ಆ್ಯಪ್ನಗರ

ಅನುದಾನವನ್ನೇ ಬಳಸದ 32 ಗ್ರಾಪಂ, ವಾಪಸ್‌ ಹೋಗುವ ಆತಂಕ

ಶಿರಸಿ : ಹದಿನಾಲ್ಕನೇ ಹಣಕಾಸು ಯೋಜನೆಯ ಅನುದಾನ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿವಿನಿಯೋಗವಾಗದೇ ಬಾಕಿ ಉಳಿದಿದೆ. ಒಟ್ಟು 32 ಗ್ರಾ.ಪಂ.ಗಳಲ್ಲಿ13.40 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತ ಹಾಗೇ ಉಳಿದಿದ್ದು, ವಾಪಸ್‌ ಹೋಗುವ ಕಳವಳ ವ್ಯಕ್ತವಾಗಿದೆ.

Vijaya Karnataka 14 Sep 2019, 5:00 am
ಶಿರಸಿ : ಹದಿನಾಲ್ಕನೇ ಹಣಕಾಸು ಯೋಜನೆಯ ಅನುದಾನ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿವಿನಿಯೋಗವಾಗದೇ ಬಾಕಿ ಉಳಿದಿದೆ. ಒಟ್ಟು 32 ಗ್ರಾ.ಪಂ.ಗಳಲ್ಲಿ13.40 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತ ಹಾಗೇ ಉಳಿದಿದ್ದು, ವಾಪಸ್‌ ಹೋಗುವ ಕಳವಳ ವ್ಯಕ್ತವಾಗಿದೆ.
Vijaya Karnataka Web anxiety to go back 32 grap not using grant
ಅನುದಾನವನ್ನೇ ಬಳಸದ 32 ಗ್ರಾಪಂ, ವಾಪಸ್‌ ಹೋಗುವ ಆತಂಕ


ಗ್ರಾಮ ಪಂಚಾಯಿತಿಗಳಲ್ಲಿಚರಂಡಿ ಕಾಮಗಾರಿ, ರಸ್ತೆ, ತ್ಯಾಜ್ಯ ವಿಲೇವಾರಿ ಘಟಕ, ಕಸ ಸಂಗ್ರಹಣೆ ತೊಟ್ಟಿ, ನೀರಿನ ತೊಟ್ಟಿ ಹೀಗೆ ಹಲವು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅವಕಾಶವಿರುವಾಗ ಇಷ್ಟೊಂದು ಪ್ರಮಾಣದಲ್ಲಿಅನುದಾನ ಯಾಕಾಗಿ ಬಾಕಿ ಉಳಿದಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ. ಈ ಬಗ್ಗೆ ಮುತುವರ್ಜಿ ವಹಿಸಿ ಹಿನ್ನೆಡೆಗೆ ಕಾರಣವೇನು ಎನ್ನುವ ಕುರಿತು ಅವಲೋಕಿಸಬೇಕಾಗಿದೆ. ಐದು ವರ್ಷಗಳ ಈ ಯೋಜನೆಯಲ್ಲಿಈಗಾಗಲೇ ನಾಲ್ಕು ವರ್ಷ ಕಳೆದಿದ್ದು, ಇನ್ನು ಮುಂದಿನ ಮಾರ್ಚ್ಗೆ ಯೋಜನೆಯ ಅವಧಿ ಅಂತ್ಯಗೊಳ್ಳಲಿದೆ. ಅಲ್ಲಿಯ ವರೆಗೆ ಅನುದಾನವನ್ನು ಬಳಸಿಕೊಂಡು ವಾಪಸ್‌ ಹೋಗದಂತೆ ನೋಡಿಕೊಳ್ಳಬೇಕಾಗಿದೆ.

ಬಾಕಿ ಉಳಿದಿದ್ದು ಎಷ್ಟೆಷ್ಟು ? : ತಾಲೂಕಿನಲ್ಲಿ2015-16ರಲ್ಲಿ1.03 ಕೋಟಿ ರೂ., 2016-17 1.73 ಕೋಟಿ ರೂ., 2017-18 4.80 ಕೋಟಿ ರೂ., 2018-195.82 ಕೋಟಿ ರೂ. ಬಾಕಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಡಿಸೆಂಬರ್‌ಗೆ ಟಾರ್ಗೆಟ್‌: ಅನುದಾನ ಬಾಕಿ ಇರುವ ಬಗ್ಗೆ ತಾಲೂಕು ಪಂಚಾಯಿತಿ ಅಲರ್ಟ್‌ ಆಗಿದೆ. 2020ರ ಮಾರ್ಚ್ 31ಕ್ಕೆ ಈ 14ನೇ ಹಣಕಾಸು ಯೋಜನೆ ಪೂರ್ಣವಾಗಲಿದೆ. ಹೀಗಾಗಿ ಡಿಸೆಂಬರ್‌ ಕೊನೆಯೊಳಗೆ ಅನುದಾನ ಬಳಸಿ ಕಾರ್ಯಾನುಷ್ಠಾನಕ್ಕೆ ಗ್ರಾಮ ಪಂಚಾಯಿತಿಗಳಿಗೆ ತಾ.ಪಂ. ಕಾರ್ಯನಿರ್ವಹಣಾ ಅಧಿಕಾರಿ ಆದೇಶಿಸಿದ್ದಾರೆ. ಅನುದಾನ ಬಾಕಿ ಉಳಿದು ಸರಕಾರಕ್ಕೆ ವಾಪಸ್‌ ಹೋದರೆ ಗ್ರಾಪಂಗಳ ಸಂಬಂಧಿಸಿದ ಅಧಿಕಾರಿಗಳೇ ಜವಾಬ್ದಾರರಾಗುವ ಎಚ್ಚರಿಕೆಯ ಸೂಚನೆಯನ್ನು ಸಹ ನೀಡಿದ್ದಾರೆ.

ಎಲ್ಲಿ, ಎಷ್ಟು ಬಾಕಿ ಉಳಿಸಿದಿದೆ ?

(ಮೊತ್ತ ಲಕ್ಷ ರೂ.ಗಳಲ್ಲಿ)

ಗ್ರಾಪಂ ಮೊತ್ತ

ಅಂಡಗಿ 29.82

ಬದನಗೋಡ 72.66

ಬನವಾಸಿ 45.63

ಬಂಡಲ 27.35

ಬಂಕನಾಳ 26.93

ಭೈರುಂಬೆ 46.24

ಭಾಶಿ 30.13

ಬಿಸಲಕೊಪ್ಪ 64.03

ದೇವನಳ್ಳಿ 81.21

ದೊಡ್ನಳ್ಳಿ 45.65

ಗುಡ್ನಾಪುರ 29.19

ಹುಲೇಕಲ್‌ 28.14

ಹುಣಸೆಕೊಪ್ಪ 30.77

ಹುತಗಾರ 2019

ಇಟಗುಳಿ 13.14

ಜಾನ್ಮನೆ 28.87

ಕೋಡ್ನಗದ್ದೆ 30.73

ಕುಳವೆ 31.47

ನೆಗ್ಗು 46.56

ಸಾಲಕಣಿ 29.04

ಶಿವಳ್ಳಿ 36.09

ಸುಗಾವಿ 16.84

ಉಂಚಳ್ಳಿ 37.48

ವಾನಳ್ಳಿ 39.2

ಯಡಹಳ್ಳಿ 37.28

ಸದಾಶಿವಳ್ಳಿ 27.30

ಸೋಂದಾ 2.20

ಮೇಲಿನ ಓಣಿಕೇರಿ 37.93

ಮಂಜುಗುಣಿ 35.81

ಹಲಗದ್ದೆ 23.58


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ