ಆ್ಯಪ್ನಗರ

ಅಂದರ್‌ ಬಾಹರ್‌ ಜೂಜಾಟ: ಮೂವರ ಸೆರೆ

ಅಂಕೋಲಾ : ತಾಲೂಕಿನ ಅಗಸೂರಿನ ಸರಳೇಭೈಲನ ಗಂಗಾವಳಿ ನದಿ ದಂಡೆಯ ಅರಣ್ಯ ಪ್ರದೇಶದಲ್ಲಿ ಅಂದರ್‌ ಬಾಹರ್‌ ಜೂಜಾಟದಲ್ಲಿ ತೊಡಗಿದ್ದ ತಂಡದ ಮೇಲೆ ಅಂಕೋಲಾ ಪೊಲೀಸರು ಬುಧವಾರ ಸಂಜೆ ದಾಳಿ ನಡೆಸಿ 8 ಬೈಕ್‌ಗಳನ್ನು ವಶ ಪಡಿಸಿಕೊಂಡು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Vijaya Karnataka 28 Mar 2019, 5:00 am
ಅಂಕೋಲಾ : ತಾಲೂಕಿನ ಅಗಸೂರಿನ ಸರಳೇಭೈಲನ ಗಂಗಾವಳಿ ನದಿ ದಂಡೆಯ ಅರಣ್ಯ ಪ್ರದೇಶದಲ್ಲಿ ಅಂದರ್‌ ಬಾಹರ್‌ ಜೂಜಾಟದಲ್ಲಿ ತೊಡಗಿದ್ದ ತಂಡದ ಮೇಲೆ ಅಂಕೋಲಾ ಪೊಲೀಸರು ಬುಧವಾರ ಸಂಜೆ ದಾಳಿ ನಡೆಸಿ 8 ಬೈಕ್‌ಗಳನ್ನು ವಶ ಪಡಿಸಿಕೊಂಡು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
Vijaya Karnataka Web andor outrar gambling three captives
ಅಂದರ್‌ ಬಾಹರ್‌ ಜೂಜಾಟ: ಮೂವರ ಸೆರೆ


ಪೊಲೀಸ್‌ ವರಿಷ್ಠಾಧಿಕಾರಿ ವಿನಾಯಕ ಪಾಟೀಲ ಅವರ ಸೂಚನೆಯಂತೆ ಅಂಕೋಲಾದ ಸಿಪಿಐ ಬಿ.ಪ್ರಮೋದಕುಮಾರ ನೇತೃತ್ವದ ಪೊಲೀಸ್‌ ತಂಡ ಕಾರ್ಯಾಚರಣೆ ನಡೆಸಿದಾಗ ಮೂವರು ಆರೋಪಿಗಳು ಸರೆ ಸಿಕ್ಕಿದ್ದು, 7 ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.

ಅಗಸೂರಿನ ಕಿರಾ ಮಾಣಿ ಗೌಡ, ಮಕ್ಕಿಗದ್ದೆಯ ವೆಂಕಟ ಹುಲಿಯಣ್ಣಾ ಗುನಗಾ, ಹೆಗ್ಗರಣಿಯ ನವೀನ ಮಾರುತಿ ನಾಯ್ಕ ಬಂಧಿತ ಆರೋಪಿಗಳಾಗಿದ್ದಾರೆ. ಶಿರಗುಂಜಿಯ ಸೋಮಯ್ಯ ಗೌಡ, ಹೊನ್ನಳ್ಳಿಯ ಸುರೇಶ ಗೌಡ, ಅಗಸೂರಿನ ಬಾಲಾಜಿಕೊಪ್ಪದ ನಾಗರಾಜ್‌ ಗೌಡ, ಹೊನ್ನಳ್ಳಿಯ ಗಂಗಾಧರ ಗೌಡ, ಹೊಳೆಮಕ್ಕಿಯ ಲಕ್ಷ ೂ ಗೌಡ, ಹೊನ್ನಳಿಯ ಭೈರು ಗೌಡ ತಲೆ ಮರೆಸಿಕೊಂಡಿದ್ದಾರೆ.

ಕಾರ್ಯಾಚರಣೆಯ ವೇಳೆ 36950 ರೂ. ನಗದು ಹಣ, 3 ಮೊಬೈಲ, 8 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಿವೈಎಸ್ಪಿ ಶಂಕರ ಮಾರಿಹಾಳ ಮಾರ್ಗದರ್ಶನದಂತೆ ಸಿಪಿಐ ಬಿ.ಪ್ರಮೋದಕುಮಾರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪ್ರೊಬೇಷನರಿ ಪಿಎಸ್‌ಐಗಾಳದ ಅನಿಲ ಮಾದರ, ಸಿದ್ದು ಗುಡಿ, ಮಂಜುನಾಥ ಸಿಬ್ಬಂದಿಗಳಾದ ಮೋಹನದಾಸ ಶೇಣ್ವಿ, ಮಂಜುನಾಥ ಲಕ್ಮಾಪುರ, ಆಸೀಪ್‌ ಕೆರೂರ. ಮುಂಡಗೋಡ, ಪರಮೇಶ್ವರ ಕೆ, ಶಿವಾನಂದ ನಾಗರದಿನ್ನಿ ಕಾರ್ಯಾಚರಣೆಯಲ್ಲಿದ್ದರು.

ಈ ಅಂದರ್‌ ಬಾಹರ್‌ ಜೂಜಾಟದ ನೇತೃತ್ವ ವಹಿಸಿಕೊಂಡಿದ್ದ ಪ್ರಮುಖ ಆರೋಪಿ ಕೀರಾ ಮಾಣಿ ಗೌಡ ಅವರು 2015ರಲ್ಲಿ ಜೂಜಾಟ ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ ಅಂದು ಪಿಎಸೈ ಆಗಿದ್ದ ಓಂಕಾರಪ್ಪ ಸಹಿತ ನಾಲ್ವರ ಪೊಲೀಸ್‌ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಕೀರಾ ಮಾಣಿ ಗೌಡ ಅವರು ರೌಡಿ ಶೀಟರ್‌ ಆಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ