ಆ್ಯಪ್ನಗರ

ಸಂಯಮದಿಂದ ವರ್ತಿಸಿ ಅರಿವು ಮೂಡಿಸಿ

ಕಾರವಾರ : ಜನರ ಆರೋಗ್ಯದ ಹಿತದೃಷ್ಟಿಯಿಂದ 21 ದಿನಗಳ ವರೆಗೆ ಜನರು ಮನೆಯಲ್ಲಿಯೇ ಇರುವಂತೆ ಸರಕಾರ ಈ ಕ್ರಮ ಕೈಗೊಂಡಿದ್ದು, ಜನರು ಸ್ವಯಂಪ್ರೇರಿತರಾಗಿ ತಮ್ಮ ರಕ್ಷಣೆಯೊಂದಿಗೆ ಇನ್ನೊಬ್ಬರ ಆರೋಗ್ಯದ ರಕ್ಷಣೆಗಾಗಿ ಅನವಶ್ಯಕವಾಗಿ ವಾಹನಗಳನ್ನ ತೆಗೆದುಕೊಂಡು ತಿರುಗಾಡದೆ ಮನೆಯಲ್ಲೇ ಇರಬೇಕು ಎಂದು ಜಿಲ್ಲಾಧಿಕರಿ ಡಾ.ಕೆ ಹರೀಶಕುಮಾರ ಅವರು ಎಚ್ಚರಿಕೆ ನೀಡಿದರು.

Vijaya Karnataka 28 Mar 2020, 5:00 am
ಕಾರವಾರ : ಜನರ ಆರೋಗ್ಯದ ಹಿತದೃಷ್ಟಿಯಿಂದ 21 ದಿನಗಳ ವರೆಗೆ ಜನರು ಮನೆಯಲ್ಲಿಯೇ ಇರುವಂತೆ ಸರಕಾರ ಈ ಕ್ರಮ ಕೈಗೊಂಡಿದ್ದು, ಜನರು ಸ್ವಯಂಪ್ರೇರಿತರಾಗಿ ತಮ್ಮ ರಕ್ಷಣೆಯೊಂದಿಗೆ ಇನ್ನೊಬ್ಬರ ಆರೋಗ್ಯದ ರಕ್ಷಣೆಗಾಗಿ ಅನವಶ್ಯಕವಾಗಿ ವಾಹನಗಳನ್ನ ತೆಗೆದುಕೊಂಡು ತಿರುಗಾಡದೆ ಮನೆಯಲ್ಲೇ ಇರಬೇಕು ಎಂದು ಜಿಲ್ಲಾಧಿಕರಿ ಡಾ.ಕೆ ಹರೀಶಕುಮಾರ ಅವರು ಎಚ್ಚರಿಕೆ ನೀಡಿದರು.
Vijaya Karnataka Web be restrained and aware
ಸಂಯಮದಿಂದ ವರ್ತಿಸಿ ಅರಿವು ಮೂಡಿಸಿ


ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬುಧವಾರ ಹಮ್ಮಿಕೊಂಡಿದ್ದ ವಾರ್ತಾ ಸ್ಪಂದನ-ನೇರ ಪೋನ್‌ಇನ್‌ ಕಾರ್ಯಕ್ರಮದಲ್ಲಿಪೋನ್‌ ಕರೆಗಳಿಗೆ ಅವರು ಉತ್ತರಿಸಿದರು.

ಮನೆ ಮನೆಗೆ ಪೂರೈಕೆ : ಆರೋಗ್ಯವಂತ ವ್ಯಕ್ತಿ ಮತ್ತು ಮನೆಯಲ್ಲಿಇರುವವರಿಗೆ ಯಾವುದೇ ಮಾಸ್ಕ್‌ಗಳ ಅವಶ್ಯಕತೆ ಇರುವುದಿಲ್ಲಾಶುಚಿತ್ವಕ್ಕೆ ಒತ್ತು ನೀಡಿದರೆ ಸಾಕು, ಅಕ್ಕ ಪಕ್ಕದ ಮನೆಗಳಿಗೆ ಹೊರಗಡೆಯಿಂದ ಬಂದವರನ್ನು ಅಸ್ಪೃಶ್ಯರಂತೆ ಕಾಣದೆ 14 ದಿನವರೆಗೆ ನಿಗಾದಲ್ಲಿಇರುವಂತೆ ತಿಳುವಳಿಕೆ ನೀಡಿರಿ.ಜಿಲ್ಲೆಯಲ್ಲಿಜೀವನಾವಶ್ಯಕ ಸಾಮಗ್ರಿಗಳ ಸಂಗ್ರಹವಿದ್ದು, ಅಗತ್ಯ ಬಿದ್ದಲ್ಲಿಮನೆ ಮನೆಗೆ ಪೂರೈಸುವ ವ್ಯವಸ್ಥೆಯನ್ನು ಕೂಡಾ ಜಿಲ್ಲಾಡಳಿತ ಮಾಡುತ್ತಿದ್ದು ಜನರು ಯಾವುದೇ ಕಾರಣಕ್ಕೂ ಭಯಬೀತರಾಗಭಾರದು ಎಂದು ಹೇಳಿದರು.

ಸಿದ್ದಾಪುರ ತಾಲೂಕಿನ ಕುರವಂತೆ, ಹೊಸಮಂಜು, ಬಿಳಗಿ ಗ್ರಾಮಗಲ್ಲಿಲಾಕ್‌ಡೌನ್‌ ಆಗುತ್ತಿಲ್ಲವೆಂಬ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ರೋಶನ್‌ ಅವರು ಗ್ರಾಮೀಣ ಪ್ರದೇಶಗಳಿಗೂ ಕೂಡಾ ಲಾಕ್‌ಡೌನ್‌ ಅನ್ವಯಿಸುತ್ತಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ