ಆ್ಯಪ್ನಗರ

ಬೈಕ್‌-ಟಿಪ್ಪರ್‌ ಡಿಕ್ಕಿ: ಯುವಕ ಸಾವು

ಸಿದ್ದಾಪುರ : ಶಿರಸಿ-ಸಿದ್ದಾಪುರ ರಸ್ತೆಯ ಕಾಳೇನಹಳ್ಳಿ ಸಮೀಪ ಬುಧವಾರ ಬೆಳಗ್ಗೆ ನಡೆದ ಬೈಕ್‌-ಟಿಪ್ಪರ್‌ ಡಿಕ್ಕಿಯಲ್ಲಿ ಯುವಕನೊಬ್ಬ ಸ್ಥಳದಲ್ಲೇ ಅಸುನೀಗಿದ್ದಾರೆ.

Vijaya Karnataka 28 Feb 2019, 5:00 am
ಸಿದ್ದಾಪುರ : ಶಿರಸಿ-ಸಿದ್ದಾಪುರ ರಸ್ತೆಯ ಕಾಳೇನಹಳ್ಳಿ ಸಮೀಪ ಬುಧವಾರ ಬೆಳಗ್ಗೆ ನಡೆದ ಬೈಕ್‌-ಟಿಪ್ಪರ್‌ ಡಿಕ್ಕಿಯಲ್ಲಿ ಯುವಕನೊಬ್ಬ ಸ್ಥಳದಲ್ಲೇ ಅಸುನೀಗಿದ್ದಾರೆ.
Vijaya Karnataka Web bike tipper crash young man dies
ಬೈಕ್‌-ಟಿಪ್ಪರ್‌ ಡಿಕ್ಕಿ: ಯುವಕ ಸಾವು


ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ಸಹಶಿಕ್ಷ ಕ ಉಲ್ಲಾಸ ಬೈಲೂರು(32) ಸಾವಿಗೀಡಾದ ವ್ಯಕ್ತಿ. ಶಿರಸಿಯಿಂದ ಬರುತ್ತಿದ್ದ ಉಲ್ಲಾಸ ಅವರ ಬೈಕ್‌ಗೆ ಸಿದ್ದಾಪುರ ಕಡೆಯಿಂದ ಮರಳು ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್‌ ಡಿಕ್ಕಿ ಹೊಡೆದ ರಭಸಕ್ಕೆ ದೇಹ ಛಿದ್ರವಾಗಿದೆ. ವಸತಿ ನಿಲಯದ ಶಿಕ್ಷ ಕರಾಗಿ ಉತ್ತಮ ಕೆಲಸ ನಿರ್ವಹಿಸುತ್ತಿದ್ದ ಇವರು ಉತ್ತಮ ವಾಗ್ಮಿ, ಸಾಮಾಜಿಕ ಚಟುವಟಿಕೆಯಲ್ಲಿ ಮಂಚೂಣಿಯಲ್ಲಿ ಇದ್ದರು.

ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಎಸ್‌ಐ ದತ್ತಾತ್ರೇಯ ನಾಯ್ಕ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್‌ರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ