ಆ್ಯಪ್ನಗರ

ಉನ್ನತ ಪದವಿಯತ್ತ ವಿದ್ಯಾರ್ಥಿಗಳ ಲಕ್ಷತ್ರ್ಯವಿರಲಿ

ಶಿರಸಿ : ನಗರದ ಪ್ರಥಮ ದರ್ಜೆ ಪದವಿ ಕಾಲೇಜಿನ ಹೆಚ್ಚುವರಿ ಕಟ್ಟಡಕ್ಕೆ ಬುಧವಾರ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಗುದ್ದಲಿ ಪೂಜೆ ನೆರವೇರಿಸಿದರು.

Vijaya Karnataka 9 Sep 2019, 5:00 am
ಶಿರಸಿ : ನಗರದ ಪ್ರಥಮ ದರ್ಜೆ ಪದವಿ ಕಾಲೇಜಿನ ಹೆಚ್ಚುವರಿ ಕಟ್ಟಡಕ್ಕೆ ಬುಧವಾರ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಗುದ್ದಲಿ ಪೂಜೆ ನೆರವೇರಿಸಿದರು.
Vijaya Karnataka Web be the goal of the students towards a higher degree
ಉನ್ನತ ಪದವಿಯತ್ತ ವಿದ್ಯಾರ್ಥಿಗಳ ಲಕ್ಷತ್ರ್ಯವಿರಲಿ


ಈಗ ಪದವಿ ಶಿಕ್ಷಣ ಪಡೆದುಕೊಳ್ಳುವುದು ವಿದ್ಯಾರ್ಥಿಗಳಿಗೆ ಕಷ್ಟಕರವಲ್ಲ. ವಿದ್ಯಾರ್ಥಿಗಳ ಗುರಿ ಪದವಿ ಶಿಕ್ಷಣಕ್ಕೆ ಸೀಮಿತವಾಗಬಾರದು. ಉನ್ನತ ಪದವಿಯೆಡೆ ಲಕ್ಷ್ಯ ವಹಿಸುವಂತಾಗಬೇಕು ಎಂದರು.

ಈ ಪ್ರಥಮ ದರ್ಜೆ ಪದವಿ ಕಾಲೇಜ್‌ಗೆ ಸೂಕ್ತ ಕಟ್ಟಡ ಇರಲಿಲ್ಲ. ಈಗ 7.06 ಕೋಟಿ ರೂ. ಹಣ ಮಂಜೂರಾಗಿದೆ. ಕಾಲೇಜ್‌ ಸ್ಥಾಪನೆಯ ವೇಳೆ 5 ಎಕರೆ ಜಾಗ ಮಂಜೂರಿಗೆ ಯತ್ನಿಸಿದ್ದು, ಅಂದು 2 ಎಕರೆ ಮಾತ್ರ ಮಂಜೂರಾಗಿತ್ತು. ಇದರಿಂದಾಗಿ ಕ್ರೀಡಾಂಗಣ ಹಾಗೂ ಇನ್ನಿತರ ಅಗತ್ಯ ಸೌಲಭ್ಯಗಳಿಗಾಗಿ ಕಟ್ಟಡ ನಿರ್ಮಾಣ ಸಾಧ್ಯವಾಗಿಲ್ಲ. ಇನ್ನೂ ಅಗತ್ಯತೆ ಉಳ್ಳ 3 ಎಕರೆ ಜಾಗವನ್ನು ಶೀಘ್ರದಲ್ಲಿಯೇ ಮಂಜೂರು ಮಾಡಿಸಲಿದ್ದೇನೆ ಎಂದರು.

ವಿದ್ಯಾರ್ಥಿಗಳು ಇರುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಯುವಕರಿಗೆ ಕೌಶಲಪೂರ್ಣ ಶಿಕ್ಷಣ ನೀಡುತ್ತಿದ್ದರೂ, ಈ ಕ್ಷೇತ್ರದ ಆಸಕ್ತಿ ಅವರಿಗೆ ಕಡಿಮೆ ಆಗುತ್ತಿದೆ ಎಂದು ಹೇಳಿದರು.

ಜಿ.ಪಂ. ಸದಸ್ಯೆ ಉಷಾ ಹೆಗಡೆ, ತಾ.ಪಂ. ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಸದಸ್ಯ ನಾಗರಾಜ ಶೆಟ್ಟಿ, ನಗರಸಭೆ ಸದಸ್ಯರಾದ ಗಣಪತಿ ನಾಯ್ಕ, ರಮಾನಂದ ಭಟ್ಟ, ಪ್ರಾಚಾರ್ಯ ಜನಾರ್ಧನ ಭಟ್ಟ ಮತ್ತಿತರರು ಪಾಲ್ಗೊಂಡಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ