ಆ್ಯಪ್ನಗರ

ಆಟೋ, 7 ಬೈಕ್‌, 5 ಸೈಕಲ್‌ ಭಸ್ಮ

1ಕಾರವಾರ : ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್‌ಗಳಿಗೆ ಬೆಂಕಿ ತಗುಲಿ ಸುಟ್ಟು ಕರಕಲಾದ ಘಟನೆ ಇಲ್ಲಿನ ಹರಿದೇವ ನಗರದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

Vijaya Karnataka 11 Apr 2019, 5:00 am
1ಕಾರವಾರ : ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್‌ಗಳಿಗೆ ಬೆಂಕಿ ತಗುಲಿ ಸುಟ್ಟು ಕರಕಲಾದ ಘಟನೆ ಇಲ್ಲಿನ ಹರಿದೇವ ನಗರದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
Vijaya Karnataka Web auto 7 bike 5 motorcycle bore
ಆಟೋ, 7 ಬೈಕ್‌, 5 ಸೈಕಲ್‌ ಭಸ್ಮ


ಹರಿದೇವನಗರದ ಸರಕಾರಿ ಗ್ರಂಥಾಲಯದ ಸಮೀಪ ನಿಲ್ಲಿಸಿದ್ದ 7 ಬೈಕ್‌, 5 ಸೈಕಲ್‌ ಹಾಗೂ ಒಂದು ಆಟೋ ಬೆಂಕಿಗೆ ಆಹುತಿಯಾಗಿವೆ.

ಈ ಭಾಗದಲ್ಲಿ ಎತ್ತರದ ಗುಡ್ಡಗಳಲ್ಲಿ ಮನೆ ಹೊಂದಿರುವವರು ಹಾಗೂ ಚಿಕ್ಕ ರಸ್ತೆಯ ಕಾರಣಕ್ಕೆ ಮನೆ ಆವಾರಕ್ಕೆ ವಾಹನ ಕೊಂಡೊಯ್ಯಲು ಆಗದವರು ಬೈಕ್‌ಗಳನ್ನು ಗ್ರಂಥಾಲಯದ ಸಮೀಪದ ರಸ್ತೆಪಕ್ಕದಲ್ಲಿ ನಿಲ್ಲಿಸುತ್ತಾರೆ. ಕೆಲ ವಾಹನಗಳು ನಿಲ್ಲಿಸಿದ ಜಾಗದಲ್ಲಿಯೇ ವಿದ್ಯುತ್‌ ಕಂಬವಿದ್ದು ಶಾರ್ಟ್‌ ಸಕ್ರ್ಯೂಟ್‌ ಆಗಿರುವ ಅನುಮಾನವನ್ನು ಕೆಲವರು ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ ಮೊದಲು, ಈ ಭಾಗದಲ್ಲಿ ನಿಲ್ಲಿಸಿದ್ದ ಬೈಕ್‌ನಿಂದ ಪೆಟ್ರೋಲ್‌ ಕದಿಯುತ್ತಿದ್ದರು. ಅದೇ ರೀತಿ ಮಂಗಳವಾರ ರಾತ್ರಿ ಕೂಡ ಪೆಟ್ರೋಲ್‌ ಕದಿಯುವ ವೇಳೆ ಈ ಘಟನೆ ನಡೆದಿರುವ ಸಾಧ್ಯತೆ ಇದೆ ಎಂಬುದು ಇನ್ನು ಕೆಲವರ ಶಂಕೆಯಾಗಿದೆ. ಈ ಕುರಿತು ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ