ಆ್ಯಪ್ನಗರ

ಭಕ್ತಿ ಭಾವದ ನಾಗಪಂಚಮಿ

ಕಾರವಾರ: ನಾಗ ದೇವರಿಗೆ ಪೂಜೆ, ಹಾಲು ಅರ್ಪಿಸುವ ಮೂಲಕ ತಾಲೂಕಿನಾದ್ಯಂತ ಸೋಮವಾರ ನಾಗರ ಪಂಚಮಿಯನ್ನು ಆಚರಿಸಲಾಯಿತು.

Vijaya Karnataka 6 Aug 2019, 5:00 am
ಕಾರವಾರ: ನಾಗ ದೇವರಿಗೆ ಪೂಜೆ, ಹಾಲು ಅರ್ಪಿಸುವ ಮೂಲಕ ತಾಲೂಕಿನಾದ್ಯಂತ ಸೋಮವಾರ ನಾಗರ ಪಂಚಮಿಯನ್ನು ಆಚರಿಸಲಾಯಿತು.
Vijaya Karnataka Web KWR-5SUNEEL4


ಸೋಮವಾರ ಬೆಳಗ್ಗೆ ನಗರದ ನಂದನಗದ್ದಾದ ಶ್ರೀ ನಾಗನಾಥ ದೇವಸ್ಥಾನದಲ್ಲಿ ಭಕ್ತರಿಂದ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಗಳು ನಡೆದವು. ನಾಗ ದೇವರಿಗೆ ಹಾಲೆರೆದ ಭಕ್ತರು ಧನ್ಯತಾಭಾವ ಮೆರೆದರು. ಗ್ರಾಮೀಣ ಭಾಗದಲ್ಲಿ ಪರಂಪರೆಯಂತೆ ನಾಗರ ಪಂಚಮಿ ಆಚರಿಸಲಾಯಿತು. ಅಕ್ಕಿ ಹಿಟ್ಟಿನಿಂದ ತಯಾರಿಸಿದ ನಾಗ ಮೂರ್ತಿಗೆ ಹಾಲೆರೆದು ಪೂಜೆ ಸಲ್ಲಿಸಲಾಯಿತು. ಇನ್ನೂ ಕೆಲವರು ಸಮೀಪದ ನಾಗದೇವರ ದೇವಸ್ಥಾನಕ್ಕೆ ತೆರಳಿ ಪೂಜೆ ನೆರವೇರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ