ಆ್ಯಪ್ನಗರ

ರಕ್ತದಾನದಿಂದ ಇತರರ ಜೀವ ಉಳಿಸಲು ಸಾಧ್ಯ

ಯಲ್ಲಾಪುರ: ಒಂದು ಹನಿ ರಕ್ತ ಇತರರಿಗೆ ಜೀವದಾನ ನೀಡಲು ನೆರವಾಗುವುದು ಎಂದು ಸಿಪಿಐ ಡಾ.ಮಂಜುನಾಥ ನಾಯಕ ಹೇಳಿದರು. ದರ್ಪಣ ಸೇವಾ ಸಂಸ್ಥೆ, ಲಯನ್ಸ್‌ ಕ್ಲಬ್‌ ಇವರ ಆಶ್ರಯದಲ್ಲಿಟಿ.ಎಸ್‌.ಎಸ್‌ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬ್ಲಡ್‌ ಬ್ಯಾಂಕ್‌ ಶಿರಸಿ ಇವರ ಸಹಕಾರದಲ್ಲಿಪಟ್ಟಣದ ಗಾಂಧಿ ಕುಟೀರದಲ್ಲಿಏರ್ಪಡಿಸಿದ್ದ ಬೃಹತ್‌ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜಕ್ಕೆ ಪ್ರತಿಯೊಬ್ಬ ಕೊಡುಗೆ ನೀಡುವ ಮೂಲಕ ಸಮಾಜ ಜೀವಿಯಾಗಿ ಬಾಳಬೇಕು ಎಂದರು. ನಮ್ಮ ಪ್ರಾಮಾಣಿಕ ಚಟುವಟಿಕೆಯ ಮೂಲಕ ಸಮಾಜದ ಋುಣ ತೀರಿಸಲು ಪ್ರತಿಯೊಬ್ಬರೂ ಮುಂದಾಗಬೇಕು. ಒಳ್ಳೆಯ ಕಾರ್ಯದಲ್ಲಿಇತರರು ಕೈಜೋಡಿಸಬೇಕು ಎಂದರು. ಡಾ.ಪಿ.ಎಸ್‌.ಹೆಗಡೆ ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು.

Vijaya Karnataka 25 Sep 2019, 5:00 am
ಯಲ್ಲಾಪುರ: ಒಂದು ಹನಿ ರಕ್ತ ಇತರರಿಗೆ ಜೀವದಾನ ನೀಡಲು ನೆರವಾಗುವುದು ಎಂದು ಸಿಪಿಐ ಡಾ.ಮಂಜುನಾಥ ನಾಯಕ ಹೇಳಿದರು. ದರ್ಪಣ ಸೇವಾ ಸಂಸ್ಥೆ, ಲಯನ್ಸ್‌ ಕ್ಲಬ್‌ ಇವರ ಆಶ್ರಯದಲ್ಲಿಟಿ.ಎಸ್‌.ಎಸ್‌ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬ್ಲಡ್‌ ಬ್ಯಾಂಕ್‌ ಶಿರಸಿ ಇವರ ಸಹಕಾರದಲ್ಲಿಪಟ್ಟಣದ ಗಾಂಧಿ ಕುಟೀರದಲ್ಲಿಏರ್ಪಡಿಸಿದ್ದ ಬೃಹತ್‌ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜಕ್ಕೆ ಪ್ರತಿಯೊಬ್ಬ ಕೊಡುಗೆ ನೀಡುವ ಮೂಲಕ ಸಮಾಜ ಜೀವಿಯಾಗಿ ಬಾಳಬೇಕು ಎಂದರು. ನಮ್ಮ ಪ್ರಾಮಾಣಿಕ ಚಟುವಟಿಕೆಯ ಮೂಲಕ ಸಮಾಜದ ಋುಣ ತೀರಿಸಲು ಪ್ರತಿಯೊಬ್ಬರೂ ಮುಂದಾಗಬೇಕು. ಒಳ್ಳೆಯ ಕಾರ್ಯದಲ್ಲಿಇತರರು ಕೈಜೋಡಿಸಬೇಕು ಎಂದರು. ಡಾ.ಪಿ.ಎಸ್‌.ಹೆಗಡೆ ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು.
Vijaya Karnataka Web blood donation can save others lives
ರಕ್ತದಾನದಿಂದ ಇತರರ ಜೀವ ಉಳಿಸಲು ಸಾಧ್ಯ


ತಾಪಂ ಅಧ್ಯಕ್ಷೆ ಭವ್ಯಾ ಶೆಟ್ಟಿ ಅಧ್ಯಕ್ಷತೆ ವಹಿಸಿ, ಇಂತಹ ಶ್ರೇಷ್ಠ ಕಾರ್ಯದಲ್ಲಿನಮ್ಮನ್ನು ತೊಡಗಿಸಿಕೊಳ್ಳೋಣ ಎಂದರು. ಲಯನ್ಸ್‌ ಕ್ಲಬ್‌ ಅಧ್ಯಕ್ಷ ನಾಗರಾಜ ನಾಯಕ, ಕಾರ್ಯದರ್ಶಿ ಶ್ರೀಧರ ಶೆಟ್ಟಿ, ನರಸಿಂಹ ಸಾತೊಡ್ಡಿ ಇತರರು ಉಪಸ್ಥಿತರಿದ್ದರು. ಕವಿತಾ ಹೆಬ್ಬಾರ್‌ ಸ್ವಾಗತಿಸಿದರು. ಪ್ರತಿಮಾ ಕೋಮಾರ ನಿರ್ವಹಿಸಿದರು. ಲಯನ್ಸ್‌ ಕ್ಲಬ್‌ ಸದಸ್ಯ ಶಾಂತಾರಾಮ ಹೆಗಡೆ ವಂದಿಸಿದರು. ಶಿಬಿರದಲ್ಲಿ80 ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ