ಆ್ಯಪ್ನಗರ

ಮಹಾಬಲೇಶ್ವರ ದೇವಾಲಯದಲ್ಲಿ ಅಂಜನಾದ್ರಿ ಶಿಲೆ ಪೂಜೆ

ಗೋಕರ್ಣ: ಆಗಸ್ಟ್‌ 5 ರಂದು ಇತಿಹಾಸದ ಶ್ರೇಷ್ಠ ಕಾರ್ಯದ ಪ್ರಾರಂಭದ ದಿನವಾಗುತ್ತದೆ. ಆ ಕಾರ್ಯಕ್ರಮಕ್ಕೆ ನಾವೆಲ್ಲರೂ ಸಾಕ್ಷಿಯಾಗ ಬೇಕು ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಾಕ್ಷ ಪ್ರಮೋದ ಮುತಾಲಿಕ ಹೇಳಿದರು.

Vijaya Karnataka 31 Jul 2020, 5:00 am
ಗೋಕರ್ಣ: ಆಗಸ್ಟ್‌ 5 ರಂದು ಇತಿಹಾಸದ ಶ್ರೇಷ್ಠ ಕಾರ್ಯದ ಪ್ರಾರಂಭದ ದಿನವಾಗುತ್ತದೆ. ಆ ಕಾರ್ಯಕ್ರಮಕ್ಕೆ ನಾವೆಲ್ಲರೂ ಸಾಕ್ಷಿಯಾಗ ಬೇಕು ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಾಕ್ಷ ಪ್ರಮೋದ ಮುತಾಲಿಕ ಹೇಳಿದರು.
Vijaya Karnataka Web 30 YLP 1_24
ಶ್ರೀರಾಮ ಸೇನೆಯ ನೇತೃತ್ವದಲ್ಲಿ ಅಂಜನಾದ್ರಿಯಿಂದ ಅಯೋಧ್ಯೆಗೆ ಕೊಂಡೊಯ್ಯಲಾಗುತ್ತಿರುವ ಪವಿತ್ರ ಮೃತ್ತಿಕೆ ಹಾಗೂ ಬೆಳ್ಳಿಯ ಲೇಪನದ ಶಿಲೆಗೆ ಯಲ್ಲಾಪುರದ ಜೋಡುಕೆರೆ ಆಂಜನೇಯ ದೇವಾಲಯದ ಆವರಣದಲ್ಲಿ ಗುರುವಾರ ಪೂಜೆ ಸಲ್ಲಿಸಲಾಯಿತು.


ಅಯೋಧ್ಯೆಯಲ್ಲಿರಾಮ ಮಂದಿರದ ಶಿಲಾನ್ಯಾಸಕ್ಕೆ ಅಂಜನಾದ್ರಿ ಪರ್ವತದಿಂದ ತಂದ ಶಿಲೆಯನ್ನು ಇಲ್ಲಿನ ಮಹಾಬಲೇಶ್ವರ ದೇವಾಲಯಕ್ಕೆ ತಂದು ಪೂಜೆ ಸಲ್ಲಿಸಿ ನಂತರ ಮಾತನಾಡಿದರು.

500ವರ್ಷಗಳ ಸುಧೀರ್ಘ ಹೋರಾಟಕ್ಕೆ ತೆರೆಬಿದ್ದಿದೆ. ಈ ಸಮಯದಲ್ಲಿಅದೆಷ್ಟೂ ತ್ಯಾಗ ಬಲಿದಾನಗಳು ನಡೆದಿದೆ ಎಂದ ಅವರು ಸ್ವಾತಂತ್ರತ್ರ್ಯ ಬಂದ ನಂತರವು ಹೋರಾಟ ನಡೆದಿದ್ದನ್ನು ಸ್ಮರಿಸಿದರು.

ಆಡಳಿತಾಧಿಕಾರಿ ಜಿ.ಕೆ.ಹೆಗಡೆ ಮಾತನಾಡಿದರು. ದೇವಾಲಯದ ಹೊರ ಭಾಗದಲ್ಲೇ ಶಿಲೆಯನ್ನು ಪೂಜಿಸಿ ಪ್ರಾರ್ಥಿಸಲಾಯಿತು. ಶ್ರೀರಾಮ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ , ಜಿಲ್ಲಾಅಧ್ಯಕ್ಷ ಜಯಂತ ನಾಯ್ಕ ಮತ್ತು ಸ್ಥಳೀಯ ಘಟಕದ ಪದಾಧಿಕರಿಗಳು ಸದಸ್ಯರು ಉಪಸ್ಥಿತರಿದ್ದರು. ಇಲ್ಲಿನ ರಾಮಚಂದ್ರಾಪುರ ಮೂಲಮಠ ಅಶೋಕೆಗೆ ಭೇಟಿ ನೀಡಿದರು.

ಯಲ್ಲಾಪುರ:
ಅಯೋಧ್ಯೆಯಲ್ಲಿನಡೆಯಲಿರುವ ಶ್ರೀರಾಮಮಂದಿರದ ಶಿಲಾನ್ಯಾಸದ ಪ್ರಯುಕ್ತ ಶ್ರೀರಾಮ ಸೇನೆಯ ನೇತೃತ್ವದಲ್ಲಿಹನುಮಂತನ ಜನ್ಮ ಸ್ಥಳವಾದ ಅಂಜನಾದ್ರಿಯ ಪವಿತ್ರ ಮೃತ್ತಿಕೆ ಹಾಗೂ ಶ್ರೀರಾಮನು ತಪಸ್ಸನ್ನಾಚರಿಸಿದ ಪ್ರದೇಶದ ಚಕ್ರತೀರ್ಥದ ಜಲವನ್ನು , ಬೆಳ್ಳಿಯ ಲೇಪನದ ಶಿಲೆಯನ್ನು ರಾಮನ ಜನ್ಮಸ್ಥಳವಾದ ಅಯೋಧ್ಯೆಗೆ ಕೊಂಡೊಯ್ಯಲಾಗುತ್ತಿದೆ ಎಂದು ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು.

ಪಟ್ಟಣದ ಜೋಡುಕೆರೆ ಆಂಜನೇಯ ದೇವಾಲಯದ ಆವರಣದಲ್ಲಿಗುರುವಾರ ನಡೆದ ಶಿಲಾ ಪೂಜನ ಕಾರ್ಯಕ್ರಮದಲ್ಲಿಅವರು ಮಾತನಾಡಿದರು. ಅ. 5 ರಂದು ನಡೆಯಲಿರುವ ಶ್ರೀರಾಮ ಮಂದಿರದ ಶಿಲಾನ್ಯಾಸ ಸಂದರ್ಭವು ಹಿಂದೂಗಳಿಗೆ ಐತಿಹಾಸಿಕ ಸಂಭ್ರಮದ ದಿನವಾಗಿದೆ ಎಂದರು.

ಶ್ರೀರಾಮ ಸೇನೆಯ ಪ್ರಮುಖರಾದ ಗಂಗಾಧರ ಕುಲಕರ್ಣಿ, ಸ್ಥಳೀಯ ಪ್ರಮುಖರಾದ ಪ್ರಮೋದ ಹೆಗಡೆ, ಗೋಪಾಲಕೃಷ್ಣ ಗಾಂವ್ಕಾರ್‌, ಬಾಬು ಬಾಂದೇಕರ್‌,ನಾರಾಯಣ ಭಟ್ಟ ಮುಂತಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ