ಆ್ಯಪ್ನಗರ

ದೋಣಿ ಮುಗುಚಿ ಮೀನುಗಾರ ಸಾವು

ಹೊನ್ನಾವರ: ತಾಲೂಕಿನ ಪಾವಿನಕುರ್ವಾ ಸಮುದ್ರದಲ್ಲಿ ದೋಣಿ ಮಗುಚಿ ಬಿದ್ದು ಮೀನು ಹಿಡಿಯಲು ಹೋದ ಮೀನುಗಾರ ಮೃತ ಪಟ್ಟಿದ್ದಾರೆ.

Vijaya Karnataka 19 Aug 2019, 5:00 am
ಹೊನ್ನಾವರ: ತಾಲೂಕಿನ ಪಾವಿನಕುರ್ವಾ ಸಮುದ್ರದಲ್ಲಿ ದೋಣಿ ಮಗುಚಿ ಬಿದ್ದು ಮೀನು ಹಿಡಿಯಲು ಹೋದ ಮೀನುಗಾರ ಮೃತ ಪಟ್ಟಿದ್ದಾರೆ.
Vijaya Karnataka Web boat fisherman dies
ದೋಣಿ ಮುಗುಚಿ ಮೀನುಗಾರ ಸಾವು


ಕಾಸರಕೋಡ ಟೊಂಕಾದ ಮಹ್ಮದ ತನ್ವೀರ್‍ ಅಯೂಬ್‌ ಬುಡ್ಡೆ (30) ಮೃತ ವ್ಯಕ್ತಿ. ಇವರು ಅಲ್ತಾಫ್‌ ಹುಸೇನ್‌ ಶೇಖ( 24) ಎಂಬುವವರ ಜತೆ ಶನಿವಾರ ಮೀನು ಹಿಡಿಯಲು ಸಣ್ಣ ದೋಣಿಯಲ್ಲಿ ಸಮುದ್ರಕ್ಕೆ ಹೋಗಿದ್ದರು. ಅಲ್ತಾಫ್‌ ಹುಸೇನ್‌ ಶೇಖ ಈಜಿ ಪಾರಾಗಿದ್ದಾರೆ.

ದೋಣಿ ಮಗುಚಿ ಮಹ್ಮದ ತನ್ವೀರ್‍ ಸಮುದ್ರದಲ್ಲಿ ಮುಳುಗಿ ಕಾಣೆಯಾದಾಗ ಪೊಲೀಸರು ಹಾಗೂ ಮೀನುಗಾರರು ಸೇರಿ ಹುಡುಕಾಟ ನಡೆಸಿದ್ದು, ರವಿವಾರ ಮೃತದೇಹ ಪತ್ತೆಯಾಗಿದೆ. ಘಟನೆಯ ಕುರಿತು ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ