ಆ್ಯಪ್ನಗರ

ಅರಿವು, ಹಸಿವು ಒಂದೇ ನಾಣ್ಯದ ಮುಖಗಳು

ಶಿರಸಿ : ಮನುಷ್ಯನ ಬದುಕು ಸಾರ್ಥಕ್ಯತೆ ಕಡೆಗೆ ಸಾಗಬೇಕಾದರೆ ಮುಖ್ಯವಾಗಿ ಬೇಕಾದದ್ದು ಜೀವಜೈತನ್ಯ ಎಂದು ಶ್ರೀ ಕ್ಷೇತ್ರ ಹೊರನಾಡು ಧರ್ಮದರ್ಶಿ ಡಾ.ಜಿ.ಭೀಮೇಶ್ವರ ಜೋಷಿ ಹೇಳಿದರು.

Vijaya Karnataka 28 May 2019, 5:00 am
ಶಿರಸಿ : ಮನುಷ್ಯನ ಬದುಕು ಸಾರ್ಥಕ್ಯತೆ ಕಡೆಗೆ ಸಾಗಬೇಕಾದರೆ ಮುಖ್ಯವಾಗಿ ಬೇಕಾದದ್ದು ಜೀವಜೈತನ್ಯ ಎಂದು ಶ್ರೀ ಕ್ಷೇತ್ರ ಹೊರನಾಡು ಧರ್ಮದರ್ಶಿ ಡಾ.ಜಿ.ಭೀಮೇಶ್ವರ ಜೋಷಿ ಹೇಳಿದರು.
Vijaya Karnataka Web SRS-27SRS3
ಶಿರಸಿ ಎಂಇಎಸ್‌ ಚೈತನ್ಯ ಪದವಿಪೂರ್ವ ಕಾಲೇಜಿನ ಅನ್ನಪೂರ್ಣ ಭೋಜನಾಲಯದ ನೂತನ ಕಟ್ಟಡ ಶ್ರೀ ಕ್ಷೇತ್ರ ಹೊರನಾಡು ಧರ್ಮದರ್ಶಿ ಡಾ.ಜಿ.ಭೀಮೇಶ್ವರ ಜೋಷಿ ಉದ್ಘಾಟಿಸಿದರು.


ನಗರದ ಎಂಇಎಸ್‌ ಚೈತನ್ಯ ಪದವಿಪೂರ್ವ ಮಹಾವಿದ್ಯಾಲಯಲಯದ ಅನ್ನಪೂರ್ಣ ಭೋಜನಾಲಯದ ನೂತನ ಕಟ್ಟಡ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಬದಲಾವಣೆ ಪ್ರಕೃತಿಯ ನಿಯಮ. ಬದುಕು ಚಲನಶೀಲವಾಗಿರಬೇಕು. ನಿಂತ ನೀರಾಗಬಾರದು ಎಂದ ಅವರು ಜೀವಚೈತನ್ಯವನ್ನು ಉತ್ತಮವಾದ ಆಹಾರ ಸೇವನೆಯಿಂದ ಸಂಪತ್ಕರಿಸಿ, ಸಮಷ್ಠಿಗೊಳಿಸಿ, ಸಮೃದ್ಧಿಗೊಳಿಸಲು ಸಾಧ್ಯ ಎಂದರು.

ಜೀವಚೈತನ್ಯ ಸದಾ ಚೈತನ್ಯಪೂರ್ಣವಾಗಿ ನಲಿದಾಡಲು, ಸಂಭ್ರಮವಾಗಲು, ಸಾರ್ಥಕ್ಯವಾಗಲು ಸಧೃಢವಾದ ವ್ಯವಸ್ಥೆಯ ಮೂಲ ಧಾತು ಅನ್ನ. ಅದಕ್ಕೆ ವಿಶೀಷ್ಟವಾದ ದೈವತ್ವದ ಸ್ವರೂಪವಿದೆ. ಬೇರೆ ಯಾವುದೇ ಪದಾರ್ಥಕ್ಕೂ ದೈವತ್ವ ಸ್ವರೂಪ ನೀಡಿರುವುದನ್ನು ಕಾಣಲು ಸಾಧ್ಯವಿಲ್ಲ. ಸಮಸ್ತ ಧಾತುಗಳನ್ನು ಸಮಚಿತ್ತ ಸಂಯೋಜಿತವಾಗಿ ಹೊಂದಿರುವುದರಿಂದ ಅದು ಚೈತನ್ಯಪೂರ್ಣವಾಗಿದೆ ಎಂದರು.

ಅನ್ನವನ್ನು ಊಟ ಎಂದು ಸ್ವೀಕರಿಸುವುದಕ್ಕಿಂತ ಪ್ರಸಾದ ಎಂದು ಸ್ವೀಕರಿಸುತ್ತೇವೆ. ಹೀಗೆ ಪ್ರಸಾದ ಎಂದು ಸ್ವೀಕರಿಸಿದ ಅನ್ನ ಒಳಕ್ಕೆ ಹೋದಾಗ ಜೀವಚೈತನ್ಯ ಚೈತನ್ಯಪೂರ್ಣವಾಗುತ್ತದೆ. ಅದು ಸಂತೃಪ್ತಭಾವ ಮೂಡಿಸುತ್ತದೆ. ಆದರೆ ಜ್ಞಾನದ ಹಸಿವು ಹಾಗಲ್ಲ. ಅದು ನಿತ್ಯ ನಿರಂತರ ಎಂದರು.

ಹಸಿವಿನಿಂದ ಅರಿವು...

ಬದುಕಿನ ವಿಸ್ತಾರಕ್ಕೆ ಅರಿವು ಮತ್ತು ಹಸಿವು ಒಂದೇ ನಾಣ್ಯದ ಮುಖಗಳಿದ್ದಂತೆ. ಮನುಷ್ಯನಿಗೆ ಎಷ್ಟು ಹಸಿವು ಆಗುತ್ತಾ ಹೋಗುತ್ತದೆಯೋ ಅಷ್ಟು ಅರಿವು ಜಾಸ್ತಿಯಾಗುತ್ತಾ ಹೋಗುತ್ತದೆ. ಜೀವ-ಬದುಕಿನಂತೆ ಹಸಿವು ಹಾಗೂ ಅರಿವು ಜೀವನದಲ್ಲಿ ಮುಖ್ಯವಾಗುತ್ತದೆ. ಹಸಿವಿನಿಂದ ಅರಿವು ಸಾಧ್ಯವಾಗುತ್ತದೆ. ಇದರಲ್ಲಿ ಆಹಾರದ ಹಸಿವೊಂದೇ ಅಲ್ಲ. ಬದುಕಿನ, ಜ್ಞಾನದ, ವಿಸ್ತಾರದ, ನಿತ್ಯ, ಸತ್ಯ, ಸಂಬಂಧ, ಸಂಸ್ಕಾರ, ಸಂಸ್ಕೃತಿ, ದೇಶ, ಸಮಷ್ಟಿಯ ಹಾಗೂ ಸಮಗ್ರವಾಗಿ ಬದುಕಿ ಬಾಳಬೇಕು ಎಂಬ ಹಸಿವು ಜಾಗೃತ ಮಾಡಿಕೊಡುತ್ತದೆ ಎಂದರು.

ಚೈತನ್ಯ ಪಪೂ ಕಾಲೇಜಿನ ಅನ್ನಪೂರ್ಣ ವ್ಯವಸ್ಥೆಗೆ 25ಸಾವಿರ ರೂ.ಧನಸಹಾಯ ನೀಡುವುದಾಗಿ ಅವರು ಇದೇ ಸಂದರ್ಭದಲ್ಲಿ ಪ್ರಕಟಿಸಿದರು. ವಿದ್ಯಾರ್ಥಿಗಳಿಗೆ ಉಚಿತ ಊಟದ ವ್ಯವಸ್ಥೆ ಮಾಡುವಂತೆಯೂ ಸಲಹೆಯಿತ್ತರು.

ಎಂಇಎಸ್‌ ಶಿಕ್ಷ ಣ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್‌.ಪಿ.ಶೆಟ್ಟಿ ಮಾತನಾಡಿ, ಶಿಕ್ಷ ಣ ಸಂಸ್ಥೆಯಡಿ 16ಅಂಗ ಸಂಸ್ಥೆಗಳಿದ್ದು, 4500ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಸಂಸ್ಥೆಯ ಕ್ಯಾಂಪಸ್‌ನಲ್ಲಿ ಇರುವ ಅನ್ನಪೂರ್ಣ ಯೋಜನೆಯಲ್ಲಿ 800ಮಂದಿ ವಿದ್ಯಾರ್ಥಿಗಳು ಊಟ ಮಾಡುತ್ತಾರೆ ಎಂದರು.

ಸ್ಥಳೀಯವಾಗಿ ಉತ್ತಮ ಶಿಕ್ಷ ಣ ಗುಣಮಟ್ಟದ ಶಿಕ್ಷ ಣ ನೀಡುವ ಇಂತಹ ಕಾಲೇಜುಗಳಲ್ಲಿ ಈ ಭಾಗದ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುವುಂತಾಗಬೇಕು. ಇಂತಹ ವ್ಯವಸ್ಥೆ ಇರುವಾಗಲೂ ವಿದ್ಯಾರ್ಜನೆಗೆ ಹೊರ ಪ್ರದೇಶಗಳಿಗೆ ತೆರಳುತ್ತಿರುವುದು ಬೇಸರದ ಸಂಗತಿ. ಎಂಇಎಸ್‌ ಪದವಿಪೂರ್ವ ಕಾಲೇಜಿಗೆ 5ಕೋಟಿ ವೆಚ್ಚದಲ್ಲಿ ಕಟ್ಟಡ ಕಟ್ಟುತ್ತಿದ್ದು ಇನ್ನೊಂದು ವರ್ಷದ ಅವಧಿಯಲ್ಲಿ ಕಾಮಗಾರಿ ಮುಗಿಸುತ್ತೇವೆ ಎಂದರು.

ಎಂಇಎಸ್‌ ಶಿಕ್ಷ ಣ ಸಂಸ್ಥೆ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ ಮಾತನಾಡಿ, ಶಿಕ್ಷ ಣ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಉಪಸಮಿತಿ ಅಧ್ಯಕ್ಷ ನರೇಂದ್ರ ಹೆಗಡೆ ಹೊಂಡಗಾಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಆರ್‌.ಎಂ.ಭಟ್ಟ, ಕಟ್ಟಡ ಸಮಿತಿ ಅಧ್ಯಕ್ಷ ಶ್ಯಾಮಸುಂದರ ಭಟ್ಟ ಉಪಸ್ಥಿತರಿದ್ದರು. ಅನಂತಮೂರ್ತಿ ಭಟ್ಟ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ