ಆ್ಯಪ್ನಗರ

ಕಲ್ಲುಕ್ವಾರೆ ಮೇಲೆ ದಾಳಿ 7 ಟಿಲ್ಲರ್‌ ವಶ

ಸಿದ್ದಾಪುರ : ತಾಲೂಕಿನ ಶಿರಳಗಿ ಗ್ರಾಪಂ ವ್ಯಾಪ್ತಿಯ ಬಾಳೆಕೊಪ್ಪ ಗ್ರಾಮದಲ್ಲಿ ಅಪಾರ ಪ್ರಮಾಣದ ಕೆಂಪುಕಲ್ಲು ತೆಗೆಯಲಾಗುತ್ತಿದೆ ಎಂಬ ಖಚಿತ ದೂರು ಆಧರಿಸಿ ಶಿರಸಿ ಉಪವಿಭಾಗಾಧಿಕಾರಿ ರಾಜು ಮೊಗೇರ ನೇತೃತ್ವದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಬುಧವಾರ ದಾಳಿ ನಡೆಸಿ 3.5ಲಕ್ಷ ರೂ. ಮೌಲ್ಯದ 7 ಟಿಲ್ಲರ್‌ ವಶಪಡಿಸಿಕೊಂಡಿದ್ದಾರೆ.

Vijaya Karnataka 29 Nov 2018, 5:00 am
ಸಿದ್ದಾಪುರ : ತಾಲೂಕಿನ ಶಿರಳಗಿ ಗ್ರಾಪಂ ವ್ಯಾಪ್ತಿಯ ಬಾಳೆಕೊಪ್ಪ ಗ್ರಾಮದಲ್ಲಿ ಅಪಾರ ಪ್ರಮಾಣದ ಕೆಂಪುಕಲ್ಲು ತೆಗೆಯಲಾಗುತ್ತಿದೆ ಎಂಬ ಖಚಿತ ದೂರು ಆಧರಿಸಿ ಶಿರಸಿ ಉಪವಿಭಾಗಾಧಿಕಾರಿ ರಾಜು ಮೊಗೇರ ನೇತೃತ್ವದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಬುಧವಾರ ದಾಳಿ ನಡೆಸಿ 3.5ಲಕ್ಷ ರೂ. ಮೌಲ್ಯದ 7 ಟಿಲ್ಲರ್‌ ವಶಪಡಿಸಿಕೊಂಡಿದ್ದಾರೆ.
Vijaya Karnataka Web KWR-28 SDPR1
ಸಿದ್ದಾಪುರ ಬಾಳೆಕೊಪ್ಪದಲ್ಲಿ ಕೆಂಪುಕಲ್ಲಿನ ಕ್ವಾರೆಯ ಮೇಲೆ ದಾಳಿ ನಡೆಸಿ ಪರಿಶೀಲಿಸುತ್ತಿರುವ ರಾಜು ಮೊಗೇರ,ಪಟ್ಟರಾಜ ಗೌಡ.


ಬಾಳೆಕೊಪ್ಪ ಗ್ರಾಮದ ಕೆಲ ಪ್ರದೇಶವನ್ನು ಸರಕಾರ ಕೆಲವರಿಗೆ ವಿವಿಧ ಹಣ್ಣು ಬೆಳೆಯಲು ಮಂಜೂರಿ ನೀಡಿತ್ತು. ಆದರೆ ಇದನ್ನು ಅನಧಿಕೃತವಾಗಿ ಕಲ್ಲುಕ್ವಾರೆ ತೆಗೆಯುವವರಿಗೆ ನೀಡಲಾಗಿದೆ ಹಾಗೂ ಇದೇ ಗ್ರಾಮದ ಖಾಸಗಿ ಮಾಲೀಕತ್ವದ ಜಮೀನಾದರೂ ಕಲ್ಲುತೆಗೆಯಲು ಅನುಮತಿ ಪಡೆದಿರಲಿಲ್ಲ ಈ ಕಾರಣದಿಂದ ದಾಳಿ ನಡೆಸಲಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಕಳೆದ ತಿಂಗಳು ಸ್ಥಳೀಯ ತಹಸೀಲ್ದಾರ್‌ ಪಟ್ಟರಾಜ ಗೌಡ ಇದೇ ಕ್ವಾರೆಗೆ ದಾಳಿ ನಡೆಸಿ ಸುಮಾರು 25 ಸಾವಿರರೂ. ದಂಡ ವಿಧಿಸಿದ್ದರು. ಆದರೂ ರಾತ್ರಿ ಸಮಯದಲ್ಲಿ ಬೆಳಕು ಹಾಕಿಕೊಂಡು ಕಲ್ಲುತೆಗೆಯಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಇಲ್ಲಿಯವರೆಗೆ ಸುಮಾರು 25-30ಲಕ್ಷ ರೂ. ಮೌಲ್ಯದ ಕಲ್ಲು ತೆಗೆಯಲಾಗಿದೆ ಎಂದು ಕಂದಾಯ ಇಲಾಖೆಯವರು ಅಂದಾಜಿಸಿದ್ದಾರೆ.

ಬುಧವಾರ ವಾರದ ಸಂತೆಯ ದಿನವಾದ್ದರಿಂದ ಕಾರ್ಮಿಕರು ಬಂದಿರಲಿಲ್ಲ ಹಾಗೂ ಕಲ್ಲು ಒಯ್ಯುವ ವಾಹನಗಳು ಇರಲಿಲ್ಲ. ದಾಳಿಯಲ್ಲಿ ತಹಸೀಲ್ದಾರ ಪಟ್ಟರಾಜ ಗೌಡ, ಕಂದಾಯ ನಿರೀಕ್ಷ ಕಡಿ.ಎಂ.ನಾಯ್ಕ ಹಾಗೂ ತಹಸೀಲ್ದಾರರ್‌ ಕಚೇರಿಯ ಸಿಬ್ಬಂದಿ ಭಾಗವಹಿಸಿದ್ದರು. ವಶಪಡಿಸಿಕೊಂಡ ಟಿಲ್ಲರ್‌ನ್ನು ಪಪಂ ವಾಹನದಲ್ಲಿ ಸಾಗಿಸಲಾಯಿತು. ಸ್ಥಳದಲ್ಲಿ ಪೊಲೀಸ್‌ ಬಂದೋಬಸ್ತ ಏರ್ಪಡಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ