ಆ್ಯಪ್ನಗರ

ರಕ್ತದಾನದಿಂದ ದೇವರ ಪ್ರೀತಿ ಗಳಿಸಲು ಸುಲಭ ಮಾರ್ಗ

ಹಿರೇಕೆರೂರು: ರಕ್ತದಾನದಿಂದ ದೇವರ ಪ್ರೀತಿ ಗಳಿಸಲು ಸುಲಭ ಮಾರ್ಗವಾಗಿದೆ. ಆದ್ದರಿಂದ ಕೊರೊನಾ ಆರೋಗ್ಯ ತುರ್ತು ಪರಿಸ್ಥಿತಿ ಇರುವ ಈ ಸಂದರ್ಭದಲ್ಲಿಯುವಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ಇನ್ನೊಂದು ಜೀವ ಉಳಿಸಿದ ಮಹಾತ್ಮರು ನೀವಾಗಿ ಎಂದು ಕೃಷಿ ಸಚಿವ

Vijaya Karnataka 5 May 2020, 5:00 am
ಹಿರೇಕೆರೂರು: ರಕ್ತದಾನದಿಂದ ದೇವರ ಪ್ರೀತಿ ಗಳಿಸಲು ಸುಲಭ ಮಾರ್ಗವಾಗಿದೆ. ಆದ್ದರಿಂದ ಕೊರೊನಾ ಆರೋಗ್ಯ ತುರ್ತು ಪರಿಸ್ಥಿತಿ ಇರುವ ಈ ಸಂದರ್ಭದಲ್ಲಿಯುವಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ಇನ್ನೊಂದು ಜೀವ ಉಳಿಸಿದ ಮಹಾತ್ಮರು ನೀವಾಗಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಯುವಕರಿಗೆ ಸಲಹೆ ನೀಡಿದರು.
Vijaya Karnataka Web blood donation is the easiest way to earn gods love
ರಕ್ತದಾನದಿಂದ ದೇವರ ಪ್ರೀತಿ ಗಳಿಸಲು ಸುಲಭ ಮಾರ್ಗ


ಶನಿವಾರ ತಾಲೂಕಿನ ಚಿಕ್ಕೇರೂರ ಗ್ರಾಮದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭೆ, ಆರ್ಯವೈಶ್ಯ ಮಂಡಳಿ, ಕೇಸರಿ ಪಡೆ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಗ್ರಾಮ ಪಂಚಾಯಿತಿ, ವಿಶ್ವ ಹಿಂದು ಪರಿಷತ್‌, ಜೆಸಿಐ ಚಿಕ್ಕೇರೂರು ಬನಶಂಕರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ರಾಣೇಬೆನ್ನೂರ ಬ್ಲಡ್‌ ಬ್ಯಾಂಕ್‌ ಇವರ ಆಶ್ರಯದಲ್ಲಿವಾಸವಿ ಸಪ್ತಾಹ ಅಂಗವಾಗಿ ಏರ್ಪಡಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಟಿಎಪಿಸಿಎಂಎಸ್‌ ಅಧ್ಯಕ್ಷ ಎಸ್‌.ಎಸ್‌.ಪಾಟೀಲ್‌, ದೊಡ್ಡಗೌಡ ಪಾಟೀಲ್‌, ಗದಿಗೇಶ ಬಣಕಾರ, ಸತ್ಯನಾರಾಯಣ ಶೆಟ್ಟರ, ಪ್ರಶಾಂತ ಗುತ್ತಲ, ಪವನ್‌ ಮುಗಳಗೇರಿ, ರಾಜಶೇಖರಯ್ಯ ಬಸರೀಹಳ್ಳಿಮಠ, ಸೋಮಶೇಖರಪ್ಪ ಎಣ್ಣಿ, ನಾಗರಾಜ ಹೊಳಲಕೇರಿ, ವಿರೂಪಾಕ್ಷಪ್ಪ ದಂದೂರ, ರೇಣುಕಾರಾಧ್ಯ ಹಿರೇಮಠ, ಅರವಿಂದ ಬಳಿಗಾರ, ಕೋನರಾಜ ಶೆಟ್ಟರ, ಮಲ್ಲಿಕಾರ್ಜುನ ಸಿದ್ದಗಂಗಾ, ಲಕ್ಷತ್ರ್ಮಣ ಯತ್ತಿನಹಳ್ಳಿ, ಬಸವರಾಜ ಕೋರಿಶೆಟ್ಟರ, ಕೇಶವಮೂರ್ತಿ ಚನ್ನಗಿರಿ, ಮಂಜುನಾಥ ಶೇಠ್‌, ನವೀನಕುಮಾರ ಶೆಟ್ಟರ್‌ ಉಪಸ್ಥಿತರಿದ್ದರು. 56ಕ್ಕೂ ಹೆಚ್ಚು ಯುವಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ