ಹೊನ್ನಾವರ : ಬಾಹ್ಯದಲ್ಲಿ ಉತ್ತಮ ನಾಗರಿಕರಾಗಿ ಜೀವಿಸಿದರೆ ಸಾಲದು, ಅಂತರಂಗದಲ್ಲಿ ಅಷ್ಟೇ ಸ್ವಚ್ಛವಾಗಿರಬೇಕು ಎಂದು ಕಾರವಾರ ಧರ್ಮಪ್ರಾಂತ್ಯದ ಸಂಪರ್ಕ ಮಾಧ್ಯಮದ ನಿರ್ದೇಶಕ ವಂ. ಸ್ವಾಮಿ ಸಾಲ್ವಾದೋರ್ ರೊಡ್ರಿಗಿಸ್ ಹೇಳಿದರು.
ತಾಲೂಕಿನ, ಹಡಿನಬಾಳ ಸಂತ ಫ್ರಾನ್ಸಿಸ್ ಆಸ್ಸಿಸಿ ಚರ್ಚಿನಲ್ಲಿ ನಡೆದ ಧ್ಯಾನಕೂಟದಲ್ಲಿ ಆಶೀರ್ವಚನ ನೀಡಿದ ಅವರು ಕ್ಯಾಥೋಲಿಕ್ ಪವಿತ್ರ ಸಭೆ ಕ್ರೈಸ್ತರಿಗೆ 40 ದಿನಗಳು ಧ್ಯಾನ, ಉಪವಾಸ ಹಾಗೂ ದಾನಧರ್ಮಕ್ಕೆ ಹೆಚ್ಚು ಒತ್ತು ನೀಡಿ ಕ್ರೈಸ್ತರ ಜೀವನವು ನವೀಕರಣವಾಗಲು ಪ್ರೇರಣೆ ನೀಡುತ್ತದೆ. ಈ ದಿಸೆಯಲ್ಲಿ ಧ್ಯಾನಕೂಟ ಮಹತ್ವದ್ದಾಗಿದೆ ಎಂದರು.
ದೇವರು ಕೊಟ್ಟಿರುವ ನಮ್ಮೊಳಗಿನ ಪ್ರತಿಭೆಗೆ ನಾವು ಋುಣಿಯಾಗಿರಬೇಕು. ಹೃದಯದಲ್ಲಿ ಶುದ್ದತೆ ಇದ್ದರೆ ಶುದ್ದ ವಸ್ತುಗಳು ಕಾಣುತ್ತದೆ. ಅಶುದ್ದ ಹೃದಯಕ್ಕೆ ಎಲ್ಲವೂ ಅಶುದ್ದವಾಗಿಯೇ ಕಾಣುತ್ತದೆ ನಮ್ಮಲ್ಲಿರುವ ಸ್ವಾರ್ಥ, ಅಸೂಯೆ, ಅಹಂಕಾರ, ಮದ, ದರ್ಪ ಇವನ್ನೆಲ್ಲ ಬಿಟ್ಟು ಸರಳ ಸಜ್ಜನಿಕೆಯ ಜೀವನ ಶೈಲಿ ಅನುಸರಿಸಬೇಕು ಎಂದರು.
ಇಂದಿನ ಅಂತರ್ಜಾಲ ಯುಗದಲ್ಲಿ ಪಾಲಕರು, ಯುವಕರು ಹಾಗೂ ಮಕ್ಕಳು ಸೋಸಿಯಲ್ ಮೀಡಿಯಾದಲ್ಲಿ ಕಾಲ ಕಳೆಯುತ್ತಿದ್ದಾರೆ. ಮೊಬೈಲ್ ಪರಿಣಾಮ ಎಲ್ಲ ಸಂಬಂಧಗಳು ಕಳಚಿ ಹೋಗಿವೆ. ಮಕ್ಕಳ ಜತೆ ಪಾಲಕರ ಸಂಪರ್ಕವಿಲ್ಲ. ಗಂಡ ಹೆಂಡತಿಯ ಜತೆ ಮಾತನಾಡಲು ಸಮಯವಿಲ್ಲ. ಸಂಬಂಧಿಕರ ಬಾಂಧವ್ಯ ಕಡಿಮೆಯಾಗಿದೆ ಎಂದರು.
ಸಂತ ಫ್ರಾನ್ಸಿಸ್ ಆಸ್ಸಿಸಿ ದೇವಾಲಯದ ಧರ್ಮಗುರು ವಂ.ಸ್ವಾಮಿ ಎ್ಯಂಟನಿ ರೊಡ್ರಿಗಿಸ್ ಮಾರ್ಗದರ್ಶನದಲ್ಲಿ ಧ್ಯಾನಕೂಟ ಶಿಬಿರ ನಡೆಯಿತು. ಚರ್ಚ್ ಪಾಲನ ಸಮಿತಿಯ ಕಾರ್ಯದರ್ಶಿ ಸುರೇಶ ಮಿನಿನ ಲೋಪಿಸ್ ಹಾಗೂ ಸದಸ್ಯರು ಪಾಲ್ಗೊಂಡಿದ್ದರು. ಫಾ. ಎ್ಯಂಟನಿ ರೊಡ್ರಿಗಿಸ್ ವಂದಿಸಿದರು.
ತಾಲೂಕಿನ, ಹಡಿನಬಾಳ ಸಂತ ಫ್ರಾನ್ಸಿಸ್ ಆಸ್ಸಿಸಿ ಚರ್ಚಿನಲ್ಲಿ ನಡೆದ ಧ್ಯಾನಕೂಟದಲ್ಲಿ ಆಶೀರ್ವಚನ ನೀಡಿದ ಅವರು ಕ್ಯಾಥೋಲಿಕ್ ಪವಿತ್ರ ಸಭೆ ಕ್ರೈಸ್ತರಿಗೆ 40 ದಿನಗಳು ಧ್ಯಾನ, ಉಪವಾಸ ಹಾಗೂ ದಾನಧರ್ಮಕ್ಕೆ ಹೆಚ್ಚು ಒತ್ತು ನೀಡಿ ಕ್ರೈಸ್ತರ ಜೀವನವು ನವೀಕರಣವಾಗಲು ಪ್ರೇರಣೆ ನೀಡುತ್ತದೆ. ಈ ದಿಸೆಯಲ್ಲಿ ಧ್ಯಾನಕೂಟ ಮಹತ್ವದ್ದಾಗಿದೆ ಎಂದರು.
ದೇವರು ಕೊಟ್ಟಿರುವ ನಮ್ಮೊಳಗಿನ ಪ್ರತಿಭೆಗೆ ನಾವು ಋುಣಿಯಾಗಿರಬೇಕು. ಹೃದಯದಲ್ಲಿ ಶುದ್ದತೆ ಇದ್ದರೆ ಶುದ್ದ ವಸ್ತುಗಳು ಕಾಣುತ್ತದೆ. ಅಶುದ್ದ ಹೃದಯಕ್ಕೆ ಎಲ್ಲವೂ ಅಶುದ್ದವಾಗಿಯೇ ಕಾಣುತ್ತದೆ ನಮ್ಮಲ್ಲಿರುವ ಸ್ವಾರ್ಥ, ಅಸೂಯೆ, ಅಹಂಕಾರ, ಮದ, ದರ್ಪ ಇವನ್ನೆಲ್ಲ ಬಿಟ್ಟು ಸರಳ ಸಜ್ಜನಿಕೆಯ ಜೀವನ ಶೈಲಿ ಅನುಸರಿಸಬೇಕು ಎಂದರು.
ಇಂದಿನ ಅಂತರ್ಜಾಲ ಯುಗದಲ್ಲಿ ಪಾಲಕರು, ಯುವಕರು ಹಾಗೂ ಮಕ್ಕಳು ಸೋಸಿಯಲ್ ಮೀಡಿಯಾದಲ್ಲಿ ಕಾಲ ಕಳೆಯುತ್ತಿದ್ದಾರೆ. ಮೊಬೈಲ್ ಪರಿಣಾಮ ಎಲ್ಲ ಸಂಬಂಧಗಳು ಕಳಚಿ ಹೋಗಿವೆ. ಮಕ್ಕಳ ಜತೆ ಪಾಲಕರ ಸಂಪರ್ಕವಿಲ್ಲ. ಗಂಡ ಹೆಂಡತಿಯ ಜತೆ ಮಾತನಾಡಲು ಸಮಯವಿಲ್ಲ. ಸಂಬಂಧಿಕರ ಬಾಂಧವ್ಯ ಕಡಿಮೆಯಾಗಿದೆ ಎಂದರು.
ಸಂತ ಫ್ರಾನ್ಸಿಸ್ ಆಸ್ಸಿಸಿ ದೇವಾಲಯದ ಧರ್ಮಗುರು ವಂ.ಸ್ವಾಮಿ ಎ್ಯಂಟನಿ ರೊಡ್ರಿಗಿಸ್ ಮಾರ್ಗದರ್ಶನದಲ್ಲಿ ಧ್ಯಾನಕೂಟ ಶಿಬಿರ ನಡೆಯಿತು. ಚರ್ಚ್ ಪಾಲನ ಸಮಿತಿಯ ಕಾರ್ಯದರ್ಶಿ ಸುರೇಶ ಮಿನಿನ ಲೋಪಿಸ್ ಹಾಗೂ ಸದಸ್ಯರು ಪಾಲ್ಗೊಂಡಿದ್ದರು. ಫಾ. ಎ್ಯಂಟನಿ ರೊಡ್ರಿಗಿಸ್ ವಂದಿಸಿದರು.