ಆ್ಯಪ್ನಗರ

ವಿಕಲತೆಯ ಮಧ್ಯೆಯೂ ಉತ್ಸಾಹ

ಶಿರಸಿ : ಇವರು ಎಲ್ಲರಂತೆ ದೈಹಿಕವಾಗಿ ಸದೃಢರಲ್ಲ...ಆದರೆ ಉತ್ಸಾಹಕ್ಕೇನೂ ಕೊರತೆಯಿಲ್ಲ..ಅಂತೆಯೇ ದೈಹಿಕ ನ್ಯೂನ್ಯತೆಯ ಮಧ್ಯೆಯೂ ಆಟೋಟ ಚಟುವಟಿಕೆಗಳಲ್ಲಿ ಪಾಲ್ಗೊಂಡರು.

Vijaya Karnataka 5 Dec 2018, 5:00 am
ಶಿರಸಿ : ಇವರು ಎಲ್ಲರಂತೆ ದೈಹಿಕವಾಗಿ ಸದೃಢರಲ್ಲ...ಆದರೆ ಉತ್ಸಾಹಕ್ಕೇನೂ ಕೊರತೆಯಿಲ್ಲ..ಅಂತೆಯೇ ದೈಹಿಕ ನ್ಯೂನ್ಯತೆಯ ಮಧ್ಯೆಯೂ ಆಟೋಟ ಚಟುವಟಿಕೆಗಳಲ್ಲಿ ಪಾಲ್ಗೊಂಡರು.
Vijaya Karnataka Web SRS-3SIRSI6B


ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಸೋಮವಾರ ಸಂಘಟಿಸಿದ್ದ ವಿಶ್ವ ವಿಶೇಷಚೇತನರ ದಿನಾಚರಣೆ ಕಾರ್ಯಕ್ರಮದ ವಿಶೇಷತೆಯಿದು. ತಾಲೂಕಿನಲ್ಲಿ 637ಮಂದಿ ವಿಶೇಷಚೇತನ ಮಕ್ಕಳಿದ್ದಾರೆ. ಅದರಲ್ಲಿ ನೂರಾರು ಮಕ್ಕಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಬಣ್ಣ ತುಂಬುವುದು, ಬಕೆಟ್‌ನಲ್ಲಿ ಬಾಲ್‌ ಹಾಕುವುದು, ಸಂಗೀತ ಕುರ್ಚಿಯಲ್ಲಿ ಉತ್ಸಾಹದಲ್ಲಿ ಪಾಲ್ಗೊಂಡರು. ಛದ್ಮವೇಷದಲ್ಲಿ ಸಂಗೊಳ್ಳಿ ರಾಯಣ್ಣ ಸೇರಿದಂತೆ ವಿವಿಧ ವೇಷಧಾರಿಗಳಾಗಿ ಗಮನಸೆಳೆದರು.

ಇದಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ತಾಪಂ ಸದಸ್ಯ ರವಿ ಹೆಗಡೆ ಹಳದೋಟ, ಕ್ಷೇತ್ರ ಶಿಕ್ಷ ಣಾಧಿಕಾರಿ ಸದಾನಂದ ಸ್ವಾಮಿ, ಪ್ರೌಢಶಾಲಾ ಸಹಶಿಕ್ಷ ಕರ ಸಂಘದ ಅಧ್ಯಕ್ಷ ಮಂಜುನಾಥ ಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಅಧ್ಯಕ್ಷ ಪ್ರಶಾಂತ ಹೆಗಡೆ ಮುಂತಾದವರು ಪಾಲ್ಗೊಂಡರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ