ಆ್ಯಪ್ನಗರ

ಸೃಜನಶೀಲರಾಗಿ ಪ್ರಗತಿ ಸಾಧಿಸಿ

ಅಂಕೋಲಾ : ತಾಲೂಕಿನ ಶೆಟಗೇರಿಯ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ 59ನೇ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು.

Vijaya Karnataka 23 Jan 2020, 5:00 am
ಅಂಕೋಲಾ : ತಾಲೂಕಿನ ಶೆಟಗೇರಿಯ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ 59ನೇ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು.
Vijaya Karnataka Web be creative and make progress
ಸೃಜನಶೀಲರಾಗಿ ಪ್ರಗತಿ ಸಾಧಿಸಿ


ದಾಂಡೇಲಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಜೀವನಾ ನಾಯಕ ಅಧ್ಯಕ್ಷತೆವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸೃಜನಶೀಲರಾಗಿ ಪ್ರಗತಿ ಸಾಧಿಸಬೇಕು ಎಂದರು.

ನಿವೃತ್ತ ಪ್ರಾಚಾರ್ಯ ಪ್ರೊ. ಮೋಹನ ಹಬ್ಬು ಮಾತನಾಡಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಮಾನಂದ ಬಿ. ನಾಯಕ, ಗೌರವಾಧ್ಯಕ್ಷ ಶಾಂತಾರಾಮ ಎನ್‌. ನಾಯಕ ಹಿಚ್ಕಡ, ಕಾರ್ಯದರ್ಶಿ ಜಯರಾಮ ಆರ್‌. ನಾಯಕ, ಮುಖ್ಯಾಧ್ಯಾಪಕ ಎನ್‌.ವಿ. ರಾಠೋಡ ವೇದಿಕೆಯಲ್ಲಿಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ರಚಿತವಾದ ಕಲಾಜ್ಯೋತಿ, ಮತ್ತು ಜಾಗೃತಿ ಹಸ್ತಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಮುಖ್ಯಾಧ್ಯಾಪಕ ಎನ್‌.ವಿ.ರಾಠೋಡ ಸ್ವಾಗತಿಸಿದರು. ಬಹುಮಾನ ದಾನಿಗಳ ಯಾದಿಯನ್ನು ಸಹ ಶಿಕ್ಷಕಿ ಶಾಂತಲಾ ನಾಯಕ ವಾಚಿಸಿದರು. ಬಹುಮಾನಿತರ ಯಾದಿಯನ್ನು ಪದ್ಮಶ್ರೀ ಹರಿಕಂತ್ರ, ದೀಕ್ಷಾ ನಾಯ್ಕ ಹಾಗೂ ಸಾಕ್ಷಿ ನಾಯಕ, ಮತ್ತಣ್ಣ ಹಂಡಿ, ಅಭಿಷೇಕ ನಾಯಕ ಹಾಗೂ ದಿಲೀಪ ಗೌಡ ಓದಿದರು.

ಶಿಕ್ಷಕ ರಾಜು ಜಿ. ಶೇಡಗೇರಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಅನುಪಮಾ ಎಸ್‌. ನಾಯಕ ವಂದಿಸಿದರು. ಸಭಾ ಕಾರ್ಯಕ್ರಮ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶಾಲಾ ಯಕ್ಷಗಾನ ಕೇಂದ್ರದ ವತಿಯಿಂದ 41ನೇ 'ಧರ್ಮಾಂಗದ ದಿಗ್ವಿಜಯ' ಯಕ್ಷಗಾನ ಪ್ರದರ್ಶನಗೊಂಡಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ