ಕಾರವಾರ : ಸರ್ವಋುತು ರಸ್ತೆ ನಿರ್ಮಿಸಿಕೊಡುವಂತೆ ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದ ಬೇಲೆಗದ್ದೆಯ ಮುಕ್ರಿ ಸಮಾಜದವರು ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.
ನಮ್ಮ ಕೇರಿ ಮತ್ತು ರಾಷ್ಟ್ರೀಯ ಹೆದ್ದಾರಿ ನಡುವೆ ಸಂಪರ್ಕ ಕಲ್ಪಿಸಲು ರಸ್ತೆಯೇ ಇಲ್ಲ. ಇದರಿಂದ ನಾವು ದಿನ ನಿತ್ಯ ಹೊಲಸು ಮತ್ತು ನೀರು ತುಂಬಿರುವ ಹಳ್ಳದ ಮೂಲಕವೇ ಸಂಚರಿಸಬೇಕಿದೆ. ಇದರಿಂದ ನಮ್ಮ ಊರಿನ ಸಾರ್ವಜನಿಕರು ಮತ್ತು ಮಕ್ಕಳಿಗೆ ಒಂದೆಡೆ ಅನಾರೋಗ್ಯದ ಭೀತಿ ಕಾಡಿದ್ದರೆ ಇನ್ನೊಂದೆಡೆ ಹಳ್ಳದಲ್ಲಿ ಬೀಳುವ ಅಪಾಯವೂ ಇದೆ.
ನಾವು ಅತ್ಯಂತ ಬಡತನದಲ್ಲಿ ಜೀವನ ಸಾಗಿಸುತ್ತಿದ್ದು ನಿತ್ಯ ಉದ್ಯೋಗಕ್ಕಾಗಿ, ಪಡಿತರ ಮತ್ತಿತರ ಜೀವನಾವಶ್ಯಕ ವಸ್ತುಗಳನ್ನು ತರುವುದರ ಸಲುವಾಗಿ ನಮ್ಮ ಮಕ್ಕಳು ಶಾಲಾ ಕಾಲೇಜಿಗೆ ಸಂಚರಿಸಲು ಹಳ್ಳಕ್ಕಿ ಕಿರು ಸೇತುವೆ ಮತ್ತು ಸೂಕ್ತ ರಸ್ತೆಯ ಅಗತ್ಯವಿದೆ. ಆದಷ್ಟು ಶೀಘ್ರದಲ್ಲಿ ಬೇಡಿಕೆ ಈಡೇರಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಮನವಿ ಸ್ವೀಕರಿಸಿದರು. ಗ್ರಾಮದ ರವಿ ಮುಕ್ರಿ ಇತರರು ಇದ್ದರು.
ನಮ್ಮ ಕೇರಿ ಮತ್ತು ರಾಷ್ಟ್ರೀಯ ಹೆದ್ದಾರಿ ನಡುವೆ ಸಂಪರ್ಕ ಕಲ್ಪಿಸಲು ರಸ್ತೆಯೇ ಇಲ್ಲ. ಇದರಿಂದ ನಾವು ದಿನ ನಿತ್ಯ ಹೊಲಸು ಮತ್ತು ನೀರು ತುಂಬಿರುವ ಹಳ್ಳದ ಮೂಲಕವೇ ಸಂಚರಿಸಬೇಕಿದೆ. ಇದರಿಂದ ನಮ್ಮ ಊರಿನ ಸಾರ್ವಜನಿಕರು ಮತ್ತು ಮಕ್ಕಳಿಗೆ ಒಂದೆಡೆ ಅನಾರೋಗ್ಯದ ಭೀತಿ ಕಾಡಿದ್ದರೆ ಇನ್ನೊಂದೆಡೆ ಹಳ್ಳದಲ್ಲಿ ಬೀಳುವ ಅಪಾಯವೂ ಇದೆ.
ನಾವು ಅತ್ಯಂತ ಬಡತನದಲ್ಲಿ ಜೀವನ ಸಾಗಿಸುತ್ತಿದ್ದು ನಿತ್ಯ ಉದ್ಯೋಗಕ್ಕಾಗಿ, ಪಡಿತರ ಮತ್ತಿತರ ಜೀವನಾವಶ್ಯಕ ವಸ್ತುಗಳನ್ನು ತರುವುದರ ಸಲುವಾಗಿ ನಮ್ಮ ಮಕ್ಕಳು ಶಾಲಾ ಕಾಲೇಜಿಗೆ ಸಂಚರಿಸಲು ಹಳ್ಳಕ್ಕಿ ಕಿರು ಸೇತುವೆ ಮತ್ತು ಸೂಕ್ತ ರಸ್ತೆಯ ಅಗತ್ಯವಿದೆ. ಆದಷ್ಟು ಶೀಘ್ರದಲ್ಲಿ ಬೇಡಿಕೆ ಈಡೇರಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಮನವಿ ಸ್ವೀಕರಿಸಿದರು. ಗ್ರಾಮದ ರವಿ ಮುಕ್ರಿ ಇತರರು ಇದ್ದರು.