ಆ್ಯಪ್ನಗರ

ಭರತನಾಟ್ಯ ರಂಗಪ್ರವೇಶ ನಾಳೆ

ಶಿರಸಿ : ನಗರದ ವಿದ್ಯಾಧಿರಾಜ ಕಲಾ ಕ್ಷೇತ್ರದಲ್ಲಿ ಸೌಭಾಗ್ಯ ಹಂದ್ರಾಳ ಭರತನಾಟ್ಯ ರಂಗಪ್ರವೇಶ ಸಮಾರಂಭ ಡಿ.8ರ ಸಂಜೆ 5.30ಕ್ಕೆ ಏರ್ಪಾಟಾಗಿದೆ. ನಟರಾಜ ನೃತ್ಯ ಶಾಲೆಯ ಗುರು ಸೀಮಾ ಭಾಗ್ವತ ಮತ್ತು ವಿದುಷಿ ದೀಪಾ ಭಾಗ್ವತ ಅವರಲ್ಲಿ ಸೌಭಾಗ್ಯ ಹಂದ್ರಾಳ ನೃತ್ಯಾಭ್ಯಾಸ ನಿರತಳಾಗಿದ್ದಾಳೆ. ಕಾರ್ಯಕ್ರಮಕ್ಕೆ

Vijaya Karnataka 7 Dec 2018, 5:00 am
ಶಿರಸಿ : ನಗರದ ವಿದ್ಯಾಧಿರಾಜ ಕಲಾ ಕ್ಷೇತ್ರದಲ್ಲಿ ಸೌಭಾಗ್ಯ ಹಂದ್ರಾಳ ಭರತನಾಟ್ಯ ರಂಗಪ್ರವೇಶ ಸಮಾರಂಭ ಡಿ.8ರ ಸಂಜೆ 5.30ಕ್ಕೆ ಏರ್ಪಾಟಾಗಿದೆ. ನಟರಾಜ ನೃತ್ಯ ಶಾಲೆಯ ಗುರು ಸೀಮಾ ಭಾಗ್ವತ ಮತ್ತು ವಿದುಷಿ ದೀಪಾ ಭಾಗ್ವತ ಅವರಲ್ಲಿ ಸೌಭಾಗ್ಯ ಹಂದ್ರಾಳ ನೃತ್ಯಾಭ್ಯಾಸ ನಿರತಳಾಗಿದ್ದಾಳೆ. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬೆಂಗಳೂರಿನ ಸಾಯಿ ಆರ್ಟ್ಸ್‌ ಸಂಸ್ಥೆಯ ನಿರ್ದೇಶಕ ಸಾಯಿ ವೆಂಕಟೇಶ ಮತ್ತು ಬೆಂಗಳೂರಿನ ಶಾಂತಲಾ ಆರ್ಟ್ಸ ಅಕಾಡೆಮಿ ನಿರ್ದೇಶಕ ಕಲಾಯೋಗಿ ಆಚಾರ್ಯ ಪುಲಿಕೇಶಿ ಕಸ್ತೂರಿ ಪಾಲ್ಗೊಳ್ಳುವರು. ನಗರದ ಬಣ್ಣದಮಠದ ೕ ಶಿವಲಿಂಗ ಸ್ವಾಮಿಗಳು ಸಾನಿಧ್ಯ ವಹಿಸುವರು. ಪ್ರತಿಭಾನ್ವಿತೆ ಸೌಭಾಗ್ಯ ನಗರದ ಸಗಟು ವರ್ತಕ ಕುಮಾರ ಹಂದ್ರಾಳ ಮತ್ತು ಶ್ರೀದೇವಿ ಹಂದ್ರಾಳ ದಂಪತಿ ಪುತ್ರಿ. ಸ್ಥಳೀಯ ಎಂ ಇ ಎಸ್‌ ಕಾಲೇಜಿನಲ್ಲಿ ಬಿ.ಎ. ದ್ವಿತೀಯ ವರ್ಷದ ವಿದ್ಯಾರ್ಥಿನಿ. ಕಳೆದ 12 ವರ್ಷಗಳಿಂದ ಭರತನಾಟ್ಯವನ್ನು ಗುರು ಸೀಮಾ ಭಾಗ್ವತ ಮತ್ತು ದೀಪಾ ಭಾಗ್ವತ ಇವರಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದು, ಕರ್ನಾಟಕ ಸಂಗೀತವನ್ನೂ ಕಲಿಯುತ್ತಿದ್ದಾಳೆ. ಜೂನಿಯರ್‌ ಮತ್ತು ಸೀನಿಯರ್‌ ಪರೀಕ್ಷೆ ಮುಗಿಸಿ ಈಗ ವಿದ್ವತ್‌ ತಯಾರಿ ನಡೆಸಿದ್ದಾಳೆ. ರಂಗಪ್ರವೇಶದ ಕಾರ್ಯಕ್ರಮದಲ್ಲಿ ಭರತನಾಟ್ಯ ನೃತ್ಯ ಬಂಧಗಳಾದ ಪುಷ್ಪಾಂಜಲಿ, ಗಣೇಶ ಸ್ತುತಿ, ಅಲಾರಿಪು, ಶಿವಸ್ತುತಿ, ವರ್ಣಂ, ದೇವರನಾಮ, ಜಾವಳಿ, ಬಸವೇಶ್ವರ
Vijaya Karnataka Web bharatanatyam debut tomorrow
ಭರತನಾಟ್ಯ ರಂಗಪ್ರವೇಶ ನಾಳೆ


ವಚನ ಸಾಹಿತ್ಯ, ಮತ್ತು ತಿಲ್ಲಾನ ವನ್ನು ಸೌಭಾಗ್ಯ ಹಂದ್ರಾಳ ಪ್ರದರ್ಶಿಸಲಿದ್ದಾಳೆ. ಹಿಮ್ಮೇಳದಲ್ಲಿ ನಟುವಾಂಗ ಗುರು ಸೀಮಾ ಭಾಗ್ವತ ಮತ್ತು ದೀಪಾ ಭಾಗ್ವತ, ಹಾಡುಗಾರಿಕೆ ಡಿ.ಎಸ್‌. ಶ್ರೀವತ್ಸ ಬೆಂಗಳೂರು ಪಾಲ್ಗೊಳ್ಳುವರು.

ಬೆಂಗಳೂರಿನಿಂದ ಆಗಮಿಸುವ ಕಲಾವಿದರ ತಂಡದಲ್ಲಿ ಮೃದಂಗ ವಿ. ಶ್ರೀಹರಿ ರಂಗಸ್ವಾಮಿ, ಕೊಳಲು ವಿ. ದೀಪಕ್‌ ಹೆಬ್ಬಾರ, ವೈಲಿನ್‌ ವಿ. ಮಧುಸೂದನ, ರಿದಂಪ್ಯಾಡ್‌ ವಿ.ಕಾರ್ತಿಕ್‌ ದಾತಾರ ಸಾಥ್‌ ನೀಡುವರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ