ಆ್ಯಪ್ನಗರ

ಅಡಕೆ ಕಳವಿನ ಆರೋಪಿ ಬಂಧನ

ಕುಮಟಾ : ಪಟ್ಟಣದಲ್ಲಿಅಡಕೆ ಕಳವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.

Vijaya Karnataka 13 Oct 2019, 5:00 am
ಕುಮಟಾ : ಪಟ್ಟಣದಲ್ಲಿಅಡಕೆ ಕಳವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.
Vijaya Karnataka Web arrest of accused of theft
ಅಡಕೆ ಕಳವಿನ ಆರೋಪಿ ಬಂಧನ


ಚಂದ್ರಕಾಂತ ಬೊಬ್ಬು ಹಿಣಿ ಬಂಧಿತನಾದ ಆರೋಪಿ. ಈತ ಪಟ್ಟಣದ ಚಿತ್ರಗಿಯ ಶಶಿಧರ ಭಟ್‌ ಅವರ ಗೋಡೌನಿನಲ್ಲಿಸಂಗ್ರಹಿಸಿಟ್ಟ ಸುಮಾರು 1 ಕ್ವಿಂಟಲ್‌ಗೂ ಅಧಿಕ ಅಡಿಕೆಯನ್ನು ಕಿಟಕಿಯ ಮೂಲಕ ಕೊಕ್ಕೆಯಿಂದ ಚೀಲಗಳನ್ನು ಎಗರಿಸಿದ್ದ ಎನ್ನಲಾಗಿದೆ.

ಅಡಕೆ ಚೀಲ ಕಳುವಾಗಿರುವುದು ಗಮನಕ್ಕೆ ಬಂದಾಕ್ಷಣ ಶಶಿಧರ ಭಟ್‌ ಅವರು ಕುಮಟಾ ಪೊಲೀಸ್‌ ಠಾಣೆಯಲ್ಲಿದೂರು ದಾಖಲಿಸಿದ್ದರು. ಸಿಪಿಐ ಪರಮೇಶ್ವರ ಗುನಗಾ ಅವರು ಪಿಎಸ್‌ಐ ಸಂಪತ್‌ ಮತ್ತು ಸುಧಾ ಅಘನಾಶಿನಿ ನೇತೃತ್ವದ ತಂಡ ರಚಿಸಿ, ತನಿಖೆಗೆ ಸೂಚಿಸಿದ್ದರು. ತನಿಖೆ ಕೈಗೊಂಡ ಪೊಲೀಸ್‌ ಅಧಿಕಾರಿಗಳು ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಿದ್ದರು. ಆದರೂ ಪ್ರಯೋಜನವಾಗಿರಲಿಲ್ಲ. ಆದರೆ ಆ ಭಾಗದಲ್ಲಿಕೆಲವರ ಚಲನ ವಲನಗಳ ಬಗ್ಗೆ ಪೊಲೀಸರು ನಿಗಾ ಇಟ್ಟಿದ್ದರು. ರಾತ್ರಿ ಗಸ್ತು ತಿರುಗುತ್ತಿರುವಾಗ ಹಳಕಾರ ರಸ್ತೆಯಿಂದ ಆರೋಪಿಯು ದ್ವಿಚಕ್ರ ವಾಹನದಲ್ಲಿಅಡಕೆ ಚೀಲ ಹಾಗೂ ಕೊಕ್ಕೆ ಹಾಕಿಕೊಂಡು ಹೋಗುತ್ತಿರುವುದು ಕಂಡು ಬಂದಿತು. ಅನುಮಾನಗೊಂಡ ಪೊಲೀಸರು ಚಂದ್ರಕಾಂತನನ್ನು ವಶಕ್ಕೆ ಪಡೆದು ಬಂಧಿಸಿ ಸಮಗ್ರ ವಿಚಾರಣೆ ನಡೆಸಿದರು. ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆರೋಪಿಗೆ ಈಗ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ