ಆ್ಯಪ್ನಗರ

ಆನಂದ 46.37 ಲಕ್ಷ, ಅನಂತ 38.35 ಲಕ್ಷ

ಕಾರವಾರ : ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳು ಮಾಡಿದ ವೆಚ್ಚಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ. ಚುನಾವಣಾ ಆಯೋಗವು ಈ ಬಾರಿ ಪ್ರತಿಯೊಬ್ಬ ಅಭ್ಯರ್ಥಿಗೆ 70 ಲಕ್ಷ ರೂ.ಗಳ ವರೆಗೆ ಚುನಾವಣೆ ಖರ್ಚು-ವೆಚ್ಚ ಮಾಡಲು ಅವಕಾಶ ಕಲ್ಪಿಸಿತ್ತು. ಅದರಂತೆ, ಆನಂದ ಅಸ್ನೋಟಿಕರ 46,37,245 ರೂ. ಖರ್ಚು ತೋರಿಸಿದ್ದಾರೆ. ಅನಂತಕುಮಾರ ಹೆಗಡೆ ಅವರು 38,35,644 ರೂ. ಚುನಾವಣಾ ವೆಚ್ಚವನ್ನು ತೋರಿಸಿದ್ದಾರೆ.

Vijaya Karnataka 28 Apr 2019, 5:00 am
ಕಾರವಾರ : ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳು ಮಾಡಿದ ವೆಚ್ಚಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ. ಚುನಾವಣಾ ಆಯೋಗವು ಈ ಬಾರಿ ಪ್ರತಿಯೊಬ್ಬ ಅಭ್ಯರ್ಥಿಗೆ 70 ಲಕ್ಷ ರೂ.ಗಳ ವರೆಗೆ ಚುನಾವಣೆ ಖರ್ಚು-ವೆಚ್ಚ ಮಾಡಲು ಅವಕಾಶ ಕಲ್ಪಿಸಿತ್ತು. ಅದರಂತೆ, ಆನಂದ ಅಸ್ನೋಟಿಕರ 46,37,245 ರೂ. ಖರ್ಚು ತೋರಿಸಿದ್ದಾರೆ. ಅನಂತಕುಮಾರ ಹೆಗಡೆ ಅವರು 38,35,644 ರೂ. ಚುನಾವಣಾ ವೆಚ್ಚವನ್ನು ತೋರಿಸಿದ್ದಾರೆ.
Vijaya Karnataka Web anand is worth rs 46 37 lakh and an infinite rs 38 35 lakh
ಆನಂದ 46.37 ಲಕ್ಷ, ಅನಂತ 38.35 ಲಕ್ಷ


ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಮಾಡಿದ ಖರ್ಚು-ವೆಚ್ಚಗಳ ಬಗ್ಗೆ ಅಭ್ಯರ್ಥಿಗಳ ಚುನಾವಣಾ ಏಜೆಂಟರು ಆಯೋಗಕ್ಕೆ ಲೆಕ್ಕ-ಪತ್ರ ಸಲ್ಲಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ದಿನದಿಂದ ಮತದಾನದ ದಿನದವರೆಗೆ ಖರ್ಚು ವೆಚ್ಚಗಳು ದಾಖಲೆ ಪುಸ್ತಕದಲ್ಲಿ ನಮೂದಿಸಿದ್ದು, ಕಾರ್ಯಕ್ರಮ ವೆಚ್ಚ, ವಾಹನ ಬಾಡಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಸಭೆ-ಸಮಾರಂಭ ನಡೆಸಲು ಪೆಂಡಾಲ್‌, ಖುರ್ಚಿ, ಧ್ವನಿವರ್ಧಕ, ವೃತ್ತ ಪತ್ರಿಕೆಗಳಲ್ಲಿ ಜಾಹೀರಾತು, ಕರಪತ್ರ ಮುದ್ರಣ ಮುಂತಾದವುಗಳಿಗೆ ತಗುಲಿದ ವೆಚ್ಚದ ಬಗ್ಗೆ ಸವಿವರವಾದ ಮಾಹಿತಿಯನ್ನು ಆಯೋಗಕ್ಕೆ ಸಲ್ಲಿಸಲಾಗಿದೆ. ಅನಂತಕುಮಾರ ಹೆಗಡೆ ಅವರು ಘಟ್ಟದ ಮೇಲೆ ನಾಗರಾಜ ಭಟ್ಟ ಮತ್ತು ಘಟ್ಟದ ಕೆಳಗೆ ನಾಗರಾಜ ನಾಯ್ಕ ಸೇರಿ ಇಬ್ಬರು ಏಜೆಂಟರನ್ನು ನೇಮಿಸಿದ್ದರು. ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ಪ್ರಕಾಶ ನಾಯ್ಕ ಎಂಬವರನ್ನು ಚುನಾವಣಾ ಏಜೆಂಟರಾಗಿ ನೇಮಿಸಿದ್ದರು.

ಉಳಿದ ಅಭ್ಯರ್ಥಿಗಳ ಚುನಾವಣಾ ವೆಚ್ಚ ಈ ರೀತಿ ಇದೆ. ಅನೀತಾ ಶೇಟ್‌-51,000 ರೂ., ಬಾಲಕೃಷ್ಣ ಎ. ಪಾಟೀಲ್‌- 43,000ರೂ., ಚಿದಾನಂದ ಹರಿಜನ-49,000 ರೂ., ಕುಂದಾಬಾಯಿ ಪರುಳೇಕರ-25,000 ರೂ., ಮಂಜುನಾಥ್‌ ಸದಾಶಿವ-27,000 ರೂ.,ನಾಗರಾಜ ನಾಯ್ಕ-41,000 ರೂ., ಮಹಮ್ಮದ್‌ ಖಾತೀಬ್‌-55,000 ರೂ.,ನಾಗರಾಜ ಶೇಟ್‌ 37,000 ರೂ.,ನಾಗರಾಜ ಶಿರಾಲಿ-1,19,000 ರೂ., ಸುಧಾಕರ ಜೊಗಳೇಕರ- 67,000, ಸುನೀಲ್‌ ಪವಾರ್‌-19,000 ರೂ. ಎಂದು ಘೋಷಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ