ಆ್ಯಪ್ನಗರ

ದೇವರ ಕೃಪೆ ಇದ್ದರೆ ಎಲ್ಲ ಕಾರ್ಯವೂ ಸುಸೂತ್ರ

ಕುಮಟಾ : ಯೋಗ, ಪ್ರಯತ್ನ ಮತ್ತು ದೇವರ ಕೃಪೆ ಇದ್ದರೆ ಎಲ್ಲ ಕಾರ್ಯವೂ ಸುಸೂತ್ರವಾಗಿ ನಡೆಯುತ್ತದೆ ಎಂದು ಕರ್ಕಿ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರಿ ಭಾರತೀ ಸ್ವಾಮೀಜಿಯವರು ಹೇಳಿದರು.

Vijaya Karnataka 5 Dec 2018, 5:00 am
ಕುಮಟಾ : ಯೋಗ, ಪ್ರಯತ್ನ ಮತ್ತು ದೇವರ ಕೃಪೆ ಇದ್ದರೆ ಎಲ್ಲ ಕಾರ್ಯವೂ ಸುಸೂತ್ರವಾಗಿ ನಡೆಯುತ್ತದೆ ಎಂದು ಕರ್ಕಿ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರಿ ಭಾರತೀ ಸ್ವಾಮೀಜಿಯವರು ಹೇಳಿದರು.
Vijaya Karnataka Web KWR-PHT 3 KMT 1


ಪಟ್ಟಣದ ಹೊಸ ಹೆರವಟ್ಟಾದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಲಕ್ಷ್ಮೀ ನಾರಾಯಣ ಮಠ ಕಾಮಗಾರಿಯನ್ನು ವೀಕ್ಷಿಸಿ ಅವರು ಮಾತನಾಡಿದರು. ಶ್ರೀ ಲಕ್ಷ್ಮೀನಾರಾಯಣ ಮಠದ ಅಧ್ಯಕ್ಷ ರಾಜೇಶ ಶೇಟ್‌ ಅವರು ಮಠದ ಕಾಮಗಾರಿಯ ಬಗ್ಗೆ ಶ್ರೀಗಳಿಗೆ ವಿವರಿಸಿದರು. ಬಳಿಕ ದಾನಿಗಳು ಶ್ರೀಗಳ ಉಪಸ್ಥಿತಿಯಲ್ಲಿ ಕಾಮಗಾರಿಗೆ ಆರ್ಥಿಕ ನೆರವು ನೀಡಿದರು.

ಈ ಸಂದರ್ಭದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಮಧುಸೂದನ ಶೇಟ್‌, ಯುವಕ ಸಂಘದ ಅಧ್ಯಕ್ಷ ಪ್ರವೀಣ ಶೇಟ್‌, ಮಹಿಳಾ ಸಂಘದ ಅಧ್ಯಕ್ಷೆ ಪುಷ್ಪಾ ಶೆಟ್‌, ಸಮಾಜದ ಪ್ರಮುಖರಾದ ಮಹಾಭಲೇಶ್ವರ ಶೇಟ್‌, ರತ್ನಾಕರ ಶೇಟ್‌, ಶ್ರೀಧರ ಶೇಟ್‌ ಮೂರೂರು, ರಾಮದಾಸ ಶೇಟ್‌, ಕುಮಾರ ಶೇಟ್‌, ದತ್ತಾತ್ರಯ ಶೇಟ್‌, ಪ್ರಶಾಂತ ಶೇಟ್‌, ಶ್ರೀಪಾದ ಶೇಟ್‌, ಗಣಪತಿ ದಿವಾಕರ, ಸೇರಿದಂತೆ ನೂರಾರು ದೈವಜ್ಞ ಬ್ರಾಹ್ಮಣ ಸಮಾಜದ ಬಾಂಧವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ