ಆ್ಯಪ್ನಗರ

ಚಿಗಳ್ಳಿ ಒಡ್ಡು ಬಳಿಯ ಅನಾಹುತ ಪರಿಶೀಲನೆ

ಮುಂಡಗೋಡ : ಪ್ರಕೃತಿ ಮುನಿದರೆ ಯಾವುದೂ ತಡೆಯುವುದಿಲ್ಲ. ಆದ್ದರಿಂದ ಮರಗಳನ್ನು ಕಡಿಯದೇ ಅವುಗಳ ರಕ್ಷ ಣೆ ಮಾಡುವುದು ಅತಿ ಅವಶ್ಯವಿದೆ. ಅರಣ್ಯ ನಾಶದಿಂದ ಇಂತಹ ದುರಂತಗಳು ನಡೆಯುತ್ತವೆ ಎಂದು ಯಲ್ಲಾಪುರ ಡಿಎಫ್‌ಒ ಆರ್‌.ಜಿ.ಭಟ್‌ ಹೇಳಿದರು.

Vijaya Karnataka 23 Aug 2019, 5:00 am
ಮುಂಡಗೋಡ : ಪ್ರಕೃತಿ ಮುನಿದರೆ ಯಾವುದೂ ತಡೆಯುವುದಿಲ್ಲ. ಆದ್ದರಿಂದ ಮರಗಳನ್ನು ಕಡಿಯದೇ ಅವುಗಳ ರಕ್ಷ ಣೆ ಮಾಡುವುದು ಅತಿ ಅವಶ್ಯವಿದೆ. ಅರಣ್ಯ ನಾಶದಿಂದ ಇಂತಹ ದುರಂತಗಳು ನಡೆಯುತ್ತವೆ ಎಂದು ಯಲ್ಲಾಪುರ ಡಿಎಫ್‌ಒ ಆರ್‌.ಜಿ.ಭಟ್‌ ಹೇಳಿದರು.
Vijaya Karnataka Web an intruder inspection near the shore
ಚಿಗಳ್ಳಿ ಒಡ್ಡು ಬಳಿಯ ಅನಾಹುತ ಪರಿಶೀಲನೆ


ಅವರು ತಾಲೂಕಿನ ಕಾತೂರ ಸನಿಹದ ಸೇತುವೆ ಬಳಿಯ ಅರಣ್ಯ ಇಲಾಖೆಗೆ ಸೇರಿದ ಆಸ್ತಿ ಹಾನಿಯಾಗಿರುವ ಸ್ಥಳಕ್ಕೆ ಗುರುವಾರ ಭೇಟಿ ಕೊಟ್ಟು ಸುದ್ದಿಗಾರರ ಜತೆ ಮಾತನಾಡಿದರು.

ಇಂದಿನ ದಿನಮಾನದಲ್ಲಿ ಅರಣ್ಯ ರಕ್ಷ ಣೆ ಅನಿವಾರ್ಯವಾಗಿದೆ. ಮರಗಳನ್ನು ಕಡಿದರೆ ಅನಾಹುತಗಳು ಸಂಭವಿಸುತ್ತವೆ. ಅರಣ್ಯ ಕಡಿಮೆಯಾದರೆ ದುಷ್ಪರಿಣಾಮಗಳು ಉಂಟಾಗುತ್ತವೆ. ಅದನ್ನು ನಾವೆಲ್ಲ ಅರಿತು ಜೀವಿಸಬೇಕು. ಜತೆಗೆ ಸಸಿಗಳನ್ನು ನೆಟ್ಟು ಅರಣ್ಯ ಬೆಳೆಸಬೇಕಿದೆ ಎಂದರು.

ಪರಿಶೀಲನೆ

ಚಿಗಳ್ಳಿ ಜಲಾಶಯದ ಒಡ್ಡು ಒಡೆದು ಅಪಾರ ಪ್ರಮಾಣದ ನೀರು ಹರಿದು ಬಂದ ಕಾರಣ ಕಾತೂರ ಸನಿಹದ ಸೇತುವೆ ಬಳಿಯ ಅರಣ್ಯ ಇಲಾಖೆಗೆ ಸಂಬಂಧಪಟ್ಟ ಮನೆಯೊಂದು ನೀರಿನಲ್ಲಿ ಕೊಚ್ಚಿ ಹೋಗಿತ್ತು. ಪಂಪ್‌ಹೌಸ್‌ ಸಹ ಹಾನಿಯಾಗಿದೆ ಹಾಗೂ ಅಲ್ಲಿನ ಕೆಲವು ಮರಗಳು ಸಹ ನೀರಿನ ರಭಸಕ್ಕೆ ಹಾನಿಯಾಗಿ ಅದೆಲ್ಲವನ್ನೂ ಅವರು ಪರಿಶೀಲನೆ ನಡೆಸಿದರು.

ಹಾನಿ ವರದಿ ಕಳಿಸಿ

ಅರಣ್ಯ ಇಲಾಖೆಗೆ ಸೇರಿದ ಮನೆ ಕೊಚ್ಚಿ ಹೋಗಿರುವುದು ಹಾಗೂ ಪಂಪ್‌ಹೌಸ್‌ಗೆ ಹಾನಿ ಸಂಭವಿಸಿರುವುದು ಸೇರಿದಂತೆ ಮಳೆಯಿಂದ ಏನೇನು ಹಾನಿಯಾಗಿದೆ ಹಾಗೂ ಅಂದಾಜು ಎಷ್ಟು ರೂ. ಹಾನಿ ಸಂಭವಿಸಿದೆ ಎಂಬುದರ ಕುರಿತು ವರದಿ ನೀಡುವಂತೆ ಡಿಎಫ್‌ಒ ಆರ್‌.ಜಿ.ಭಟ್‌ ಅವರು ಕಾತೂರ ವಲಯ ಅರಣ್ಯಾಧಿಕಾರಿ ಅಜಯ ನಾಯ್ಕ ಅವರಿಗೆ ಸೂಚಿಸಿದರು.

ಈ ವೇಳೆ ಡಿಎಫ್‌ಒ ಆರ್‌.ಜಿ.ಭಟ್‌, ಎಸಿಎಫ್‌ ಅಶೋಕ ಭಟ್‌, ಎಸ್‌.ಎಂ.ವಾಲಿ, ಆರ್‌ಎಫ್‌ಒಗಳಾದ ಸುರೇಶ ಕಲ್ಲೊಳ್ಳಿ, ಅಜಯ ನಾಯ್ಕ, ಸಿಬ್ಬಂದಿ ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ