ಪ್ರೇಕ್ಷಕರ ಮನರಂಜಿಸಿದ ಡೊಳ್ಳು ಕುಣಿತ.. ಸಂಗೀತ
ಕಾರವಾರ : ಕರಾವಳಿ ಉತ್ಸವದ ಅಂಗವಾಗಿ ನಗರದ ಜಿಲ್ಲಾರಂಗಮಂದಿರದಲ್ಲಿ ಭಾನುವಾರ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ರಂಜಿಸಿತು. ಮೊದಲಿಗೆ ಸಿದ್ದಾಪುರದ ಮಹಾಗಣಪತಿ ಡೊಳ್ಳಿನ ಸಂಘದ ಸದಸ್ಯರು ಡೊಳ್ಳು ಕುಣಿತವನ್ನು ಪ್ರಸ್ತುತಪಡಿಸಿದರು. ಕಲಾವಿದರ ತಂಡ ವೀರಾವೇಶದಿಂದ ಡೊಳ್ಳು ಬಾರಿಸಿ ಕುಣಿದು ಪ್ರೇಕ್ಷ ಕರ ಗಮನ ಸೆಳೆದರು. ಬಳಿಕ ಇಲ್ಲಿನ ಸ್ಥಳೀಯ ಸ್ವರಗಂಧ ಸಂಗೀತ ವಿದ್ಯಾಲಯದ ಸದಸ್ಯರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಪದ್ಮಜಾ ಮತ್ತು ತಂಡ ವೃಂದಗಾನದಲ್ಲಿ ಶಿವನ ವರ್ಣನೆಯ ಗೀತೆಯನ್ನು ಹಾಡಿ ಜನ ಮೆಚ್ಚುಗೆಗೆ ಪಾತ್ರರಾದರು.
Vijaya Karnataka 10 Dec 2018, 5:00 am
ಕಾರವಾರ : ಕರಾವಳಿ ಉತ್ಸವದ ಅಂಗವಾಗಿ ನಗರದ ಜಿಲ್ಲಾರಂಗಮಂದಿರದಲ್ಲಿ ಭಾನುವಾರ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ರಂಜಿಸಿತು. ಮೊದಲಿಗೆ ಸಿದ್ದಾಪುರದ ಮಹಾಗಣಪತಿ ಡೊಳ್ಳಿನ ಸಂಘದ ಸದಸ್ಯರು ಡೊಳ್ಳು ಕುಣಿತವನ್ನು ಪ್ರಸ್ತುತಪಡಿಸಿದರು. ಕಲಾವಿದರ ತಂಡ ವೀರಾವೇಶದಿಂದ ಡೊಳ್ಳು ಬಾರಿಸಿ ಕುಣಿದು ಪ್ರೇಕ್ಷ ಕರ ಗಮನ ಸೆಳೆದರು. ಬಳಿಕ ಇಲ್ಲಿನ ಸ್ಥಳೀಯ ಸ್ವರಗಂಧ ಸಂಗೀತ ವಿದ್ಯಾಲಯದ ಸದಸ್ಯರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಪದ್ಮಜಾ ಮತ್ತು ತಂಡ ವೃಂದಗಾನದಲ್ಲಿ ಶಿವನ ವರ್ಣನೆಯ ಗೀತೆಯನ್ನು ಹಾಡಿ ಜನ ಮೆಚ್ಚುಗೆಗೆ ಪಾತ್ರರಾದರು. ಅಂಕೋಲಾದ ಎನ್.ಜಿ.ವಾರೀಧಿ ಮತ್ತು ತಂಡ ನಂತರ ಭಟ್ಕಳದ ಮುಂಡಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಜಾನಪದ ನೃತ್ಯಕ್ಕೆ ಹೆಜ್ಜೆ ಹಾಕಿ ಕುಣಿದರು. ಕಾರ್ಯಕ್ರಮದಲ್ಲಿ ಬೆಂಗಳೂರಿನ ಡಾ. ಹುಲಿಕಲ್ ನಟರಾಜ್ ಅವರ ಪವಾಡ ಮತ್ತು ವೈಜ್ಞಾನಿಕ ಸತ್ಯ ಕಾರ್ಯಕ್ರಮ ಪ್ರೇಕ್ಷ ಕರಿಗೆ ಮುದ ನೀಡಿತು. ಆನಂತರ ಹೊನ್ನಾವರದ ಭುವನೇಶ್ವರಿ ನುಡಿ ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿತು. ಶಿರಸಿಯ ಮಂಜುನಾಥ್ ಜೆ.ಶೆಟ್ಟಿ ಮಿಮಿಕ್ರಿ ನಡೆಸಿಕೊಡುವುದರ ಮೂಲಕ ಪ್ರೇಕ್ಷ ಕರ ಮನ ರಂಜಿಸಿದರು. ಬಳಿಕ ನಡೆದ ಇಲ್ಲಿನ ಆಶಾ ನಿಕೇತನ ಶಾಲೆಯ ಕಿವುಡ ಮತ್ತು ಅಂಧ ಮಕ್ಕಳ ನೃತ್ಯ ಪ್ರದರ್ಶನ ಜನರನ್ನು ವಿಶೇಷವಾಗಿ ಆಕರ್ಷಿಸಿತು. ಜಾನಪದ ಗೀತೆಗಳನ್ನು ಹಾಡುವುದರ ಮೂಲಕ ಬೆಳಗಾವಿಯ ಸಿದ್ದು ಮುಟೆ ಜಾನಪದ ಸಂಗೀತ ಪ್ರಸ್ತುತ ಪಡಿಸಿದರು. ನೂರಾರು ಸಂಖ್ಯೆಯಲ್ಲಿ ಸೇರಿದ ಸಾರ್ವಜನಿಕರು ಹಾಗೂ ವಿಶೇಷವಾಗಿ ಯುವಕರು ಕಲಾವಿದರನ್ನು ಚೆಪ್ಪಾಳೆ ಹಾಗೂ ಶಿಳ್ಳೆ ಹಾಕುವುದರ ಮೂಲಕ ಪ್ರೋತ್ಸಾಹಿಸಿದರು.