ಆ್ಯಪ್ನಗರ

ಆಧ್ಯಾತ್ಮಿಕ ಶಕ್ತಿಯಿಂದ ತಡೆ

ಶಿರಸಿ: ಬ್ರಿಟೀಷರು ಭಾರತದಲ್ಲಿತಮ್ಮ ಆಳ್ವಿಕೆ ಶಾಶ್ವತವಾಗಿ ಇಟ್ಟುಕೊಳ್ಳವ ಉದ್ದೇಶದಿಂದ ಇಲ್ಲಿನ ಧರ್ಮ, ಸಂಸ್ಕೃತಿ ನಾಶ ಮಾಡಲು ಪ್ರಯತ್ನಿಸಿದರು. ಆದರೆ ಸ್ವಾಮಿ ವಿವೇಕಾನಂದರು ಈ ಪ್ರಯತ್ನವನ್ನು ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ತಡೆಗಟ್ಟಿದರು ಎಂದು ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ಮುಖ್ಯಸ್ಥ ಶ್ರೀ ಸ್ವಾಮಿ ಯುಕ್ತೇಶಾನಂದಜಿ ಹೇಳಿದರು.

Vijaya Karnataka 12 Nov 2019, 5:00 am
ಶಿರಸಿ: ಬ್ರಿಟೀಷರು ಭಾರತದಲ್ಲಿತಮ್ಮ ಆಳ್ವಿಕೆ ಶಾಶ್ವತವಾಗಿ ಇಟ್ಟುಕೊಳ್ಳವ ಉದ್ದೇಶದಿಂದ ಇಲ್ಲಿನ ಧರ್ಮ, ಸಂಸ್ಕೃತಿ ನಾಶ ಮಾಡಲು ಪ್ರಯತ್ನಿಸಿದರು. ಆದರೆ ಸ್ವಾಮಿ ವಿವೇಕಾನಂದರು ಈ ಪ್ರಯತ್ನವನ್ನು ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ತಡೆಗಟ್ಟಿದರು ಎಂದು ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ಮುಖ್ಯಸ್ಥ ಶ್ರೀ ಸ್ವಾಮಿ ಯುಕ್ತೇಶಾನಂದಜಿ ಹೇಳಿದರು.
Vijaya Karnataka Web barrier from spiritual power
ಆಧ್ಯಾತ್ಮಿಕ ಶಕ್ತಿಯಿಂದ ತಡೆ


ತಾಲೂಕಿನ ದೊಡ್ಡಬೈಲ್‌ನ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ವಿವೇಕಾನಂದರು ಸ್ಥಾಪಿಸಿದ ಶ್ರೀ ರಾಮಕೃಷ್ಣ ಮಠ ದೇಶದಲ್ಲಿ160 ಕಡೆಗಳಲ್ಲಿಹಾಗೂ ವಿದೇಶಗಳಲ್ಲಿ50 ಕಡೆಗಳಲ್ಲಿ ಧರ್ಮ ಪ್ರಚಾರ ಕಾರ್ಯ ನಡೆಸುತ್ತಿದೆ. ಈ ಸತ್ಸಂಗದ ಉದ್ದೇಶ ನಮ್ಮ ಧರ್ಮ ಸಂಸ್ಕೃತಿ ನೀಡಿರುವ ಆಂತರಿಕ ನೆಮ್ಮದಿಯೇ ಹೊರತು ಬಾಹ್ಯ ಭೋಗ ಸಾಮಗ್ರಿಗಳಿಂದ ತುಂಬಿದ ವೈಭೋಗವಲ್ಲಎಂಬುದನ್ನು ತಿಳಿಸುವುದಾಗಿದೆ ಎಂದರು.

ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಸ್ವಾಮಿ ಸರ್ವಜಯಾನಂದಜಿ ಮಾತನಾಡಿ, ದೈಹಿಕ ಮಾನಸಿಕ

ಸ್ಥಿತಿಗತಿಗಳನ್ನು ಆಧರಿಸಿ ಉದ್ಯೋಗದಲ್ಲಿವ್ಯತ್ಯಾಸವೇ ಹೊರತು ಇದರಲ್ಲಿಉಚ್ಚ, ನೀಚ ಎನ್ನುವ ಭಾವನೆ ಸರಿಯಲ್ಲ. ಹಿರಿಯರು ಪಾಲಿಸಿಕೊಂಡು ಬಂದಿರುವ ಈ ಪರಂಪರೆಯನ್ನು ಉಳಿಸಿಕೊಂಡು ಹೋಗಿ ಎಂದರು.

ಗೋಪಾಲ ಹೆಗಡೆ ಹುಳಗೋಳ ಸ್ವಾಗತಿಸಿದರು. ಮಾಹಾಬಲೇಶ್ವರ ಮರಾಠೆ ದೊಡ್ಡಬೈಲ ಪ್ರಾಸ್ತಾವಿಕ ಮಾತನಾಡಿದರು. ನಾಗರಿಕರು ಸಾಮೂಹಿಕ ಭಜನೆ ಹಾಗೂ ಶ್ರೀ ಭಗವದ್ಗೀತಾ ಪಠಣ ನಡೆಸಿದರು. ರಾಮಕೃಷ್ಣ ಆಶ್ರಮದಿಂದ

ರಾಮಕೃಷ್ಣರು, ಮಾತೆ ಶಾರದಾದೇವಿ ಹಾಗೂ ಸ್ವಾಮಿ ವಿವೇಕಾನಂದರ ಭಾವಚಿತ್ರ ವಿತರಿಸಲಾಯಿತು. ಕೆ.ಎಂ. ಹೆಗಡೆ ಭೈರುಂಭೆ, ನಾರಾಯಣ ಹೆಗಡೆ ಗಡಿಕೈ ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ