ಆ್ಯಪ್ನಗರ

ಕಲೆ, ಸಂಗೀತ, ಸಾಹಿತ್ಯ ಸಂಸ್ಕಾರಕ್ಕೆ ಪೂರಕ

ಹುಬ್ಬಳ್ಳಿ : ಕಲೆ, ಸಂಗೀತ, ಮತ್ತು ಸಾಹಿತ್ಯ ಸಂಸ್ಕಾರಯುತ ವ್ಯಕ್ತಿಯನ್ನಾಗಿ ರೂಪಿಸುತ್ತವೆ ಎಂದು ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್‌ ಸದಸ್ಯೆ ಪರಿಮಳಾ ದೋಟಿಕಲ್‌ (ಕಲಾವಂತ) ಅಭಿಪ್ರಾಯಪಟ್ಟರು.

Vijaya Karnataka 31 Mar 2019, 5:00 am
ಹುಬ್ಬಳ್ಳಿ : ಕಲೆ, ಸಂಗೀತ, ಮತ್ತು ಸಾಹಿತ್ಯ ಸಂಸ್ಕಾರಯುತ ವ್ಯಕ್ತಿಯನ್ನಾಗಿ ರೂಪಿಸುತ್ತವೆ ಎಂದು ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್‌ ಸದಸ್ಯೆ ಪರಿಮಳಾ ದೋಟಿಕಲ್‌ (ಕಲಾವಂತ) ಅಭಿಪ್ರಾಯಪಟ್ಟರು.
Vijaya Karnataka Web art music and literary culture
ಕಲೆ, ಸಂಗೀತ, ಸಾಹಿತ್ಯ ಸಂಸ್ಕಾರಕ್ಕೆ ಪೂರಕ


ಪದ್ಮಶ್ರೀ ಸರ್ದಾರ ವೀರನಗೌಡ ಪಾಟೀಲ ಮಹಿಳಾ ವಿದ್ಯಾಪೀಠದ ಶ್ರೀಮತಿ ಮನೋರಮಾದೇವಿ ಜುಗಲ್‌ಕಿಶೋರ್‌ ಸೋಮಾನಿ ಕಲಾ ಹಾಗೂ ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಅಧ್ಯಯನ ವಿಭಾಗಗಳ ಪ್ರಸಕ್ತ ಸಾಲಿನ ಸಾಂಸ್ಕೃತಿಕ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಮಹಿಳಾ ವಿದ್ಯಾಪೀಠದ ಕಾರ್ಯದರ್ಶಿ ಕೆ.ಟಿ. ಪಾಟೀಲ ಅಧ್ಯಕ್ಷ ತೆ ವಹಿಸಿ ಮಾತನಾಡಿ, ದೈಹಿಕ ಸದೃಢತೆ ಬೌದ್ಧಿಕ ವಿಕಸನಕ್ಕೆ ಅಡಿಪಾಯ. ಸಾಧನೆಗೆ ಅನಾರೋಗ್ಯವೇ ಅಡ್ಡಿಯಾಗಬಾರದು. ಪಠ್ಯ ಮಹತ್ವದ್ದೇ ಆದರೂ, ಪಠ್ಯೇತರ ಚಟುವಟಿಕೆ ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾಸ ಉದ್ದೀಪಿಸುತ್ತದೆ ಎಂದು ತಿಳಿಸಿದರು.

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ 2017-18ನೇ ಸಾಲಿನ ಬಿ.ಎ ಪದವಿಯಲ್ಲಿ ತೃತೀಯ ರಾರ‍ಯಂಕ್‌ ಗಳಿಸಿದ ಹಿನ್ನೆಲೆಯಲ್ಲಿ ವರ್ಷಾ ವೀರಪ್ಪಣ್ಣ ಹುದ್ದಾರಗೆ ಮಹಾವಿದ್ಯಾಲಯದ ಪರವಾಗಿ ಹಾಗೂ ಸಂಸ್ಥೆಯ ಅಧ್ಯಕ್ಷ ಬಸಂತಕುಮಾರ ಪಾಟೀಲ, ಕಾರ್ಯದರ್ಶಿ ಕೆ.ಟಿ. ಪಾಟೀಲ ಅವರು ಕೊಡಮಾಡಿದ ನಗದು ಪುರಸ್ಕಾರ ನೀಡಿ, ಗೌರವಿಸಲಾಯಿತು.

ರಂಗಭೂಮಿ ಹಿರಿಯ ಕಲಾವಿದ ಬಸವರಾಜ ತಿರ್ಲಾಪೂರ ಅವರು ವಿದ್ಯಾರ್ಥಿಗಳಿಗೆ ಪುರಸ್ಕಾರಗಳನ್ನು ಪ್ರದಾನ ಮಾಡಿದರು. ಮಹಿಳಾ ವಿದ್ಯಾಪೀಠದ ಸಂಸ್ಥಾಪಕರಾದ ಪದ್ಮಶ್ರೀ ಸರ್ದಾರ ವೀರನಗೌಡ ಪಾಟೀಲ ಹಾಗೂ ಶ್ರೀಮತಿ ನಾಗಮ್ಮಾತಾಯಿ ಪಾಟೀಲ ಪುತ್ಥಳಿಗೆ ಗೌರವಾರ್ಪಣೆ ಮಾಡಿದರು.

ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಡಿ.ಪಿ.ಮಣಕಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಉಪನ್ಯಾಸಕಿ ಪೂರ್ಣಿಮಾ ಎಕಲಾಸಪೂರ ಪರಿಚಯಿಸಿದರು. ಉಪನ್ಯಾಸಕ ಸುರೇಶ ಕೊಟಗಿ ಪದವಿ ವಿಭಾಗದ ವರದಿ ಹಾಗೂ ಉಪನ್ಯಾಸಕಿ ನೀಲಮ್ಮಾ ಸಾಲಿಮಠ ಸ್ನಾತಕೋತ್ತರ ವಿಭಾಗದ ವಾರ್ಷಿಕ ವರದಿ ವಾಚಿಸಿದರು.

ಉಪನ್ಯಾಸಕಿ ರಾಜೇಶ್ವರಿ ತೋಟಗಿ, ಅನಿತಾ ಗೌಡರ, ಉಪನ್ಯಾಸಕ ಮಂಜುನಾಥ ಮಾಗಿ ಸಾಂಸ್ಕೃತಿಕ ಹಾಗೂ ಕ್ರೀಡಾ ವಿಭಾಗಗಳ ವಿಜೇತರ ಪಟ್ಟಿ ಪ್ರಕಟಿಸಿದರು. ಉಪನ್ಯಾಸಕಿ ಸಿ.ವಿ. ಕೋರಿಶೆಟ್ಟರ್‌ ನಿರೂಪಿಸಿದರು. ಉಪನ್ಯಾಸಕಿ ರೇಖಾ ಶಿರಗುಪ್ಪಿ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ