ಆ್ಯಪ್ನಗರ

ಶಬ್ದ, ನೀರು ಮಾಲಿನ್ಯವಾಗದಂತೆ ಎಚ್ಚರ ವಹಿಸಿ

ಹಳಿಯಾಳ : ಇಐಡಿ ಸಕ್ಕರೆ ಕಾರ್ಖಾನೆ ಘಟಕದಲ್ಲಿಬುಧವಾರ ಪರಿಸರ ಸಾರ್ವಜನಿಕ ಸಭೆ ನಡೆಯಿತು. ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್‌ ಅವರ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು ವಲಯದ ಹಿರಿಯ ಪರಿಸರ ಅಧಿಕಾರಿ ರಮೇಶ ನಾಯ್ಕ ಅವರ ನೇತೃತ್ವ ವಹಿಸಿದ್ದರು.

Vijaya Karnataka 19 Dec 2019, 5:00 am
ಹಳಿಯಾಳ : ಇಐಡಿ ಸಕ್ಕರೆ ಕಾರ್ಖಾನೆ ಘಟಕದಲ್ಲಿಬುಧವಾರ ಪರಿಸರ ಸಾರ್ವಜನಿಕ ಸಭೆ ನಡೆಯಿತು. ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್‌ ಅವರ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು ವಲಯದ ಹಿರಿಯ ಪರಿಸರ ಅಧಿಕಾರಿ ರಮೇಶ ನಾಯ್ಕ ಅವರ ನೇತೃತ್ವ ವಹಿಸಿದ್ದರು.
Vijaya Karnataka Web beware of noise and water contamination
ಶಬ್ದ, ನೀರು ಮಾಲಿನ್ಯವಾಗದಂತೆ ಎಚ್ಚರ ವಹಿಸಿ


ದಶಕದಿಂದ ಕಾರ್ಯ ನಿರ್ವಹಿಸುತ್ತಿರುವ ಕಾರ್ಖಾನೆ 90 ಕೆಎಲ್‌ಪಿಡಿ ಡಿಸ್ಟಿಲರಿಯೊಂದಿಗೆ ಕಬ್ಬು ಅರೆಯುವ ಸಾಮರ್ಥ್ಯವನ್ನು ಪ್ರತಿದಿನ 6 ಸಾವಿರ ಟನ್‌ದಿಂದ 11,500 ಟಿಸಿಡಿಗೆ ಹೆಚ್ಚಿಸಲು ಹಾಗೂ ವಿದ್ಯುತ್‌ ಉತ್ಪಾದನೆಯನ್ನು 37 ಮೆಗಾವ್ಯಾಟ್‌ನಿಂದ 57 ಮೆಗಾವ್ಯಾಟ್‌ಗೆ ಹೆಚ್ಚಿಸುವ ಹಿನ್ನೆಲೆಯಲ್ಲಿಈ ಸಭೆ ಹಮ್ಮಿಕೊಳ್ಳಲಾಗಿತ್ತು.

ರೈತ ಮುಖಂಡರು ಮಾತನಾಡಿ, ತಮ್ಮ ಅಹವಾಲು ಮತ್ತು ಆಕ್ಷೇಪಗಳನ್ನು ದಾಖಲಿಸಿದರು. ಈಗಾಗಲೇ ಸಕ್ಕರೆ ಕಾರ್ಖಾನೆಯು ಕಾರ್ಯಾರಂಭ ಮಾಡುವ ಮೂಲಕ ಒಂದು ದಶಕ ಕಳೆದಿದೆ.ಆದರೆ ಈ ಹಿಂದೆ ಸಕ್ಕರೆ ಕಾರ್ಖಾನೆಗೆ ಭೂಮಿಯನ್ನು ನೀಡಿ ನಿರಾ]ತರಾದ ಜನರಿಗೆ ಇನ್ನೂವರೆಗೂ ಯಾವುದೇ ರೀತಿ ಅಂದು ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಆದ್ದರಿಂದ ಮೊದಲು ಹಿಂದಿನ ಭರವಸೆಗಳನ್ನು ಈಡೇರಿಸುವಲ್ಲಿಕಾರ್ಖಾನೆಯ ಆಡಳಿತ ಮಂಡಳಿ ಮುಂದಾಗುವಂತೆ ಸೂಚಿಸಿದರು.

ಶಬ್ದ ಮಾಲಿನ್ಯ, ನೀರು ಮಾಲಿನ್ಯ ಆಗದಂತೆ ಎಚ್ಚರಿಕೆ ವಹಿಸುವುದರ ಜೊತೆಗೆ ಕಾರ್ಖಾನೆಯ ಆವರಣದಲ್ಲಿಪರಿಸರವನ್ನು ಸಂರಕ್ಷಿಸಲು ಇನ್ನಷ್ಟು ಮರಗಳನ್ನು ಬೆಳೆಸಬೇಕೆಂದು ಸಲಹೆ ನೀಡಿದರು.

ಸಕ್ಕರೆ ಕಾರ್ಖಾನೆಯು ತನ್ನ ಸಾಮರ್ಥ್ಯವನ್ನು ಹೆಚ್ಚಿಸುವುದರ ಜತೆಗೆ ಇಲ್ಲಿಯ ರೈತರ ಆರ್ಥಿಕತೆಯನ್ನು ಹೆಚ್ಚಿಸಲೂ ಮುಂದಾಗುವಂತೆ ಹೇಳಿದರು.

ಕಾರ್ಖಾನೆಯು ತನ್ನ ಸಾಮಾಜಿಕ ಕಳಕಳಿ ನಿಧಿ ಸಿಎಸ್‌ಆರ್‌ ಫಂಡ್‌ನಲ್ಲಿಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿಹೆಚ್ಚಿನ ಸಂಖ್ಯೆಯಲ್ಲಿಆರೋಗ್ಯ ತಪಾಸಣೆ ಹಾಗೂ ವೈದ್ಯಕೀಯ ವಿವಿಧ ಶಿಬಿರಗಳನ್ನು ನಡೆಸಬೇಕು. ಕಾರ್ಖಾನೆಯಿಂದ ಹೊರಡುವ ಹಾರು ಬೂದಿಯಿಂದ ಚರ್ಮರೋಗಗಳು ಹರಡುವ ಹಿನ್ನೆಲೆಯಲ್ಲಿಮುನ್ನೆಚ್ಚರಿಕೆಯ ಕ್ರಮಗಳನ್ನು ಅಳವಡಿಸಲು ತಜ್ಞರ ಸಹಕಾರ ಪಡೆಯುವಂತೆ ಹಾಗೂ ಕಾರ್ಖಾನೆಯ ಸಮೀಪದಲ್ಲಿರುವ ಶಾಲಾ ಕಾಲೇಜು ಮತ್ತು ಅಂಗನವಾಡಿಗಳನ್ನು ದತ್ತು ಪಡೆದು ಅವುಗಳ ಮೂಲಕ ಸಮಾಜ ಸೇವೆ ಮಾಡುವಂತೆ ಆಗ್ರಹಿಸಿದರು.

ವಿಪ ಸದಸ್ಯ ಎಸ್‌.ಎಲ್‌.ಘೋಟ್ನೆಕರ ಮಾತನಾಡಿ, ಮುಂದಿನ ದಿನಗಳಲ್ಲಿಕಾಳಿ ಏತನೀರಾವರಿ ಯೋಜನೆಯ ಅನುಷ್ಠಾನದ ಪರಿಣಾಮ ಕಬ್ಬು ಬೆಳೆಯುವ ಪ್ರದೇಶದಲ್ಲಿದ್ವಿಗುಣವಾಗುವುದರಲ್ಲಿಸಂಶಯವಿಲ್ಲ. ಕಾರ್ಖಾನೆಯು ಸೂಕ್ತ ಸಮಯದಲ್ಲಿತನ್ನ ಕಬ್ಬು ನುರಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದು, ಇದರಿಂದ ತಾಲೂಕು ಸೇರಿದಂತೆ ಸುತ್ತಮುತ್ತಲಿನ ತಾಲೂಕುಗಳ ಕಬ್ಬನ್ನು ಪಡೆದು ನುರಿಸಲು ಅನುಕೂಲವಾಗುತ್ತದೆ. ಪರಿಸರಕ್ಕೆ ಧಕ್ಕೆಯಾಗದ ರೀತಿ ಹಾಗೂ ಜನರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಂದೆ ಸಾಗುವಂತೆ ಒತ್ತಾಯಿಸಿದರು.

ಪರಿಸರ ಸಾರ್ವಜನಿಕ ಸಭೆಯಲ್ಲಿಹಳಿಯಾಳ, ದಾಂಡೇಲಿ, ಮುಂಡಗೋಡ, ಅಳ್ನಾವರ, ಕಲಘಟಗಿ, ಧಾರವಾಡ ಸೇರಿದಂತೆ ಇನ್ನಿತರ ಪ್ರದೇಶಗಳಿಂದ ಆಗಮಿಸಿದ್ದ ನೂರಾರು ಕಬ್ಬು ಬೆಳೆಗಾರರು ಭಾಗಹಿಸಿ ತಮ್ಮ ವಿಚಾರಗಳನ್ನು ಮಂಡಿಸಿದರು. ಯಾವುದೇ ಗೊಂದಲವಿಲ್ಲದೇ ಸಭೆಯು ಮುಕ್ತಾಯಗೊಂಡಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ