ಆ್ಯಪ್ನಗರ

ಶಾಲೆಗಳಲ್ಲಿ ರೈಲ್ವೆ ಪೊಲೀಸರಿಂದ ಜಾಗೃತಿ ಕಾರಾರ‍ಯಗಾರ

ಕಾರವಾರ : ಕೊಂಕಣ ರೈಲ್ವೇ ವ್ಯಾಪ್ತಿಯ ಕಾರವಾರದಲ್ಲಿ ರೈಲ್ವೇ ಪೊಲೀಸರು ಇದೇ ಮೊದಲ ಬಾರಿಗೆ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಲ್ಲಿ ರೈಲಿನಲ್ಲಿ ನಡೆಯುವ ವಿವಿಧ ಅಪರಾಧ ಚಟುವಟಿಕೆಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

Vijaya Karnataka 31 Jul 2019, 5:00 am
ಕಾರವಾರ : ಕೊಂಕಣ ರೈಲ್ವೇ ವ್ಯಾಪ್ತಿಯ ಕಾರವಾರದಲ್ಲಿ ರೈಲ್ವೇ ಪೊಲೀಸರು ಇದೇ ಮೊದಲ ಬಾರಿಗೆ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಲ್ಲಿ ರೈಲಿನಲ್ಲಿ ನಡೆಯುವ ವಿವಿಧ ಅಪರಾಧ ಚಟುವಟಿಕೆಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
Vijaya Karnataka Web KWR-27 GURUDATT 4


ರೈಲ್ವೇ ಪೊಲೀಸ್‌ ಇಲಾಖೆಯಿಂದ ಈ ಹಿಂದೆಯೂ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಾಗಾರ ನಡೆಯುತ್ತಿತ್ತು. ಆದರೆ ಮೊದಲೆಲ್ಲ ಕಾರ್ಯಾಗಾರ ರೈಲ್ವೇ ನಿಲ್ದಾಣದಲ್ಲಿ ನಡೆಯುತ್ತಿದ್ದ ಕಾರಣ ಮಕ್ಕಳೇ ರೈಲ್ವೇ ಸ್ಟೇಷನ್‌ಗೆ ಬರಬೇಕಿತ್ತು. ಅನಾನುಕೂಲದ ಕಾರಣ ಬಹಳಷ್ಟು ಮಕ್ಕಳು ಕಾರ್ಯಾಗಾರಕ್ಕೆ ಗೈರು ಹಾಜರಾಗುವ ಸಂಭವ ಇತ್ತು. ಆದರೆ ಈ ಬಾರಿ ರೈಲ್ವೇ ಪೊಲೀಸ್‌ ಅಧಿಕಾರಿಗಳೇ ಶಾಲೆಗಳಿಗೆ ತೆರಳಿ ಕಾರ್ಯಾಗಾರ ಏರ್ಪಡಿಸುತ್ತಿದ್ದಾರೆ. ಕಾರವಾರದಲ್ಲಿ ಈಗಾಗಲೇ ಕೇಂದ್ರೀಯ ವಿದ್ಯಾಲಯ ಮತ್ತು ಸೇಂಟ್‌ ಮೈಕಲ್ಸ್‌ ಶಾಲೆಗಳಲ್ಲಿ ಕಾರ್ಯಾಗಾರ ಯಶಸ್ವಿಯಾಗಿ ನಡೆಸಿದ್ದಾರೆ.

ಏನೇನು ಮಾಹಿತಿ ? : ರೈಲಿನಲ್ಲಿ ಪರಿಚಿತರು ತಿಂಡಿ ತಿನಿಸುಗಳ ಆಮಿಷ ತೋರಿಸಿ ಮಕ್ಕಳನ್ನು ಅಪಹರಿಸುವ ಸಾಧ್ಯತೆಯ ಬಗ್ಗೆ, ಡ್ರಗ್ಸ್‌ , ಅಕ್ರಮ ಮದ್ಯ ಮೊದಲಾದವುಗಳ ಸಾಗಾಟದ ಬಗ್ಗೆ, ಮಾನವ ಕಳ್ಳ ಸಾಗಣೆಯ ಕುರಿತು ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೇ ಕೊಕಣ ರೈಲ್ವೇ ಸಹಾಯವಾಣಿ 182ಕ್ಕೆ ಕರೆ ಮಾಡುವ ಬಗ್ಗೆ ಸಹ ಮಾಹಿತಿ ನೀಡಲಾಗುತ್ತಿದೆ ಎಂದು ಕಾರವಾರ ರೈಲ್ವೇ ಪೊಲೀಸ್‌ ಅಧಿಕಾರಿ ದೀಪಕ್‌ ಶರ್ಮಾ ಹೇಳಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ