ಆ್ಯಪ್ನಗರ

ಪೋಪ್‌ ಫ್ರಾನ್ಸಿಸ್‌ಗೆ ಭಟ್ಕಳ ಕಲಾಕೃತಿ ಕಾಣಿಕೆ

ಭಟ್ಕಳ: ತಾಲೂಕಿನ ಬೆಂಗ್ರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಕೆಲವು ದಶಕಗಳಿಂದ ಅಸ್ತಿತ್ವದಲ್ಲಿಇರುವ ನಾಡಿನ ಪ್ರಸಿದ್ಧ ಕರಕುಶಲ ವಸ್ತುಗಳ 'ಉಸಿರಾ ಇಂಡಸ್ಟ್ರೀ' ಉತ್ಪನ್ನಗಳು ಇದೀಗ ಇಟಲಿಯ ರೋಮ್‌ ನಗರದ ವ್ಯಾಟಿಕನ್‌ ಮ್ಯೂಸಿಯಂ ಸೇರಲಿವೆ.

Vijaya Karnataka 16 Nov 2019, 5:00 am
ಭಟ್ಕಳ: ತಾಲೂಕಿನ ಬೆಂಗ್ರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಕೆಲವು ದಶಕಗಳಿಂದ ಅಸ್ತಿತ್ವದಲ್ಲಿಇರುವ ನಾಡಿನ ಪ್ರಸಿದ್ಧ ಕರಕುಶಲ ವಸ್ತುಗಳ 'ಉಸಿರಾ ಇಂಡಸ್ಟ್ರೀ' ಉತ್ಪನ್ನಗಳು ಇದೀಗ ಇಟಲಿಯ ರೋಮ್‌ ನಗರದ ವ್ಯಾಟಿಕನ್‌ ಮ್ಯೂಸಿಯಂ ಸೇರಲಿವೆ.
Vijaya Karnataka Web bhatts artwork tribute to pope francis
ಪೋಪ್‌ ಫ್ರಾನ್ಸಿಸ್‌ಗೆ ಭಟ್ಕಳ ಕಲಾಕೃತಿ ಕಾಣಿಕೆ


ಇತ್ತೀಚಿಗೆ ವ್ಯಾಟಿಕನ್‌ ಸಿಟಿಯಲ್ಲಿವಿಶ್ವದ ಕ್ಯಾಥೋಲಿಕ್‌ ಚರ್ಚ್ಗಳ ಪರಮೋಚ್ಛ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ಅಧ್ಯಕ್ಷತೆಯಲ್ಲಿನಡೆದ ಭಾರತದ ಬಿಷಪ್‌ಗಳ ಮಹಾಸಭೆಯಲ್ಲಿಕಲಾಕೃತಿಗಳನ್ನು ಅರ್ಪಿಸಲಾಯಿತು.

'ಉಸಿರಾ' ಮಾಲಕ ಎಂ.ಡಿ.ಮ್ಯಾಥ್ಯೂ ತಯಾರಿಸಿದ ಲಾವಂಚದ ಹಾರ ಮತ್ತು ಲಾವಂಚದ ದಿವ್ಯ ಸಂಸ್ಕಾರದ ಕಲಾಕೃತಿಯನ್ನು ಬೆಳ್ತಂಗಡಿಯ ಬಿಷಪ್‌ ಲಾರೆನ್ಸ್‌ ಮೂಲಕ ಧರ್ಮಗುರು ಫ್ರಾನ್ಸಿಸ್‌ ಇವರಿಗೆ ಗೌರವ ಪೂರ್ವಕ ಕಾಣಿಕೆಯಾಗಿ ಅರ್ಪಿಸಲಾಯಿತು.

ಈ ವೇಳೆ ಲಾವಂಚದ ಕರಕುಶಲ ವಸ್ತುಗಳನ್ನು ಮೆಚ್ಚಿಕೊಂಡ ಪೋಪ್‌ ಇವುಗಳನ್ನು ಪ್ರಸಿದ್ಧ ವ್ಯಾಟಿಕನ್‌ ಮ್ಯೂಸಿಯಂನಲ್ಲಿಪ್ರದರ್ಶನಕ್ಕೆ ಇಡಲಾಗುತ್ತದೆ ಎಂದು ತಿಳಿಸಿರುವುದಾಗಿ ಬಿಷಪ್‌ ಲಾರೆನ್ಸ್‌ ಮೂಲಕ ಮಾಹಿತಿ ಸಿಕ್ಕಿದೆ ಎಂದು ಎಂ.ಡಿ.ಮ್ಯಾಥ್ಯೂ ಪ್ರಕಟಣೆಯಲ್ಲಿತಿಳಿಸಿದ್ದಾರೆ. ಇದರೊಂದಿಗೆ ದೇಶಾದ್ಯಂತ ಗಮನ ಸೆಳೆದಿರುವ ಭಟ್ಕಳ 'ಉಸಿರಾ' ಕರಕುಶಲ ವಸ್ತುಗಳು ಜಗತ್ತಿನ ಮನ್ನಣೆಗೂ ಪಾತ್ರರಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ