ಆ್ಯಪ್ನಗರ

ಉತ್ತರ ಕನ್ನಡ: ಬಾಳೆ ಬೆಳೆ ವ್ಯರ್ಥ, ರೈತರ ಗೋಳು

ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವಾರು ರೈತರು ಹೆಕ್ಟೇರ್‌ಪ್ರದೇಶದಲ್ಲಿಬಾಳೆ ಬೆಳೆ ಈಗ ವ್ಯರ್ಥವಾಗುತ್ತಿದೆ. ಇದರಿಂದ ರೈತರು ಅಪಾರ ನಷ್ಟದ ಸಂಕಷ್ಟಕ್ಕೆ ಸಿಲುಕಿದ್ದಾರೆ.

Vijaya Karnataka 1 Apr 2020, 8:05 pm
ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವಾರು ರೈತರು ಹೆಕ್ಟೇರ್‌ಪ್ರದೇಶದಲ್ಲಿ ಬಾಳೆ ಬೆಳೆ ಈಗ ವ್ಯರ್ಥವಾಗುತ್ತಿದೆ. ಇದರಿಂದ ರೈತರು ಅಪಾರ ನಷ್ಟದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆದ ಬಾಳೆ ಕಾಯಿಗಳನ್ನು ಕಟಾವು ಮಾಡಿದ ರೈತರು ಅದನ್ನು ಎಲ್ಲಿಗೆ ಒಯ್ದು ಮಾರಾಟ ಮಾಡಬೇಕು ಎನ್ನುವ ಬಹುದೊಡ್ಡ ಸಮಸ್ಯೆ ಕಾಡುತ್ತಿದೆ.
Vijaya Karnataka Web ಬಾಳೆ ಬೆಳೆ
ಬಾಳೆ ಬೆಳೆ


ಮಾರುಕಟ್ಟೆ ಬಂದ್‌ ಆಗಿದೆ, ವ್ಯಾಪಾರಸ್ಥರು ಖರೀದಿ ಮಾಡುತ್ತಿಲ್ಲ. ಮುಂದೇನು ಮಾಡುವುದು ಎಂಬುದು ರೈತರ ಚಿಂತೆಯ ಸಂಗತಿಯಾಗಿದೆ.

ಹಣ್ಣಾದರೆ ವ್ಯರ್ಥ

ರೈತರು ಒಮ್ಮೆ ಬಾಳೆಕಾಯಿ ಕಟಾವು ಮಾಡಿದರೆ ನಿರ್ದಿಷ್ಟ ಅವಧಿಯಲ್ಲಿಅದರ ಮಾರಾಟ ಮಾಡಲೇ ಬೇಕಾಗುತ್ತದೆ. ಇಲ್ಲವಾದರೆ ಅದೆಲ್ಲವೂ ಹಣ್ಣಾಗಿ ಕೊಳ್ಳುವವರೇ ಇಲ್ಲದಂತಾಗುತ್ತದೆ. ಈಗ ಅಂಥ ಸಂಕಟದ ಪರಿಸ್ಥಿತಿಯನ್ನು ರೈತರು ಎದುರಿಸುತ್ತಿದ್ದಾರೆ. ಸಾವಿರಾರು ಹೆಕ್ಟರ್‌ಪ್ರದೇಶದಲ್ಲಿಬಾಳೆಕಾಯಿ ಕಟಾವು ಆಗುತ್ತಿದೆ ಆದರೆ ಅದನ್ನು ಖರೀದಿ ಮಾಡುವುದಕ್ಕೆ ವ್ಯಾಪಾರಸ್ಥರು ಮುಂದೆ ಬರುತ್ತಿಲ್ಲ.

ಇದರಿಂದ ಬಾಳೆ ಬೆಳೆದ ರೈತರ ಬೆವರಿನ ಪರಿಶ್ರಮಕ್ಕೆ ಬೆಲೆ ಇಲ್ಲದಂತಾಗಿದೆ. ಸರಕಾರ ಜಿಲ್ಲಾಡಳಿತ ಈ ಬಗ್ಗೆ ಕೂಡಲೇ ಗಮನ ಹರಿಸಬೇಕು ತಮ್ಮ ನೆರವಿಗೆ ಬರಬೇಕು ಎಂಬುದಾಗಿ ಬಾಳೆ ಬೆಳೆ ರೈತರು ಆಗ್ರಹಿಸಿ ಮೊರೆಯಿಡುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಣ್ಣು ಗೂಡು ತಾಲೂಕಿನಲ್ಲಿಒಂದು ಸಾವಿರಕ್ಕೂ ಹೆಚ್ಚು ಪ್ರದೇಶ ಮತ್ತು ಶಿರಸಿ ದಾಸನಕೊಪ್ಪ ಭಾಗದಲ್ಲಿ ಆರೇಳು ಸಾವಿರ ಹೆಕ್ಟೇರ್‌ಪ್ರದೇಶದಲ್ಲಿ ಬಾಳೆ ಬೆಳೆಯನ್ನು ರೈತರು ಬೆಳೆಯುತ್ತಿದ್ದಾರೆ. ಒಟ್ಟು ಎರಡೂವರೆ ಸಾವಿರ ಹೆಕ್ಟೇರ್‌ಪ್ರದೇಶದ ಬೆಳೆ ರೈತರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಭಾಗದಿಂದ ಗೋವಾ ರಾಜ್ಯ ಹಾಗೂ ನಾನಾ ಜಿಲ್ಲೆಗಳಿಗೆ ಸಾಗಾಟ ಮಾಡುತ್ತಿದ್ದ ಬಾಳೆಕಾಯಿ ವ್ಯಾಪಾರಸ್ಥರು ಈಗ ಈ ಭಾಗದಲ್ಲಿ ಎಲ್ಲೂ ಖರೀದಿಯನ್ನೇ ಮಾಡುತ್ತಿಲ್ಲ.

ಸರಕಾರ ಮುಂದೆ ಬರಲಿ

ಈಗ ರೈತರು ಬಾಳೆ ಕಾಯಿ ವ್ಯಾಪಾರಕ್ಕೆ ಸಾಗಾಟ ಮಾಡುವುದಕ್ಕೆ ಅನುಮತಿ ಪತ್ರ ನೀಡುತ್ತೇವೆ ಎಂದು ಅಧಿಕಾರಿಗಳು ಹೇಈಗ ರೈತರು ಬಾಳೆ ಕಾಯಿ ವ್ಯಾಪಾರಕ್ಕೆ ಸಾಗಾಟ ಮಾಡುವುದಕ್ಕೆ ಅನುಮತಿ ಪತ್ರ ನೀಡುತ್ತೇವೆ.. ಅಲ್ಲದೇ ಎಪಿಎಂಸಿಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಸರಕಾರದ ಅಧೀನ ಸಂಸ್ಥೆ ಹಾಪ್‌ಕಾಮ್ಸ್‌ ಮೂಲಕ ಕೂಡಲೇ ಖರೀದಿ ಪ್ರಕ್ರಿಯೆ ಎಂಬುದು ರೈತರ ಆಗ್ರಹವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ