ಆ್ಯಪ್ನಗರ

ಬನವಾಸಿ ಸೇರ್ಪಡೆ ವಿರೋಧಿಸಿ ಬಂದ್‌

ಶಿರಸಿ : ಕನ್ನಡದ ಪ್ರಥಮ ರಾಜಧಾನಿ ಬನವಾಸಿಯನ್ನು ಆನವಟ್ಟಿಗೆ ಸೇರಿಸುವ ಪ್ರಸ್ತಾಪ ಕೈಬಿಡಬೇಕು. ಐತಿಹಾಸಿಕ ಮಹತ್ವವುಳ್ಳ ಬನವಾಸಿ ತಾಲೂಕು ರಚಿಸಬೇಕು, ಶಿರಸಿ ಪ್ರತ್ಯೇಕ ಜಿಲ್ಲೆಯಾಗಿಸಬೇಕು ಎಂದು ಆಗ್ರಹಿಸಿ ಗುರುವಾರ ಬನವಾಸಿ ತಾಲೂಕು ಹೋರಾಟ ಸಮಿತಿಯಿಂದ ಬನವಾಸಿ ಬಂದ್‌ ಮಾಡಿ ಪ್ರತಿಭಟನೆ ನಡೆಸಲಾಯಿತು. ಶ್ರೀ ಮಧುಕೇಶ್ವರ ದೇವಸ್ಥಾನದಲ್ಲಿಪೂಜೆ ಸಲ್ಲಿಸಿ ನಂತರ ನಗರದ ಪ್ರಮುಖ ಬೀದಿಗಳಲ್ಲಿಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

Vijaya Karnataka 11 Oct 2019, 5:00 am
ಶಿರಸಿ : ಕನ್ನಡದ ಪ್ರಥಮ ರಾಜಧಾನಿ ಬನವಾಸಿಯನ್ನು ಆನವಟ್ಟಿಗೆ ಸೇರಿಸುವ ಪ್ರಸ್ತಾಪ ಕೈಬಿಡಬೇಕು. ಐತಿಹಾಸಿಕ ಮಹತ್ವವುಳ್ಳ ಬನವಾಸಿ ತಾಲೂಕು ರಚಿಸಬೇಕು, ಶಿರಸಿ ಪ್ರತ್ಯೇಕ ಜಿಲ್ಲೆಯಾಗಿಸಬೇಕು ಎಂದು ಆಗ್ರಹಿಸಿ ಗುರುವಾರ ಬನವಾಸಿ ತಾಲೂಕು ಹೋರಾಟ ಸಮಿತಿಯಿಂದ ಬನವಾಸಿ ಬಂದ್‌ ಮಾಡಿ ಪ್ರತಿಭಟನೆ ನಡೆಸಲಾಯಿತು. ಶ್ರೀ ಮಧುಕೇಶ್ವರ ದೇವಸ್ಥಾನದಲ್ಲಿಪೂಜೆ ಸಲ್ಲಿಸಿ ನಂತರ ನಗರದ ಪ್ರಮುಖ ಬೀದಿಗಳಲ್ಲಿಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ಪಂಪ ವೃತ್ತದಲ್ಲಿಸಭೆ ನಡೆಸಿದ ಪ್ರತಿಭಟನಾಕಾರರು ಬನವಾಸಿಯನ್ನು ಯಾವುದೇ ಕಾರಣಕ್ಕೂ ಬಿಡೆವು ಎಂದು ಹಕ್ಕೋತ್ತಾಯ ಮಾಡಿದರು. ಬನವಾಸಿಯ ಕದಂಬ ವೃತ್ತ, ಪ್ರಮುಖ ಬೀದಿ, ರಥ ಬೀದಿ ಸೇರಿದಂತೆ ಪಟ್ಟಣದಲ್ಲಿಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್‌ ಆಗಿದ್ದವು. ವಿವಿಧ ಹಂತದ ಜನಪ್ರತಿನಿಧಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿಮಾತನಾಡಿದ ಬನವಾಸಿ ತಾಲೂಕು ಹೋರಾಟ ಸಮಿತಿ ಗೌರವಾಧ್ಯಕ್ಷ ಸಿ.ಎಫ್‌.ನಾಯ್ಕ, ಹಿಂದೆ ಬನವಾಸಿಯನ್ನು ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆ ಮಾಡಿದರು. ಇದೀಗ ಆನವಟ್ಟಿಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ. ಇದು ಸರಕಾರದ ನಾಚಿಗೇಡಿತನ ಕ್ರಮವಾಗಿದೆ ಎಂದು ಆಕ್ಷೇಪಿಸಿದರು. ಸಮಿತಿ ಅಧ್ಯಕ್ಷ ಉದಯಕುಮಾರ ಕಾನಳ್ಳಿ ಮಾತನಾಡಿ, ಇದು ಪಕ್ಷಾತೀತ ಹೋರಾಟವಾಗಿದೆ. ಬನವಾಸಿ ಉಳಿಸಿಕೊಳ್ಳುವುದಕ್ಕೆ ಶತಸಿದ್ಧವಾಗಿದ್ದೇವೆ ಎಂದರು. ಆನವಟ್ಟಿಗೆ ಸೇರಿಸುವ ವಿಚಾರ ಕೈಬಿಟ್ಟು ಬನವಾಸಿಯನ್ನು ಶ್ರೀಕ್ಷೇತ್ರ ಪರಿಗಣನೆ ದೃಷ್ಟಿಯಿಂದ ಪ್ರತ್ಯೇಕ ತಾಲೂಕು ಕೇಂದ್ರವನ್ನಾಗಿ ಮಾಡಿ ಉತ್ತರ ಕನ್ನಡದಲ್ಲಿಯೇ ಮುಂದುವರರಿಸಬೇಕು ಎಂದು ಒತ್ತಾಯಿಸಿದರು.
Vijaya Karnataka Web banavasi opposed the addition
ಬನವಾಸಿ ಸೇರ್ಪಡೆ ವಿರೋಧಿಸಿ ಬಂದ್‌


ಜಿಪಂ ಸದಸ್ಯರಾದ ಬಸವರಾಜ ದೊಡ್ಮನಿ, ರೂಪಾ ನಾಯ್ಕ, ಶಿವಾನಂದ ದೀಕ್ಷಿತ, ಬಿ. ಶಿವಾಜಿ, ಬಸವರಾಜ ನಂದಿಕೇಶ್ವರಮಠ, ಸಿ.ಬಿ.ಗೌಡ, ಸುನೀಲ ನಾಯ್ಕ, ರಾಜಶೇಖರ ಓಡೆಯರ್‌, ಶ್ರೀಪಾದ ರಾಯಸದ, ಸಾಯಿರಾಮ ಕಾನಳ್ಳಿ, ವಿಶ್ವನಾಥ ಹಾದಿಮನೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ