ಆ್ಯಪ್ನಗರ

ಜೀವಜಲ ಸಂರಕ್ಷ ಣೆ ಕಾರ‍್ಯಕ್ಕೆ ಶ್ಲಾಘನೆ

ಶಿರಸಿ : ಸ್ಥಳೀಯ ರೋಟರಿ ಕ್ಲಬ್‌ನ ನೂತನ ಪದಾಧಿಕಾರಿಗಳ ಸೇವಾದೀಕ್ಷೆ ಕಾರ್ಯಕ್ರಮ ನಗರದ ಐಎಂಎ ಸುವರ್ಣಸೌಧ ಭವನದಲ್ಲಿ ನಡೆಯಿತು.

Vijaya Karnataka 17 Jul 2019, 5:00 am
ಶಿರಸಿ : ಸ್ಥಳೀಯ ರೋಟರಿ ಕ್ಲಬ್‌ನ ನೂತನ ಪದಾಧಿಕಾರಿಗಳ ಸೇವಾದೀಕ್ಷೆ ಕಾರ್ಯಕ್ರಮ ನಗರದ ಐಎಂಎ ಸುವರ್ಣಸೌಧ ಭವನದಲ್ಲಿ ನಡೆಯಿತು.
Vijaya Karnataka Web SRS-16SRS7


ಅಧ್ಯಕ್ಷ ರಾಗಿ ಡಾ.ಶಿವರಾಮ ಕೆ.ವಿ., ಕಾರ್ಯದರ್ಶಿಯಾಗಿ ಪಾಂಡುರಂಗ ಪೈ, ಕೋಶಾಧಿಕಾರಿಯಾಗಿ ಗಣಪತಿ ಭಟ್ಟ ಮತ್ತು ಕಾರ್ಯಕಾರಿ ಕಾರ್ಯದರ್ಶಿಯಾಗಿ ವಿಶಾಖ ಇಸಳೂರ ಪ್ರತಿಜ್ಞಾವಿಧಿ ಸ್ವೀಕರಿಸಿದರು. ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3170ರ ಮಾಜಿ ಪ್ರಾಂತಪಾಲ ವಿಜಾಪುರದ ಡಾ.ಪ್ರಾಣೇಶ ಜಹಗೀರದಾರ ಸೇವಾ ದೀಕ್ಷೆಯನ್ನು ನೀಡಿದರು.

ಸ್ಥಳೀಯ ರೋಟರಿ ಕ್ಲಬ್‌, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಶ್ಲಾಘನೀಯ ಕಾರ್ಯಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುವ ಮೂಲಕ ರಾಜ್ಯ ಮಟ್ಟದಲ್ಲಿ ಮಾದರಿಯ ಸೇವಾ ಸಂಸ್ಥೆಯಾಗಿ ಹೆಸರನ್ನು ಪಡೆದಿದೆ ಎಂದು ಡಾ.ಜಹಗೀರದಾರ ಶ್ಲಾಘಿಸಿದರು.

ನಗರದ ಎಂಇಎಸ್‌ ಶಿಕ್ಷ ಣ ಸಂಸ್ಥೆಯ ಕಾಲೇಜು ಆವರಣದಲ್ಲಿ ಉದ್ಘಾಟನೆಗೊಂಡ ನಾಲ್ಕು ಮಳೆಯ ನೀರಿನ ಸಂಗ್ರಹ, ಇಂಗಿಸುವಿಕೆ ಮತ್ತು ಪುನರ್‌ ಬಳಕೆಯ ಘಟಕಗಳ ಸ್ಥಾಪನೆಯ ಯೋಜನೆ ಮೂಲಕ ಸ್ಥಳೀಯ ಸಂಸ್ಥೆ ತನ್ನ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸಿದೆ. ಜೀವಜಲದ ಸಂರಕ್ಷ ಣೆ ಮತ್ತು ಸದ್ಬಳಕೆಯ ವಿಷಯದಲ್ಲಿ ಮುಂಚೂಣಿಯಲ್ಲಿ ನಿಂತು ಜನಜಾಗೃತಿಯನ್ನು ಮೂಡಿಸಿದೆ ಎಂದು ಹೇಳಿದರು.

ನೂತನ ಪದಾಧಿಕಾರಿಗಳು ಮತ್ತಷ್ಟು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯಶಸ್ಸು ಗಳಿಸಲಿ ಎಂದು ಆಶಿಸಿದರು.

ನಾನಾ ಕಾರ್ಯ ಚಟುವಟಿಕೆ : ರೋಟರಿ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ಆರ್‌.ಎ.ಖಾಜಿ ಮಾತನಾಡಿ, 2018-19ರ ರೋಟರಿ ತಂಡ ಕ್ರಿಯಾಶೀಲತೆಯಿಂದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿ 3170 ರೋಟರಿ ಜಿಲ್ಲೆಯ 129 ಕ್ಲಬ್‌ಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಸಾಧನೆ ಮಾಡಿದೆ ಎಂದರು.

ನೂತನ ಅಧ್ಯಕ್ಷ ಡಾ.ಶಿವರಾಮ ಕೆ. ವಿ. ಮಾತನಾಡಿ ಈ ವರ್ಷ ಎರಡು ಹಿರಿಯ ನಾಗರಿಕರ ವ್ಯಾಯಾಮ ಕೇಂದ್ರಗಳ ಸ್ಥಾಪನೆ, ಪಂಡಿತ ಜನರಲ್‌ ಆಸ್ಪತ್ರೆಯ ನವಜಾತ ಶಿಶು ಕೇಂದ್ರದ ಉನ್ನತೀಕರಣ, ಸುಯೋಗ ಫೌಂಡೇಶನ್‌ ನಡೆಸುತ್ತಿರುವ ವೃದ್ಧಾಶ್ರಮದ ನಿವಾಸಿಗಳಿಗೆ ಪ್ರತಿ ತಿಂಗಳೂ ಅವಶ್ಯಕ ಔಷಧಿಗಳ ಪೂರೈಕೆ. ಗ್ರಾಮೀಣ ಭಾಗಗಳ ಕೆರೆಗಳ ಪುನಶ್ಚೇತನ ಮುಂತಾದ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.

ರೋಟರಿ ಸಂಸ್ಥೆ ಸಹಾಯಕ ಪ್ರಾಂತಪಾಲ ಡಾ.ದಿನೇಶ ಹೆಗಡೆ ನೂತನ ವರ್ಷದ ಅಂತಾರಾಷ್ಟ್ರೀಯ ಅಧ್ಯಕ್ಷೀಯ ಧ್ಯೇಯವಾಕ್ಯ ಅನಾವರಣ ಮಾಡಿದರು. ಸ್ಥಳೀಯ ರೋಟರಿ ಕ್ಲಬ್‌ನ ಯೋಜನೆಗಳಿಗೆ ಅಂತಾರಾಷ್ಟ್ರೀಯ ಪಾಲುದಾರರಾಗಿ ಪ್ರೋತ್ಸಾಹಿಸುತ್ತಿರುವ ಅಮೆರಿಕಾದ ರೊಟೇರಿಯನ್‌ ಡಾ.ವಸಂತ ಪ್ರಭು ರೋಟರಿ ಕ್ಲಬ್‌ನ 60 ವರ್ಷಗಳ ಇತಿಹಾಸವನ್ನು ದಾಖಲಿಸಿದ ವಿಶೇಷ ಸಂಚಿಕೆ ರೋಟರಿ ವಾಯ್ಸ್‌ ನ್ನು ಬಿಡುಗಡೆ ಮಾಡಿದರು. ಕಾರ್ಯದರ್ಶಿ ಪಾಂಡುರಂಗ ಪೈ ವಂದಿಸಿದರು. ಅನಂತ ಪದ್ಮನಾಭ ಮತ್ತು ಅಶೋಕ ಹಬೀಬ ನಿರೂಪಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ