ಅಂಕೋಲಾ: ಇಲ್ಲಿಯ ಜೈಹಿಂದ್ ಹೈಸ್ಕೂಲು ಮೈದಾನದಲ್ಲಿ ಮೇ 3 ರಿಂದ 7 ರವರೆಗೆ ಅಂಕೋಲಾ ಸಾಂಸ್ಕೃತಿಕ ಸಂಭ್ರಮ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಉದ್ಯಮಿ ಸುರೇಶ ನಾಯಕ ಅಲಗೇರಿ, ತಾಪಂ ಅಧ್ಯಕ್ಷೆ ಸುಜಾತಾ ಗಾಂವಕರ್ ಮತ್ತಿತರರು ಆಮಂತ್ರಣ ಬಿಡುಗಡೆ ಈ ವಿಷಯ ತಿಳಿಸಿದರು.
ಅಂಕೋಲಾ ಸಾಂಸ್ಕೃತಿಕ ಸಂಭ್ರಮವನ್ನು ವಿನೂತನ ರೀತಿಯಲ್ಲಿ ಆಯೋಜನೆ ಮಾಡಲಾಗಿದೆ. ಮನರಂಜನೆ ಜತೆಗೆ ಸಾಮಾಜಿಕ ಸ್ಪಂದನಕ್ಕೂ ಒತ್ತು ನೀಡಲಾಗಿದೆ. ರಕ್ತದಾನಿಗಳ ವೆಬ್ಸೈಟ್ ಬಿಡುಗಡೆ ಸಹಿತ ಹಲವು ಕಾರ್ಯಕ್ರಮ ಜೋಡಿಸಲಾಗಿದೆ. ಬೇಸಿಗೆ ರಜೆ ಮಜದಲ್ಲಿ ಇರುವ ಜನಕ್ಕೆ ಇದೊಂದು ಉತ್ತಮ ಅವಕಾಶ ಎಂದರು.
ಸಂಘಟಕ ಮಂಜುನಾಥ ಆರ್. ನಾಯ್ಕ ಮಾತನಾಡಿ, ಸ್ಥಳೀಯ ಪ್ರತಿಭೆಗಳಿಗೂ ವೇದಿಕೆ ಕಲ್ಪಿಸಲಾಗಿದೆ. ಆದರ್ಶ ದಂಪತಿ, ಅಂತಾಕ್ಷ ರಿ, ರಾಜಗೋಪಾಲ್ ಅವರ ಹಾಸ್ಯ, ಸ್ಟಾರ್ ಟಿವಿಯ ಮಾನಸ ಹೊಳ್ಳ ಅವರ ಸಂಗೀತ, ಪಂಚಭಾಷಾ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮ ಹೀಗೆ ಹಲವು ಕಾರ್ಯಕ್ರಮಗಳು ಇದರಲ್ಲಿವೆ. ರಕ್ತದಾನಿಗಳ ವೆಬ್ಸೈಟ್ ಉದ್ಘಾಟನೆ ಮಾಡಲಾಗುವುದು. ಡಾ.ಅಶೋಕಕುಮಾರ್ ಅವರು ಇಬ್ಬರು ಬಡ ರೋಗಿಗಳಿಗೆ ಉಚಿತ ಹೃದಯ ಶಸ್ತ್ರ ಚಿಕಿತ್ಸೆ ನಡೆಸಲಿದ್ದಾರೆ ಎಂದರು.
ಎಚ್.ಆರ್.ನಾಯಕ,ಸುಧಾಕರ ಲಕ್ಷ್ಮೇಶ್ವರ ,ಜಗದೀಶ ನಾಯಕ, ಗಣಪತಿ ಗಾಂವಕರ್, ಗೋಪು ಅಡ್ಲೂರು, ನಾಗರಾಜ ಐಗಳ, ವಿಜಯಕುಮಾರ ನಾಯ್ಕ, ನಿತ್ಯಾನಂದ ಕಾಮತ್, ಶ್ರೀಕಾಂತ ನಾಯ್ಕ ತೆಂಕಣಕೇರಿ ಸುದ್ದಿಗೋಷ್ಠಿಯಲ್ಲಿದ್ದರು.
ಶಾಸಕರಿಂದ ಚಾಲನೆ : ಮೇ 3 ರಂದು ಸಂಜೆ 7 ಕ್ಕೆ ಶಾಸಕ ಸತೀಶ ಸೈಲ್ ಈ ಅಂಕೋಲಾ ಸಾಂಸ್ಕೃತಿಕ ಸಂಭ್ರಮ ಉದ್ಘಾಟಿಸುವರು. ಉದ್ಯಮಿ ಸುರೇಶ ನಾಯಕ ಅಲಗೇರಿ ಅಧ್ಯಕ್ಷ ತೆ ವಹಿಸುವರು. ಸಹಕಾರಿ ಧುರೀಣ ಮಯೂರ್ ನಾಯಕ ವೇದಿಕೆ ಉದ್ಘಾಟಿಸುವರು. ಎಂಜನಿಯರ್ ಮಂಜುನಾಥ ಎಲ್. ನಾಯ್ಕ ಬ್ಲಡ್ ವೈಬ್ಸೈಟ್ ಉದ್ಘಾಟಿಸುವರು. ತಾಪಂ ಅಧ್ಯಕ್ಷೆ ಸುಜಾತಾ ಗಾಂವಕರ್, ಪುರಸಭೆ ಅಧ್ಯಕ್ಷೆ ಅಂಜಲಿ ಐಗಳ, ವಕೀಲ ಸುಭಾಸ ನಾರ್ವೇಕರ್, ಪ್ರಾಚಾರ್ಯ ಡಾ. ಶಿವಾನಂದ ನಾಯಕ, ಉದ್ಯಮಿ ಮಂಗಲದಾಸ ಕಾಮತ್, ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಸಾಯಿ ಗಾಂವಕರ್, ಕರಾರಸಾಸಂ ನಿರ್ದೇಶಕ ಜಿ.ಎಂ.ಶೆಟ್ಟಿ, ತಾಪಂ ಸದಸ್ಯೆ ಶಾಂತಿ ಆಗೇರ, ರಾಜೀವ ಎಂ.ನಾಯ್ಕ, ಮಂಜರ್ ಸೈಯದ್, ಪದ್ಮನಾಭ ಪ್ರಭು, ಮಂಜುಳಾ ನಾಯಕ, ಮಂಜುನಾಥ ನಾಯ್ಕ, ದೇವಾನಂದ ಗಾಂವಕರ್, ಮಂಜುನಾಥ ನಾಯ್ಕ, ಮಂಜುನಾಥ ಕೆ. ನಾಯ್ಕ ಬೆಳಂಬಾರ ಅತಿಥಿಗಳಾಗಿ ಪಾಲ್ಗೊಳ್ಳುವರು.