ಆ್ಯಪ್ನಗರ

ಭೀಷ್ಮ ಪರ್ವ ಯಕ್ಷಗಾನ ತಾಳ ಮದ್ದಳೆ ಇಂದು

ಅಂಕೋಲಾ : ತಾಲೂಕಿನ ಅಡಿಗೋಣದ ಶ್ರೀ ಜಟಗದೇವ ಮಂದಿರದಲ್ಲಿಅ.27ರಂದು ರಾತ್ರಿ 10 ಗಂಟೆಗೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಅಡಿಗೋಣ ಊರ ನಾಗರಿಕರ ಸಂಘಟನೆಯ ಅಡಿಯಲ್ಲಿದಕ್ಷಿಣ ಕನ್ನಡೋತ್ತರ ಹೆಸರಾಂತ ಕಲಾವಿದರ ಮೇಳೈಸುವಿಕೆಯಲ್ಲಿ'ಭೀಷ್ಮ ಪರ್ವ' ಯಕ್ಷಗಾನ ತಾಳ ಮದ್ದಳೆಯು ನಡೆಯಲಿದೆ.

Vijaya Karnataka 27 Oct 2019, 5:00 am
ಅಂಕೋಲಾ : ತಾಲೂಕಿನ ಅಡಿಗೋಣದ ಶ್ರೀ ಜಟಗದೇವ ಮಂದಿರದಲ್ಲಿಅ.27ರಂದು ರಾತ್ರಿ 10 ಗಂಟೆಗೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಅಡಿಗೋಣ ಊರ ನಾಗರಿಕರ ಸಂಘಟನೆಯ ಅಡಿಯಲ್ಲಿದಕ್ಷಿಣ ಕನ್ನಡೋತ್ತರ ಹೆಸರಾಂತ ಕಲಾವಿದರ ಮೇಳೈಸುವಿಕೆಯಲ್ಲಿ'ಭೀಷ್ಮ ಪರ್ವ' ಯಕ್ಷಗಾನ ತಾಳ ಮದ್ದಳೆಯು ನಡೆಯಲಿದೆ.
Vijaya Karnataka Web bhishma parva yakshagana palm today
ಭೀಷ್ಮ ಪರ್ವ ಯಕ್ಷಗಾನ ತಾಳ ಮದ್ದಳೆ ಇಂದು


ಅಭಿನವ ಶಾರದೆ ಜಬ್ಬರ ಸಮೋ, ಬಹುಭಾಷಾ ವಿಷಾರದ ಮಂಜುನಾಥ ಗಾಂವಕರ್‌ ಬರ್ಗಿ, ಉದಯೋನ್ಮುಖ ಪ್ರತಿಭೆ ಪ್ರೊ.ಪ್ರಸಾದ ಪೂಜಾರಿ ಭಟ್ಕಳ ಹಾಗೂ ಹಿರಿಯ ಕಲಾವಿದ ಅಡಿಗೋಣ ಬೀರಣ್ಣ ಮಾಸ್ತರ ತಮ್ಮ ಅಮೋಘ ವಾಕ್ಪಟುತ್ವದಿಂದ ಪ್ರೇಕ್ಷಕರನ್ನು ಮನಸೂರೆಗೊಳಿಸುವರು. ಕರಾವಳಿ ಕೋಗಿಲೆ ಶಂಕರ ಭಟ್ಟ ಬ್ರಹ್ಮೂರ ನೇತೃತ್ವದ ಹಿಮ್ಮೇಳವು ಸಾತ್‌ ನೀಡಲಿದೆ. ಇದೇ ವೇಳೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕಾರವಾರದ ವತಿಯಿಂದ ಅಡಿಗೋಣ ಬೀರಣ್ಣ ಮಾಸ್ತರರವರಿಗೆ ಯಕ್ಷರಂಗ ಭೂಮಿಗೆ ಸಲ್ಲಿಸಿದ ಅವೀಸ್ಮರಣೀಯ ಸೇವೆಗಾಗಿ 'ರಂಗ ಪ್ರಕಾಶ ಪುರಸ್ಕಾರ' ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಪ್ರಕಾಶ ನಾಯಕ ಬೆಳಸೆ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ