್ಚಾದಿಂದ ಕರುನಾಡ ಯುವ ಮೋರ್ಚಾ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗುವುದು. ಬಿಜೆಪಿಯ ಯಾವ ಕಾರ್ಯಕರ್ತರೂ ವಿಸಿಟಿಂಗ್ ಕಾರ್ಡ್ ಕಾರ್ಯಕರ್ತರಲ್ಲ. ಭಾರತೀಯ ಸಂಸ್ಕೃತಿ ಸಾರುವ ಯುವ ಪಡೆಯೇ ಪಕ್ಷ ದಲ್ಲಿದ್ದು ಬೂತ್ ಮಟ್ಟದಲ್ಲಿ ಯಶಸ್ವಿ ಕಾರ್ಯ ನಿರ್ವಹಿಸಿ ಕರ್ನಾಟಕದಲ್ಲಿ ಬಿಜೆಪಿ ಸರಕಾರವನ್ನು ತಂದೇ ಸಿದ್ಧ. ಜಿಲ್ಲೆಯ ಆರೂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಭಾರಿಸಲಿದ್ದಾರೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಪ್ರಮುಖ ವಿಕಾಸ ಪುತ್ತೂರು ಮುಖ್ಯ ವಕ್ತಾರರಾಗಿ ಆಗಮಿಸಿದ್ದರು.ಮಂಜುನಾಥ ಜನ್ನು, ಮಹೇಶ ಪೂಜಾರಿ,ಗುರುಪ್ರಸಾದ ಹೆಗಡೆ, ಅನೀಲ್ ಮುತ್ನಾಳ, ತಾಲೂಕು ಬಿಜೆಪಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಮುಂತಾದವರು ಇದ್ದರು. ನರಸಿಂಹ ಕೋಣೆಮನೆ ನಿರ್ವಹಿಸಿದರು.
ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವ ಅನಂತಕುಮಾರ ಹೆಗಡೆ ಈ ಸಮಾವೇಶ ಉದ್ಘಾಟಿಸಿ, ಬೂತ್ ಮಟ್ಟದಲ್ಲಿ ಪಕ್ಷ ದ ಅಭ್ಯರ್ಥಿ ಗೆಲ್ಲುವಂತೆ ಕಾರ್ಯಕರ್ತರು ಶ್ರಮಿಸಬೇಕು. ಅರ್ಜುನನ ಹಾಗೇ ಗೆಲುವಿನ ನಿರ್ದಿಷ್ಟ ಗುರಿಯೆಡೆಗೆ ನಮ್ಮ ದೃಷ್ಟಿ ಇರಲಿ. ಪಕ್ಷ ದ ಅಭ್ಯರ್ಥಿಯನ್ನು ಗೆಲ್ಲಿಸಲು ವ್ಯವಸ್ಥಿತ ಕಾರ್ಯಯೋಜನೆ ಹಮ್ಮಿಕೊಳ್ಳಬೇಕು ಎಂದರು. ಕಾಂಗ್ರೆಸ್ ಶಾಸಕರಿರುವ ಪ್ರತಿ ಕ್ಷೇತ್ರದಲ್ಲೂ ಆಯಾ ಕ್ಷೇತ್ರಗಳಲ್ಲಿನ ಆಡಳಿತ ವೈಫಲ್ಯದ ಬಗ್ಗೆ ಬಿಜೆಪಿ ಪಕ್ಷ ವು ಚಾರ್ಜಶೀಟ್ ಸಲ್ಲಿಸಲಿದೆ. ಈ ದೇಶದಿಂದ ಹಾಗೂ ನಮ್ಮ ರಾಜ್ಯದಿಂದ ಕಾಂಗ್ರೆಸ್ ಪಕ್ಷ ವನ್ನು ಬೇರು ಸಹಿತ ಕಿತ್ತುಹಾಕಬೇಕು. ಈ ಕೆಲಸಕ್ಕೆ ಯಲ್ಲಾಪುರದ ಈ ಸಮಾವೇಶವೇ ನಾಂದಿಯಾಗಲಿ. ಬೂತ್ ಮಟ್ಟದ ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ಕೇಂದ್ರ ಸರಕಾರದ ಸಾಧನೆಯನ್ನು ಮನವರಿಕೆ ಮಾಡಿಕೊಡಿ ಎಂದ ಅವರು ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಕೇಂದ್ರ ನಾಯಕತ್ವ ತೆಗೆದುಕೊಂಡ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದರು.
ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ ಯುವ ಮೋರ್ಚಾದಿಂದ ಕರುನಾಡ ಯುವ ಮೋರ್ಚಾ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗುವುದು. ಬಿಜೆಪಿಯ ಯಾವ ಕಾರ್ಯಕರ್ತರೂ ವಿಸಿಟಿಂಗ್ ಕಾರ್ಡ್ ಕಾರ್ಯಕರ್ತರಲ್ಲ. ಭಾರತೀಯ ಸಂಸ್ಕೃತಿ ಸಾರುವ ಯುವ ಪಡೆಯೇ ಪಕ್ಷ ದಲ್ಲಿದ್ದು ಬೂತ್ ಮಟ್ಟದಲ್ಲಿ ಯಶಸ್ವಿ ಕಾರ್ಯ ನಿರ್ವಹಿಸಿ ಕರ್ನಾಟಕದಲ್ಲಿ ಬಿಜೆಪಿ ಸರಕಾರವನ್ನು ತಂದೇ ಸಿದ್ಧ. ಜಿಲ್ಲೆಯ ಆರೂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಭಾರಿಸಲಿದ್ದಾರೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಪ್ರಮುಖ ವಿಕಾಸ ಪುತ್ತೂರು ಮುಖ್ಯ ವಕ್ತಾರರಾಗಿ ಆಗಮಿಸಿದ್ದರು.ಮಂಜುನಾಥ ಜನ್ನು, ಮಹೇಶ ಪೂಜಾರಿ,ಗುರುಪ್ರಸಾದ ಹೆಗಡೆ, ಅನೀಲ್ ಮುತ್ನಾಳ, ತಾಲೂಕು ಬಿಜೆಪಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಮುಂತಾದವರು ಇದ್ದರು. ನರಸಿಂಹ ಕೋಣೆಮನೆ ನಿರ್ವಹಿಸಿದರು.