ಆ್ಯಪ್ನಗರ

ಪರೀಕ್ಷಾ ಕೇಂದ್ರಕ್ಕೆ ಅವಧಿ ಮುನ್ನವೇ ಬನ್ನಿ

ಕಾರವಾರ : ದ್ವಿತೀಯ ಪಿಯು ಪರೀಕ್ಷೆ ಮಾರ್ಚ್ 4ರಿಂದ ಪ್ರಾರಂಭವಾಗಲಿದ್ದು ಈ ಬಾರಿ ಪರೀಕ್ಷಾರ್ಥಿಗಳಿಗೆ 40 ಪುಟಗಳ ಉತ್ತರ ಪತ್ರಿಕೆ ನೀಡಲಾಗುತ್ತಿದೆ. ಇದು ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಎಲ್ಲವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಎನ್‌.ಹೆಗಡೆ ಅವರು ತಿಳಿಸಿದರು.

Vijaya Karnataka 20 Feb 2020, 5:00 am
ಕಾರವಾರ : ದ್ವಿತೀಯ ಪಿಯು ಪರೀಕ್ಷೆ ಮಾರ್ಚ್ 4ರಿಂದ ಪ್ರಾರಂಭವಾಗಲಿದ್ದು ಈ ಬಾರಿ ಪರೀಕ್ಷಾರ್ಥಿಗಳಿಗೆ 40 ಪುಟಗಳ ಉತ್ತರ ಪತ್ರಿಕೆ ನೀಡಲಾಗುತ್ತಿದೆ. ಇದು ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಎಲ್ಲವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಎನ್‌.ಹೆಗಡೆ ಅವರು ತಿಳಿಸಿದರು.
Vijaya Karnataka Web arrive early for the test center
ಪರೀಕ್ಷಾ ಕೇಂದ್ರಕ್ಕೆ ಅವಧಿ ಮುನ್ನವೇ ಬನ್ನಿ


ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಬುಧವಾರ ಹಮ್ಮಿಕೊಂಡಿದ್ದ ವಾರ್ತಾ ಸ್ಪಂದನ ನೇರ ಫೋನ್‌ ಇನ್‌ ಹಾಗೂ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದರು.

ಈ ವರ್ಷದಿಂದ ಉತ್ತರ ಪತ್ರಿಕೆಯಲ್ಲಿ40 ಪುಟಗಳು ಜತೆಗೆ ಪ್ರತಿ ಪುಟದಲ್ಲಿಹೆಚ್ಚುವರಿಯಾಗಿ 4-5ರವರೆಗಿನ ಸಾಲುಗಳು(ಲೈನ್ಸ್‌)ಹಾಗೂ ಉತ್ತಮ ಗುಣಮಟ್ಟದ ಕಾಗದ ಪುಟಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಆತಂಕ ಬೇಡ : ಪರೀಕ್ಷಾ ಸಮಯದಲ್ಲಿಬಸ್‌ ಪಾಸ್‌ ಅವಧಿ ಮುಗಿದಿದೆ ಅಥವಾ ಮಾರ್ಗ ಬದಲಾವಣೆಯಾಗಿದೆ ಎಂದು ವಿದ್ಯಾರ್ಥಿಗಳು ಆತಂಕ ಪಡಬೇಕಾಗಿಲ್ಲ. ಶಿಕ್ಷಣ ಸಚಿವರು ಪರೀಕ್ಷಾ ಪ್ರವೇಶ ಪತ್ರವನ್ನೇ ನಿರ್ವಾಹಕರಿಗೆ ತೋರಿಸುವ ಮೂಲಕ ಬಸ್‌ಗಳಲ್ಲಿಸಂಚರಿಸಬಹುದಾಗಿದೆ ಎಂದು ಆದೇಶ ನೀಡಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಪರೀಕ್ಷಾ ಕೇಂದ್ರಗಳಿಗೆ ಮುಂಚಿತವಾಗಿ ಹಾಜರಾಗುವುದು ಹಾಗೂ ಪ್ರವೇಶ ಪತ್ರದ ಝೆರಾಕ್ಸ್‌ ಪ್ರತಿಗಳನ್ನು ತಮ್ಮೊಂದಿಗೆ ಇಟ್ಟುಕೊಳ್ಳುವ ಮೂಲಕ ಪರೀಕ್ಷಾರ್ಥಿಗಳು ಆತಂಕ ಕಡಿಮೆ ಮಾಡಿಕೊಳ್ಳಬಹುದಾಗಿದೆ ಎಂದರು.

30 ಕೇಂದ್ರ : ಜಿಲ್ಲೆಯಲ್ಲಿ30 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಎಲ್ಲಾಕೇಂದ್ರಗಳಲ್ಲಿಯೂ ಕೂಡ ಸಿಸಿಟಿವಿ ಅಳವಡಿಸಲಾಗಿದೆ. ಯಾವುದೇ ಅಕ್ರಮಗಳಿಗೆ ಅವಕಾಶವಿರುವುದಿಲ್ಲಮತ್ತು ಪ್ರತಿ ಪರಿಕ್ಷಾ ಕೊಠಡಿಯಲ್ಲಿಗೋಡೆ ಗಡಿಯಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಪಾಲಕರು ಮುತುವರ್ಜಿ ವಹಿಸಲಿ : ಶಿರಸಿ ಮಾರಿಕಾಂಬ ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲ ಬಾಲಚಂದ್ರ ಭಟ್‌ ಅವರು ಮಾತನಾಡಿ, ಜಿಲ್ಲೆಯಲ್ಲಿಶಿರಸಿ ಮಾರಿಕಾಂಬ ಜಾತ್ರೆ ಹಾಗೂ ಪರೀಕ್ಷೆಗಳು ಏಕಕಾಲದಲ್ಲಿಪ್ರಾರಂಭವಾಗುತ್ತಿರುವುದರಿಂದ ಪಾಲಕರು ತಮ್ಮ ಮಕ್ಕಳನ್ನು ಪರೀಕ್ಷಾ ಕೇಂದ್ರಗಳತ್ತ ಕರೆದೊಯ್ಯಲು ಮುತುವರ್ಜಿ ವಹಿಸಬೇಕು ಎಂದು ಸಲಹೆ ನೀಡಿದರು.

ಕುಮಟಾ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ತೀಶ್‌ ನಾಯ್ಕ ಮಾತನಾಡಿ, ಈ ಸಮಯದಲ್ಲಿವಿದ್ಯಾರ್ಥಿಗಳು ತಮ್ಮ ಆರೋಗ್ಯದತ್ತ ಕೂಡ ಹೆಚ್ಚು ಗಮನ ವಹಿಸಬೇಕು. ಪರೀಕ್ಷೆಯನ್ನು ಸಹಜವಾಗಿಯೇ ಸ್ವೀಕರಿಸಬೇಕು ಮತ್ತು ಓದುವುÜದನ್ನು ಇಷ್ಟ ಪಟ್ಟು ಓದಬೇಕು ಹೊರತು ಕಷ್ಟ ಪಡಬಾರದೆಂಬ ಕಿವಿಮಾತನ್ನು ಹೇಳಿದರು.

ಬೆಳಿಗ್ಗೆ 11:30 ರಿಂದ 12.30 ರವರೆಗೆ ನಡೆದ ಈ ಕಾರ್ಯಕ್ರಮದಲ್ಲಿವಿದ್ಯಾರ್ಥಿಗಳು, ಪಾಲಕರು ಮತ್ತು ಪಿ.ಯು ಕಾಲೇಜಿನ ಉಪನ್ಯಾಸಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ನೇರ ಫೋನ್‌ ಇನ್‌ : ಸಂವಾದಕ್ಕೂ ಮೊದಲು ನಡೆದ ನೇರ ಫೋನ್‌ ಇನ್‌ನಲ್ಲಿಜಿಲ್ಲೆಯ ನಾನಾ ಭಾಗಗಳಿಂದ ಫೋನ್‌ ಮಾಡಿದ ವಿದ್ಯಾರ್ಥಿಗಳು ಆಯಾ ಪಠ್ಯ ಪುಸ್ತಕದಲ್ಲಿಬ್ಲೂಪ್ರಿಂಟ್‌ನ್‌ ಮಾದರಿ ಇದ್ದು, ವಾರ್ಷಿಕ ಪರೀಕ್ಷೆಯಲ್ಲೂಅದೇ ರೀತಿ ಪ್ರಶ್ನೆ ಪತ್ರಿಕೆ ಇರುತ್ತದೆಯಾ? ಪ್ರಶ್ನೆ ಪತ್ರಿಕೆಯಲ್ಲಿಪ್ರಶ್ನೆ ತಪ್ಪಾಗಿದ್ದರೆ ಗ್ರೇಸ್‌ ಮಾರ್ಕ್ ಸಿಗುತ್ತದೆಯಾ? ವಿಜ್ಞಾನ ವಿಷಯದ ವಿದ್ಯಾರ್ಥಿಗಳು ಪಠ್ಯ ಪುಸ್ತಕದಲ್ಲಿಇದ್ದಂತಹ ಉತ್ತರಗಳನ್ನು ಬರೆಯಬೇಕಾ? ಹಾಲ್‌ ಟಿಕೆಟ್‌ನೊಂದಿಗೆ ಇತರೆ ಯಾವುದಾದರೂ ಗುರುತಿನ ಚೀಟಿ ತೆಗೆದುಕೊಂಡು ಹೋಗಬೇಕಾ? ಮೊದಲಾದ ಪ್ರಶ್ನೆಗಳನ್ನು ಕೇಳಿದರು. ವಿದ್ಯಾರ್ಥಿಗಳ ಎಲ್ಲಪ್ರಶ್ನೆಗಳಿಗೆ ಪ್ರಾಚಾರ್ಯರು ಸಮರ್ಪಕ ಉತ್ತರ ನೀಡಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ