ಆ್ಯಪ್ನಗರ

ಮಳೆ ಕೊರತೆ: ಆರಂಭವಾಗದ ಬಿತ್ತನೆ

ಶಿರಸಿ : ಮುಂಗಾರು ಪೂರ್ವ ಮಳೆಯ ಕೊರತೆಯಿಂದ ತಾಲೂಕಿನಲ್ಲಿ ಈವರೆಗೂ ಬಿತ್ತನೆ ಆರಂಭವಾಗಿಲ್ಲ. ಆಯಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜಗಳನ್ನು ದಾಸ್ತಾನು ಇಟ್ಟುಕೊಳ್ಳಲಾಗಿದೆ ಎಂದು ಗುರುವಾರ ನಡೆದ ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಸಹಾಯಕ ನಿರ್ದೇಶಕ ಶಂಕರ ಹೆಗಡೆ ತಿಳಿಸಿದರು.

Vijaya Karnataka 7 Jun 2019, 5:00 am
ಶಿರಸಿ : ಮುಂಗಾರು ಪೂರ್ವ ಮಳೆಯ ಕೊರತೆಯಿಂದ ತಾಲೂಕಿನಲ್ಲಿ ಈವರೆಗೂ ಬಿತ್ತನೆ ಆರಂಭವಾಗಿಲ್ಲ. ಆಯಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜಗಳನ್ನು ದಾಸ್ತಾನು ಇಟ್ಟುಕೊಳ್ಳಲಾಗಿದೆ ಎಂದು ಗುರುವಾರ ನಡೆದ ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಸಹಾಯಕ ನಿರ್ದೇಶಕ ಶಂಕರ ಹೆಗಡೆ ತಿಳಿಸಿದರು.
Vijaya Karnataka Web uttara kannada
ಮಳೆ ಕೊರತೆ: ಆರಂಭವಾಗದ ಬಿತ್ತನೆ


ತಾ.ಪಂ. ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಅಧ್ಯಕ್ಷ ತೆಯಲ್ಲಿ ನಡೆದ ಸಭೆಯಲ್ಲಿ ಈ ಮಾಹಿತಿ ನೀಡಿದರು. ತಾಲೂಕಿನಲ್ಲಿ ಈವರೆಗೆ 122 ಮಿ.ಮೀ. ಮಳೆಯಾಗಬೇಕಿತ್ತು. 31.6 ಮಿ.ಮೀ., ಬನವಾಸಿಯಲ್ಲಿ 26.8 ಮಿ.ಮೀ. ಮಳೆಯಾಗಿದೆ. 2018ನೇ ಸಾಲಿನ ಜನವರಿ ತಿಂಗಳಿನಿಂದ ಮೇವರೆಗೆ ಸುರಿದ ಮಳೆಯ ಪ್ರಮಾಣಕ್ಕೆ ಹೋಲಿಸಿದರೆ ಈ ವರ್ಷ ಶೇ.77 ಮಿ.ಮೀ. ಮಳೆ ಕೊರತೆ ಉಂಟಾಗಿದೆ ಎಂದರು.

ತಾಲೂಕಿನಲ್ಲಿ 8613 ಹೆಕ್ಟೇರ್‌ ಭತ್ತದ ಪ್ರದೇಶವಿದ್ದು, 598 ಹೆ. ಮುಸುಕಿನ ಜೋಳ ಪ್ರದೇಶವಿದೆ. ಈ ನಿಟ್ಟಿನಲ್ಲಿ ಕಡಿಮೆ ಅವಧಿಯಲ್ಲಿ ಬೆಳೆಯುವಂತಹ ಭತ್ತದ ಬೀಜಗಳನ್ನು ಸಂಗ್ರಹಿಸಿಟ್ಟುಕೊಳ್ಳಲಾಗಿದೆ. ಬನವಾಸಿಯಲ್ಲಿ 300 ಕ್ವಿಂ. ಹಾಗೂ ಶಿರಸಿಯಲ್ಲಿ 50 ಕ್ವಿಂ. ಭತ್ತದ ಬೀಜಗಳು ಲಭ್ಯವಿದೆ ಎಂದರು.

ತಾಲೂಕಾ ಆರೋಗ್ಯಾಧಿಕಾರಿ ಗಜಾನನ ಭಟ್ಟ ಮಾತನಾಡಿ, ಆರೋಗ್ಯ ಕಾರ್ಡ್‌ಗಳನ್ನು ಜಿಲ್ಲಾ ಕೇಂದ್ರದಲ್ಲಿ ಮಾತ್ರ ನೀಡಲಾಗುತ್ತಿದೆ. ಸರಕಾರಿ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಆರೋಗ್ಯ ಕಾರ್ಡ್‌ ಅಗತ್ಯವಿಲ್ಲ. ಬಹುತೇಕ ಚಿಕಿತ್ಸೆಗಳಿಗೆ ಆಧಾರ್‌ ಕಾರ್ಡ್‌ ಹಾಗೂ ಬಿಪಿಎಲ್‌ ಕಾರ್ಡ್‌ ಇದ್ದರೆ ಉಚಿತ ಔಷಧೋಪಚಾರ ದೊರಕುತ್ತದೆ. ಅಪಘಾತ ಇನ್ನಿತರ ತುರ್ತು ಪರಿಸ್ಥಿತಿಗಳಲ್ಲಿ ಆರೋಗ್ಯ ಕಾರ್ಡ್‌ ಇಲ್ಲದೆಯೂ ಚಿಕಿತ್ಸೆ ನೀಡಲಾಗುತ್ತದೆ. ಇನ್ನು ಕೆಲವೇ ದಿನಗಳಲ್ಲಿ ತಾಲೂಕು ಆಸ್ಪತ್ರೆಯಲ್ಲಿಯೇ ಆರೋಗ್ಯ ಕಾರ್ಡ್‌ ವಿತರಿಸಲಾಗುತ್ತದೆ ಎಂದರು.

ಬಹಳ ವರ್ಷದ ಬೇಡಿಕೆಯಂತೆ ಮಕ್ಕಳ ವೈದ್ಯರ ಸೇವೆ ಪಂಡಿತ್‌ ಸಾರ್ವಜನಿಕ ಆಸ್ಪತ್ರೆಗೆ ದೊರೆತಿದೆ. ಎಲುಬು ಮತ್ತು ಕೀಲು ಚಿಕಿತ್ಸೆಗೆ ಆಧುನಿಕ ಉಪಕರಣಗಳು ಬಂದಿವೆ. ಆಪರೇಶನ್‌ ಕೊಠಡಿಯನ್ನು ಹೊಸದಾಗಿ ನಿರ್ಮಿಸಲಾಗುತ್ತಿದೆ. ಆಸ್ಪತ್ರೆಗೆ ಸುಸಜ್ಜಿತ ಕಾಂಪೌಂಡ್‌ ಬೇಕಿದೆ. ಆಸ್ಪತ್ರೆ ಆವರಣದೊಳಗೆ ಸಾವಿರಾರು ಜನರು ಬರುತ್ತಾರೆ. ಶುಚಿತ್ವ ಕಾಪಾಡಲು ತೊಂದರೆ ಆಗ್ತಿದೆ. ಶೌಚಾಲಯಗಳು ಬ್ಲಾಕ್‌ ಆಗುತ್ತಿವೆ. ಯಾವುದಾದರೊಂದು ಅನುದಾನದಲ್ಲಿ ಸೂಕ್ತ ಕಾಂಪೌಂಡ್‌ ನಿರ್ಮಿಸಿ ಕೊಡಬೇಕು ಎಂದು ಮನವಿ ಮಾಡಿದರು.

ತಾ.ಪಂ. ಉಪಾಧ್ಯಕ್ಷ ಚಂದ್ರು ಎಸಳೆ ಮಾತನಾಡಿ, ಪ್ರತಿ ಬೇಸಿಗೆಯಲ್ಲೂ ನೀರಿನ ಸಮಸ್ಯೆ ಕಾಡುತ್ತಿದೆ. ಪ್ರತಿ ವರ್ಷವೂ ಬೋರ್‌ವೆಲ್‌ ತೋಡಿದರೆ ಅಂತರ್ಜಲ ಕುಸಿತ ಕಾಣುತ್ತದೆ. ಆ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯಾಗಾರಗಳನ್ನು ನಡೆಸಬೇಕು. ಇಲ್ಲಿಯ ನಾರಾಯಣಗುರು ನಗರದಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ ಮಳೆನೀರು ಕೊಯ್ಲಿನ ಪರಿಣಾಮ ಈ ವರ್ಷ ನೀರಿನ ಕೊರತೆ ನೀಗಿದೆ ಎಂದರು.

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೈತರು ನಾಟಿ ಮಾಡಿದ ಗಿಡಗಳಿಗೆ ಮೂರು ವರ್ಷ ಇಲಾಖೆ ಪ್ರೋತ್ಸಾಹಧನ ನೀಡುತ್ತಿದೆ. ರೈತರು ಸೂಕ್ತ ದಾಖಲೆಗಳನ್ನು ಇಲಾಖೆಗೆ ನೀಡಿ ಹಣ್ಣಿನ ಗಿಡಗಳನ್ನು ಕೊಂಡೊಯ್ಯಬಹುದು. ಶಾಲಾ-ಕಾಲೇಜು ಆವಾರದಲ್ಲೂ ಸಸಿ ನೆಡಲು ಹೆಚ್ಚಿನ ಪ್ರಮಾಣದಲ್ಲಿ ಸಸಿ ಬೆಳೆಸಲಾಗಿದೆ. ಗಂಧದ ಬೆಳೆಯಲ್ಲಿ ಆಸಕ್ತಿ ಹೊಂದಿರುವ ರೈತರು ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಬೇಕು. 1500ಕ್ಕೂ ಹೆಚ್ಚು ಗಂಧದ ಸಸಿಗಳು ಲಭ್ಯವಿದೆಯೆಂದು ಬನವಾಸಿ ವಲಯ ಅರಣ್ಯಾಧಿಕಾರಿ ವಿನಯ ಹೆಗಡೆ ತಿಳಿಸಿದರು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಫ್‌.ಜಿ ಚಿನ್ನಣ್ಣನವರ ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ