ಶಿರಸಿ : ರಾಜ್ಯದಲ್ಲಿಸಹಕಾರಿ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಸಹಕಾರ ಕಾಯಿದೆಗೆ ತಿದ್ದುಪಡಿ ತರಲು ಸರಕಾರ ಚಿಂತನೆ ನಡೆಸಿದೆ ಎಂದು ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಶನಿವಾರ ತಾಲೂಕಿನ ಹಾರೂಗಾರ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಉದ್ಘಾಟನಾ ಸಮಾರಂಭದಲ್ಲಿಅವರು ಮಾತನಾಡಿದರು.
ಕ್ರಮದ ಭರವಸೆ : ಸಹಕಾರಿ ಕ್ಷೇತ್ರದಲ್ಲಿಹಲವು ಕುಂದುಕೊರತೆಗಳಿದ್ದು, ಅದರ ನಿವಾರಣೆಗೆ ಸಾಯಿನಾಥನ್ ವರದಿ ಹಲವು ಸೂಚನೆಗಳನ್ನು ನೀಡಿದೆ. ಆ ಪ್ರಕಾರ ಸರಕಾರದ ನೂತನ ಸಹಕಾರಿ ಸಚಿವರಿಗೆ ಕಾಯ್ದೆ ತಿದ್ದುಪಡಿ ಮೂಲಕ ಸೂಕ್ತ ಕ್ರಮ ಕೈಗೊಳ್ಳಲು ಈಗಾಗಲೇ ಮನವಿ ಮಾಡಲಾಗಿದೆ. ಸೂಕ್ತ ತಿದ್ದುಪಡಿಮಾಡುವ ವಿಶ್ವಾಸ ಇದೆ ಎಂದು ಹೇಳಿದರು.
ಸಹಕಾರ ಕ್ಷೇತ್ರದಲ್ಲಿಹಿಂದುಳಿದ ಹಲವು ಜಿಲ್ಲೆಗಳ ರೈತರ ಸ್ಥಿತಿ ಗಮನಿಸಿದಾಗ ಜಿಲ್ಲೆಯ ಪ್ರಗತಿ ಮತ್ತು ಸಾಧನೆ ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಹಕಾರಿ ಕ್ಷೇತ್ರ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇನ್ನಷ್ಟು ರಚನಾತ್ಮಕ ಚಿಂತನೆ ನಡೆಸುವ ಅವಶ್ಯಕತೆ ಇದೆ ಎಂದರು.
ನಿಸ್ವಾರ್ಥ ಸೇವೆಯಿಂದ ಜಿಲ್ಲೆಯ ಸಹಕಾರಿ ಕ್ಷೇತ್ರ ಈಗಾಗಲೇ ರಾಜ್ಯದಲ್ಲಿಗುರುತಿಸಿಕೊಂಡಿದೆ. ಆದರೆ ಇದೊಂದು ಪೇಟೆಯಲ್ಲಿನ ಅಂಗಡಿಯಂತಾಗದೆ ಕೃಷಿ ಕ್ಷೇತ್ರದಲ್ಲಿಹೊಸತನ್ನು ಕಂಡುಕೊಳ್ಳುವ ಕ್ಷೇತ್ರವಾಗಿ ನಿಲ್ಲಬೇಕೆಂದು ಆಶಿಸಿದರು.
ರತ್ನತ್ರಯರಿಗೆ ಸನ್ಮಾನ... ಸಮಾರಂಭದಲ್ಲಿರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಶಾಂತಾರಾಮ ಹೆಗಡೆ ಶೀಗೆಹಳ್ಳಿ, ಜಿ.ಎಂ. ಹೆಗಡೆ ಹುಳಗೋಳ, ಜಿ.ಟಿ. ಹೆಗಡೆ ತಟ್ಟೀಸರ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸಂಸ್ಥೆಯ ಹಿಂದಿನ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ನಿವೃತ್ತ ಸಿಬ್ಬಂದಿಯರನ್ನು ಸನ್ಮಾನಿಸಲಾಯಿತು.
ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಕದಂಬ ಸೌಹಾರ್ದ ಸಂಘದ ಅಧ್ಯಕ್ಷ ಶಂಭುಲಿಂಗ ಹೆಗಡೆ, ಎಮ್ ಇಎಸ್ ಅಧ್ಯಕ್ಷ ಜಿ.ಎಮ್ ಹೆಗಡೆ ಮುಳಖಂಡ, ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಶ್ರೀಧರ ಮಹಾಬಲೇಶ್ವರ ಹೆಗಡೆ, ಉಪಾಧ್ಯಕ್ಷ ಕೆ.ಆರ್.ಹೆಗಡೆ ಅಮ್ಮಚ್ಚಿ, ಗ್ರಾ.ಪಂ ಅಧ್ಯಕ್ಷೆ ಸರಸ್ವತಿ ಹೆಗಡೆ, ಸಹಕಾರಿ ಸಂಘಗಳ ಉಪ ನಿಬಂಧಕಿ ಸುಜಾತಾ ಮುಂತಾದವರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಗುರುಪಾದ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು.
ಶನಿವಾರ ತಾಲೂಕಿನ ಹಾರೂಗಾರ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಉದ್ಘಾಟನಾ ಸಮಾರಂಭದಲ್ಲಿಅವರು ಮಾತನಾಡಿದರು.
ಕ್ರಮದ ಭರವಸೆ : ಸಹಕಾರಿ ಕ್ಷೇತ್ರದಲ್ಲಿಹಲವು ಕುಂದುಕೊರತೆಗಳಿದ್ದು, ಅದರ ನಿವಾರಣೆಗೆ ಸಾಯಿನಾಥನ್ ವರದಿ ಹಲವು ಸೂಚನೆಗಳನ್ನು ನೀಡಿದೆ. ಆ ಪ್ರಕಾರ ಸರಕಾರದ ನೂತನ ಸಹಕಾರಿ ಸಚಿವರಿಗೆ ಕಾಯ್ದೆ ತಿದ್ದುಪಡಿ ಮೂಲಕ ಸೂಕ್ತ ಕ್ರಮ ಕೈಗೊಳ್ಳಲು ಈಗಾಗಲೇ ಮನವಿ ಮಾಡಲಾಗಿದೆ. ಸೂಕ್ತ ತಿದ್ದುಪಡಿಮಾಡುವ ವಿಶ್ವಾಸ ಇದೆ ಎಂದು ಹೇಳಿದರು.
ಸಹಕಾರ ಕ್ಷೇತ್ರದಲ್ಲಿಹಿಂದುಳಿದ ಹಲವು ಜಿಲ್ಲೆಗಳ ರೈತರ ಸ್ಥಿತಿ ಗಮನಿಸಿದಾಗ ಜಿಲ್ಲೆಯ ಪ್ರಗತಿ ಮತ್ತು ಸಾಧನೆ ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಹಕಾರಿ ಕ್ಷೇತ್ರ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇನ್ನಷ್ಟು ರಚನಾತ್ಮಕ ಚಿಂತನೆ ನಡೆಸುವ ಅವಶ್ಯಕತೆ ಇದೆ ಎಂದರು.
ನಿಸ್ವಾರ್ಥ ಸೇವೆಯಿಂದ ಜಿಲ್ಲೆಯ ಸಹಕಾರಿ ಕ್ಷೇತ್ರ ಈಗಾಗಲೇ ರಾಜ್ಯದಲ್ಲಿಗುರುತಿಸಿಕೊಂಡಿದೆ. ಆದರೆ ಇದೊಂದು ಪೇಟೆಯಲ್ಲಿನ ಅಂಗಡಿಯಂತಾಗದೆ ಕೃಷಿ ಕ್ಷೇತ್ರದಲ್ಲಿಹೊಸತನ್ನು ಕಂಡುಕೊಳ್ಳುವ ಕ್ಷೇತ್ರವಾಗಿ ನಿಲ್ಲಬೇಕೆಂದು ಆಶಿಸಿದರು.
ರತ್ನತ್ರಯರಿಗೆ ಸನ್ಮಾನ... ಸಮಾರಂಭದಲ್ಲಿರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಶಾಂತಾರಾಮ ಹೆಗಡೆ ಶೀಗೆಹಳ್ಳಿ, ಜಿ.ಎಂ. ಹೆಗಡೆ ಹುಳಗೋಳ, ಜಿ.ಟಿ. ಹೆಗಡೆ ತಟ್ಟೀಸರ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸಂಸ್ಥೆಯ ಹಿಂದಿನ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ನಿವೃತ್ತ ಸಿಬ್ಬಂದಿಯರನ್ನು ಸನ್ಮಾನಿಸಲಾಯಿತು.
ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಕದಂಬ ಸೌಹಾರ್ದ ಸಂಘದ ಅಧ್ಯಕ್ಷ ಶಂಭುಲಿಂಗ ಹೆಗಡೆ, ಎಮ್ ಇಎಸ್ ಅಧ್ಯಕ್ಷ ಜಿ.ಎಮ್ ಹೆಗಡೆ ಮುಳಖಂಡ, ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಶ್ರೀಧರ ಮಹಾಬಲೇಶ್ವರ ಹೆಗಡೆ, ಉಪಾಧ್ಯಕ್ಷ ಕೆ.ಆರ್.ಹೆಗಡೆ ಅಮ್ಮಚ್ಚಿ, ಗ್ರಾ.ಪಂ ಅಧ್ಯಕ್ಷೆ ಸರಸ್ವತಿ ಹೆಗಡೆ, ಸಹಕಾರಿ ಸಂಘಗಳ ಉಪ ನಿಬಂಧಕಿ ಸುಜಾತಾ ಮುಂತಾದವರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಗುರುಪಾದ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು.